POWER SAMACHARA | KANNADA NEWS | BREKING NEWS| 21-04-2025
ದಾವಣಗೆರೆ: ರಾಜ್ಯ ಸರ್ಕಾರದ ಬೆಲೆ ಏರಿಕೆ ಬರೆ, ಹಗರಣಗಳ ಸರಮಾಲೆ ವಿರುದ್ದ ಸಮರ ಸಾರಿರುವ ರಾಜ್ಯ ಬಿಜೆಪಿ ರಾಜ್ಯಾಧ್ಯಂತ ಜನಾಕ್ರೋಶ ಯಾತ್ರೆ ಮಾಡ್ತಾ ಇದೆ, ಆದರೆ ಬೆಣ್ಣೆನಗರಿ ದಾವಣಗೆರೆಯಲ್ಲಿ ಜನಾಕ್ರೋಶ ಯಾತ್ರೆಯಲ್ಲಿ ಪ್ರಮುಖ ನಾಯಕರೇ ಗೈರಾಗಿದ್ದು ಜನಾಕ್ರೋಶದಲ್ಲಿ ಒಳಭೇಗುದಿ ಬಟಾ ಬಯಲಾಗ್ಬಿಟ್ಟಿದೆ.. ಈ ಕುರಿತ ಡಿಟೈಲ್ಸ್ ಇಲ್ಲಿದೆ ನೋಡಿ..
ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಸಮರ, ಬೆಲೆ ಏರಿಕೆ ವಿರುದ್ದ ಬಾರಿಕೋಲು ಚಳುವಳಿ, ಹೆಣ್ಮಕ್ಕಳಿಂದ ಪೊರಕೆ ಹೋರಾಟ, ಸಿಎಂ ವಿರುದ್ದ ಕೇಸರಿ ಕಲಿಗಳ ವಾಗ್ದಾಳಿ, ಬಿಜೆಪಿ ಪ್ರಮುಖ ನಾಯಕರೇ ಗೈರು.. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ಬೆಣ್ಣೆನಗರಿ ದಾವಣಗೆರೆಯಲ್ಲಿ.. ಹೌದು.. ಇಂದು ಬೆಣ್ಣೆನಗರಿ ದಾವಣಗೆರೆಯಲ್ಲಿ ಕೇಸರಿ ಕಲಿಗಳು ಸಮರ ಸಾರಿದ್ರು, ಬೆಲೆ ಏರಿಕೆ, ರಾಜ್ಯ ಸರ್ಕಾರದ ಹಗರಣಗಳ ವಿರುದ್ದ ಆಕ್ರೋಶ ಹೊರ ಹಾಕಿದ್ರು, ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಜಿಲ್ಲಾ ನಾಯಕರು ಜನಾಕ್ರೋಶ ಯಾತ್ರೆ ನಡೆಸಿದ್ರು, ಮಾಜಿ ಸಿಎಂ ಸದಾನಂದ ಗೌಡ, ವಿಧಾನಪರಿಷತ್ ವಿಪಕ್ಷ ನಾಯಕ ಛಲುವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ, ಪಿ ರಾಜೀವ್, ಎಂಪಿ ರೇಣುಕಾಚಾರ್ಯ ಸೇರಿದಂತೆ ಹಲವು ನಾಯಕರು ಭಾಗಿಯಾಗಿ ರಾಜ್ಯ ಸರ್ಕಾರದ ವಿರುದ್ದ ಬೆಂಕಿ ಉಗುಳಿದ್ರು. ಬಳಿಕ ಬಾರಿಕೋಲು, ಪೊರಕೆ ಹಿಡಿದು ಯಾತ್ರೆ ನಡೆಸಿ, ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ..
ಪ್ರಮುಖ ನಾಯಕರು ಗೈರು; ಒಂದಾಗದ ಕೇಸರಿ ಕಲಿಗಳು
ಕೇಂದ್ರದ ಮಾಜಿ ಸಚಿವ ಜಿಎಂ ಸಿದ್ದೇಶ್ವರ್, ಶಾಸಕ ಬಿಪಿ ಹರೀಶ್ ಗೈರು..
