POWER SAMACHARA | KANNADA NEWS | BREKING NEWS| 23-04-2025
ದಾವಣಗೆರೆ: ಕಾಶ್ಮೀರ ಪಹಲ್ಗಾಂವ್ ನಲ್ಲಿ 28 ಜನ ಹತ್ಯೆಯಾಗಿದ್ದಾರೆ, ಇವರ ಪುಣ್ಯ ತಿಥಿ ಆಗೋದ್ರೊಳಗೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಆಗುತ್ತೆ, ನರೇಂದ್ರ ಮೋದಿ ಯಾವುದನ್ನೂ ಬಾಕಿ ಇಟ್ಟುಕೊಳ್ಳಲ್ಲ, ನೂರಕ್ಕೆ ನೂರು ಉಗ್ರರ ಉಡೀಸ್ ಆಗುತ್ತದೆ ಎಂದು ದಾವಣಗೆರೆಯ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಹಿಂದೂ ಹುಲಿ ಬಸವನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ..
ಅರೆಸ್ಟ್ ಸಮನ್ಸ್ ಎಲ್ಲಾ ನಡೆಯೋದಿಲ್ಲ, ಓನ್ಲಿ ಎನ್ ಕೌಂಟರ್ ಒಂದೇ ಮದ್ದಾಗಿದೆ, ಹತ್ತು ವರ್ಷ ಕಾಶ್ಮೀರ ಕಣಿವೆಯಲ್ಲಿ ಶಾಂತಿ ಇತ್ತು, ಭಯೋತ್ಪಾದಕರು ಕಾಶ್ಮೀರವನ್ನು ವಿಮೋಚನೆ ಮಾಡುವ ಹುಚ್ಚು ಸಾಹಸ ಮಾಡಿದ್ದಾರೆ, ಮನಮೋಹನ್ ಸಿಂಗ್ ಹಾಗೂ ಹಿಂದಿನವರ ಕೈಲಿ ನಿಯಂತ್ರಣ ಇರಲಿಲ್ಲ, ಆರ್ಟಿಕಲ್ 370 ಬಳಿಕ ಈಗ ಶಾಂತಿ ಇತ್ತು, ಪ್ರವಾಸೋದ್ಯಮ ನಡೀತಾ ಇತ್ತು, ಇದನ್ನ ಭಯೋತ್ಪಾದಕ ಗುಂಪಿಗೆ ಸಹಿಸೋಕೆ ಆಗಲಿಲ್ಲ, ಈ ಹಿನ್ನಲೆ 28 ಜನರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಕಿಡಿಕಾರಿದರು.
ಇಸ್ಲಾಂ ಮುಲ್ಲಾಗಳು, ಛೇಲಾಗಳು ಭದ್ರತಾ ವೈಫಲ್ಯ ಅಂತಿದಾರೆ, ಷ.. ಜಾತ್ಯಾತೀತರು ಖಂಡನೆ ಮಾಡುವ ಬದಲು ಭದ್ರತಾ ವೈಫಲ್ಯ ಅಂತಿದಾರೆ, ಉಗ್ರವಾದಿಗಳನ್ನ ಅಲ್ಲಲ್ಲೇ ಗುಂಡಿಕ್ಕಿ ಕೊಲ್ಲಬೇಕು, ಅರೆಸ್ಟ್ ಮಾಡಿ ವರ್ಷಗಟ್ಟಲೇ ಬಿರಿಯಾನಿ ಕೊಡಿಸೋದು ಬೇಡ, ನೇರವಾಗಿ ಎನ್ ಕೌಂಟರ್ ಮಾಡಬೇಕು ಎಂದರು. ಕೆಲ ಸ್ವಾಮಿಜಿಗಳು ಇಸ್ಲಾಂ ಲಿಂಗಾಯಿತ ಸಾಮ್ಯತೆ ಇದೆ ಅಂತಾರೆ, ಈ ನಾಲಾಯಕ ಸ್ವಾಮಿಜಿಗಳು ಈಗ ಮಾತನಾಡಲಿ, ಕಾವಿ ಬದಲು ಹಸಿರು ಬಟ್ಟೆ ಹಾಕಿಕೊಳ್ಳಲಿ, ಹಿಂದೂಗಳಿಗೆ ಇಂತಹ ದಾರಿ ತಪ್ಪಿಸುವ ವಚನ ಹೇಳಬೇಡಿ, ಮೇಣ ಬತ್ತಿ ಶಾಂತಿಮಂತ್ರ ನಡೆಯೋದೆ ಇಲ್ಲ, ಎನ್ ಕೌಂಟರ್ ಮಾಡಿ ಹೊಡಿಬೇಕು ಎಂದು ಹೇಳಿದರು.
ಚಡ್ಡಿ ಬಿಚ್ಚಿ ಆಧಾರ ಕಾರ್ಡ್ ನೋಡಿ ಶೂಟ್ ಮಾಡಿದ್ದಾರೆ, ಇದನ್ನ ಯಾವೊಬ್ಬ ಮುಸ್ಲಿಂ ಲೀಡರ್ ಖಂಡಿಸೋದಿಲ್ಲ, ಆದ್ರೆ ನಮ್ಮವರೇ ವಿರುದ್ದ ಮಾತಾಡುತ್ತಾರೆ, ಧರ್ಮಾಂದತೆ ಹೆಚ್ಚು ಮಾಡಿದ್ದರಿಂದ ಈ ರೀತಿ ಆಗಿದೆ ಎಂದು ಸಂಜಯ್ ರಾವತ್ ಹೇಳಿದ್ದಾನೆ, ಇವನು ಔರಂಗಜೇಬ್ ಹುಟ್ಟಿದಂಗೆ ಆಗಿದೆ ಎಂದರು
ರಾಜ್ಯದಲ್ಲಿ ಜಾತಿ ಸಂಘರ್ಷ ಮಾಡುತ್ತಾ ಇದ್ದಾರೆ, ಜಾತಿ ಗಣತಿಯಲ್ಲಿ ಮುಸ್ಲಿಂಗೆ ಒಂದನೇ ಸ್ಥಾನ ತೋರಿಸಿದ್ದಾರೆ ಲಿಂಗಾಯಿತ, ವೀರಶೈವ, ದಲಿತರನ್ನ ಒಡೆದಿದ್ದಾರೆ, ರಾಜ್ಯದಲ್ಲಿ ನಂ ೧ ಜಾತಿ ಎಂದರೆ ಅದು ದಲಿತರು ಬರುತ್ತಾರೆ, ಆದರೆ ಮುಸ್ಲಿಂ ಮೊದಲು ಎಂದು ತೋರಿಸಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದರು.