<strong>POWER SAMACHARA | KANNADA NEWS | BREKING NEWS| 11-06-2023</strong> <h3><strong>ದಾವಣಗೆರೆ :</strong> ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭ ಆಗಿದೆ, ಆದ್ರೆ ಯಾಕೆ ಸರ್ಕಾರ ಕಂಡಿಷನ್ ಗಳನ್ನ ಹಾಕ್ತಿದ್ದಾರೋ ಗೊತ್ತಾಗಲಿಲ್ಲ ಎಂದು ದಾವಣಗೆರೆಯಲ್ಲಿ ಸರ್ಕಾರದ ವಿರುದ್ದ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಕಿಡಿಕಾರಿದ್ದಾರೆ..</h3> <img class="aligncenter wp-image-1508 size-full" src="https://powersamachara.com/wp-content/uploads/2023/06/shamanur-shivashankarappa.jpg" alt="" width="860" height="573" /> <h3>ದಾವಣಗೆರೆ ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆಯರು, ಪುರುಷರು ಅಂತಾ ನೋಡಿದ್ರೆ ಎಲ್ಲರಿಗೂ ಗೊತ್ತಾಗುತ್ತೆ, ಆ ಚೀಟಿ ತೋರಿಸಿ ಈ ಚೀಟಿ ತೋರಿಸಿ ಅಂತಾ ಕಂಡಿಶನ್ ಹಾಕಿದ್ದಾರೆ, ಬೇರೆ ಗ್ಯಾರಂಟಿಗೂ ಕಂಡಿಷನ್ ಹಾಕ್ತಾ ಇದ್ದಾರೆ, ಯಾಕೆ ಇಷ್ಟೊಂದು ಕಂಡಿಷನ್ ಹಾಕ್ತಾ ಇದ್ದಾರೆ ಗೊತ್ತಾಗುತ್ತಿಲ್ಲ, ಇಷ್ಟೊಂದು ಕಂಡಿಷನ್ ಹಾಕೋದು ಸರಿಯಲ್ಲ, ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ..</h3> <h3><img class="aligncenter wp-image-1509 size-full" src="https://powersamachara.com/wp-content/uploads/2023/06/shakthi-yojane.jpg" alt="" width="860" height="573" /></h3> <h3>ಹಳ್ಳಿ ಗಾಡಿನಲ್ಲಿ ಬಸ್ ಸೌಕರ್ಯ ಕಲ್ಪಿಸಬೇಕಿದೆ, ಹಳ್ಳಿಗರು ಸರ್ಕಾರದ ಸೌಲಭ್ಯ ಪಡೆಯಬೇಕು, ಮಹಿಳೆಯರಿಗೆ ಮೀಸಲಾತಿ ತಂದಿದ್ದು ನಾವು, ನಮ್ಮ ಸರ್ಕಾರ ಮಹಿಳಾ ಸಬಲೀಕರಣದತ್ತ ಹೆಜ್ಜೆ ಇಡುತ್ತಿದೆ ಎಂದು ತಿಳಿಸಿದರು..</h3>