ಯೆಸ್ ಬಿಜೆಪಿ ಒಳಬೇಗುದಿ ಇನ್ನೂ ತಣ್ಣಗಾದಂತೆ ಕಾಣ್ತಾ ಇಲ್ಲ, ಯತ್ನಾಳ್ ಉಚ್ಚಾಟನೆ ಬಳಿಕ ಉಳಿದ ನಾಯಕರು ಎಚ್ಚೆತ್ತುಕೊಂಡು ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗ್ತಾರೆ ಅಂತಾ ಭಾವಿಸಲಾಗಿತ್ತು, ಆದರೆ ಅದ್ಯಾವುದು ಆಗಲೇ ಇಲ್ಲ, ದಾವಣಗೆರೆ ಜಿಲ್ಲೆಯ ಶಕ್ತಿ ಕೇಂದ್ರ ಅಂತಲೇ ಕರೆಸಿಕೊಳ್ಳುವ ಕೇಂದ್ರದ ಮಾಜಿ ಸಚಿವ, ಮಾಜಿ ಸಂಸದ ಜಿಎಂ ಸಿದ್ದೇಶ್ವರ್ ಅಂಡ್ ಟೀಂ ಜನಾಕ್ರೋಶ ಯಾತ್ರೆ ಬಳಿ ಹತ್ತಿರಕ್ಕೂ ಸುಳಿಯದೇ ಇರುವುದು ಬಿಜೆಪಿ ಬಡಿದಾಟ ಜಟಿಲವಾಗುವಂತೆ ಕಾಣ್ತಾ ಇದೆ, ಜಿಎಂ ಸಿದ್ದೇಶ್ವರ್ ಅಷ್ಟೆ ಅಲ್ಲದೇ ಹರಿಹರ ಶಾಸಕ ಬಿಪಿ ಹರೀಶ್, ಮಾಜಿ ಶಾಸಕರಾದ ಎಸ್ ವಿ ರಾಮಚಂದ್ರಪ್ಪ, ಪ್ರೋ. ಲಿಂಗಣ್ಣ, ಮಾಜಿ ಜಿಲ್ಲಾಧ್ಯಕ್ಷರು ಪದಾಧಿಕಾರಿಗಳು ಗೈರಾಗಿದ್ದು ಎದ್ದು ಕಾಣ್ತಾ ಇತ್ತು, ಇದರೊಂದಿಗೆ ಬಿಜೆಪಿಯಲ್ಲಿ ಯಾವುದು ತಣ್ಣಗಾಗಿಲ್ಲ ಎಂಬ ಅಂಶ ಪ್ರಚಾರ ಪಡೀತು. ಜೊತೆಗೆ ಫ್ಲೆಕ್ಸ್, ಬ್ಯಾನರ್ ಗಳಲ್ಲಿ ಯತ್ನಾಳ್ ಬಣದ ಜಿಎಂ ಸಿದ್ದೇಶ್ವರ್, ಬಿಪಿ ಹರೀಶ್ ಫೋಟೊವನ್ನ ರೇಣು ಅಂಡ್ ಟೀಂ ಎಲ್ಲಿಯೂ ಹಾಕದೇ ಇರುವುದು ಉರಿಯುವ ಬೆಂಕಿಗೆ ತುಪ್ಪ ಹಾಕಿದಂತಿತ್ತು.. ಇನ್ನೂ ಜನಾಕ್ರೋಶ ಯಾತ್ರೆಯಲ್ಲಿ ಜನ ಬಂದಿತ್ತಾದರು ಅಂತಾ ಹೇಳಿಕೊಳ್ಳುವಂತಾ ಜನರ ದಂಡು ಸೇರಿರಲಿಲ್ಲ ಎಂಬ ಮಾತುಗಳು ಕೇಳಿ ಬಂತು, ಇದನ್ನರಿತ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮುಂದಿನ ದಿನಗಳಲ್ಲಿ ಎಲ್ಲರು ಒಗ್ಗಟ್ಟಾಗುತ್ತೇವೆ, ಎಲ್ಲಾ ಜಿಲ್ಲೆಗಳಲ್ಲಿ ಒಂದೊಂದು ದಿನ ಉಳಿದುಕೊಂಡು ನಾಯಕರ ಸಮಸ್ಯೆಗಳನ್ನ ಸರಿಪಡಿಸಿ ಒಂದುಗೂಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.
ಒಟ್ಟಾರೆ ದಾವಣಗೆರೆಯಲ್ಲಿ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಜನಾಕ್ರೋಶ ಯಾತ್ರೆ ಮಾಡಿತ್ತಾದರು, ಬಿಜೆಪಿಯ ಪ್ರಮುಖ ನಾಯಕರೇ ಗೈರಾಗಿದ್ದು ಜಿಲ್ಲಾ ಬಿಜೆಪಿಯಲ್ಲಿ ಎಲ್ಲವು ಸರಿ ಇಲ್ಲ ಎಂಬುದು ಎದ್ದು ಕಾಣುತ್ತಿತ್ತು, , ಮೊದಲು ಬಿಜೆಪಿಯೊಳಗಿನ ಆಕ್ರೋಶ ಸರಿಪಡಿಸಿಕೊಂಡು ಬಳಿಕ ಜನಾಕ್ರೋಶ ಯಾತ್ರೆ ಮಾಡಲಿ ಎಂಬ ಮಾತುಗಳು ಕೇಳಿ ಬಂದಿದೆ..