POWER SAMACHARA | KANNADA NEWS | BREKING NEWS| 01-05-2025..
ದಾವಣಗೆರೆ : ಜಾತಿ ಗಣತಿ ವಿಚಾರವಾಗಿ ಕೇಂದ್ರ ಸರ್ಕಾರ ಬಹಳ ಹಿಂದೆ ಇದೆ, ಕೇಂದ್ರ ಸರ್ಕಾರ ಈಗ ನಿರ್ಧಾರ ಮಾಡಿದ್ದು ಸಿದ್ದರಾಮಯ್ಯನವರ ನೇತೃತ್ವದಲ್ಲಿ ಈಗಾಗಲೇ ಮಾಡಿ ಮುಗಿಸಿದ್ದಾರೆ ಎಂದು ದಾವಣಗೆರೆಯಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಹಕಾರಿ ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ.
ಜಾತಿ ಗಣತಿ ವರದಿಯನ್ನು ಸಚಿವ ಸಂಪುಟದ ಮುಂದೆ ಇಟ್ಟಾಗ ಯಾರೂ ಕೂಡ ವಿರೋಧ ಮಾಡ್ಲಿಲ್ಲ, ವರದಿಗೆ ವಿರುದ್ದವಾದ ಅಭಿಪ್ರಾಯ ಮಾಡ್ಲಿಲ್ಲ, ಯಾರಿಗೂ ಅನ್ಯಾಯವಾಗದಂತೆ ನೋಡಬೇಕು ಎಂದು ಹೇಳಿದ್ದರು, ಕೇಂದ್ರದ ನಿರ್ಣಯ ಏನ್ ಮಾಡಿದೆ ಅದಕ್ಕೆ ನಾವು ಸ್ವಾಗತ ಮಾಡುತ್ತೇವೆ, ರಾಜ್ಯದಲ್ಲಿ ಜಾತಿಗಣತಿ ಸ್ವಾರ್ಥಕ್ಕಾಗಿ, ಓಟ್ ಬ್ಯಾಂಕ್ ಗಾಗಿ ಮಾಡುತ್ತಿದ್ದಾರೆಂಬ ಬಿಜೆಪಿ ಹೇಳಿಕೆಗೆ ರಾಜಣ್ಣ ರಿಯಾಕ್ಷನ್ ಕೊಟ್ಟಿದ್ದಾರೆ, ಕೇಂದ್ರದವರು ಈಗ ಜಾತಿಗಣತಿ ಮಾಡಲು ಹೊರಟಿದ್ದಾರಲ್ಲ ಯಾವ ಸ್ವಾರ್ಥಕ್ಕಾಗಿ ಮಾಡಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮುಂದೆ ಬರಲು ಜಾತಿಗಣತಿ ಮಾಡಿದ್ದು, ಆದರೆ ಸ್ವಾರ್ಥಕ್ಕಾಗಿ ಓಟ್ ಬ್ಯಾಂಕ್ ಗಾಗಿ ಜಾತಿಗಣತಿ ಮಾಡಿದ್ದಾರೆ ಎಂದರೆ ನಾನು ಒಪ್ಪೋದಿಲ್ಲ ಎಂದಿದ್ದಾರೆ.
ವರದಿ ಕಳೆದೋಗಿದೆ ಎಂದರೆ ಬಿಜೆಪಿಯವರು ಹೋಗಿ ಹುಡುಕಿಕೊಂಡ ಬರೋದಕ್ಕೆ ಹೇಳಿ, ಕಳೆದುಹೋಗಿದೆ ಎಂದು ಸುಳ್ಳು ಹೇಳಿ ತಪ್ಪು ಸಂದೇಶ ನೀಡಿ ಗೊಂದಲಕ್ಕೆ ಒಳಪಡಿಸುವ ಕೆಲಸ ನಡೆಯುತ್ತಿದೆ, ಪಂಚಾಂಗ ಹೋಯ್ತು ಅಂದ್ರೆ ನಕ್ಷತ್ರ ಹೋಗಿ ಬಿಡುತ್ತಾ ಎನ್ನುವ ಗಾಧೆ ಇದೆ, ಅದೇ ರೀತಿ ವರದಿ ಹೋಗಿದೆ ಎಂದರೆ ವರದಿ ಪ್ರತಿಗಳು ಇರ್ತಾವೆ, ಈಗ ಜಾತಿಗಣತಿಯ 8 ಸಂಪುಟಗಳನ್ನು ಕೂಡ ಸಚಿವರುಗಳಿಗೆ ನೀಡಲಾಗಿದೆ, ಯಾವ ವರದಿ ಕೂಡ ಕಳೆದು ಹೋಗಿಲ್ಲ ಎತ್ತಿ ಇಟ್ಟಿಲ್ಲ ಎಲ್ಲಾವು ಇವೆ, ಜಯಪ್ರಕಾಶ್ ಹೆಗಡೆಯವರು ಅಪೂರ್ಣಗೊಂಡಿದ್ದ ವರದಿಯನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ನೀಡಿದ್ದಾರೆ ಎಂದರು.
ಸಿದ್ದರಾಮಯ್ಯ ನವರ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದವರ ಸ್ಥಿಮಿತತೆ ಸರಿ ಇಲ್ಲ, ಕಾಂಗ್ರೆಸ್ ಶಾಲು ಹಾಕಿಕೊಂಡು ನಮ್ಮ ಕಾರ್ಯಕ್ರಮದಲ್ಲಿ ಕೂತ್ಕೊಂಡು ಧಿಕ್ಕಾರ ಕೂಗಿದರೆ ಅವರನ್ನು ಹೇಡಿಗಳು ಎನ್ನಬೇಕು, ಪೊಲೀಸ್ ಅಧಿಕಾರಿ ಮೇಲೆ ಸಿದ್ದರಾಮಯ್ಯ ಕೈ ಎತ್ತಿಲ್ಲ, ಏಕವಚನದಲ್ಲಿ ಅವರು ಯಾರನ್ನು ಕರೆದಿಲ್ಲ, ಸಿದ್ದರಾಮಯ್ಯ ಪ್ರೀತಿಯಿಂದ ಕರೆದಿರುವುದು ಕೈ ಎತ್ತಿದ್ದಾರೆ, ಏಕವಚನದಲ್ಲಿ ಕರೆದಿದ್ದಾರೆ ಎನ್ನುವುದು ಮಾಧ್ಯಮಗಳ ಸೃಷ್ಟಿ, ಅವರ ಮಾತಿನ ಸ್ವಭಾವ ಹಾಗೇ ಇದೆ, ಅವರದು ಶ್ರೀಮಂತ ಹೃದಯ, ಬಡವರಿಗೆ ಸ್ಪಂಧಿಸುವ ಹೃದಯ ಸಿದ್ದರಾಮಯ್ಯನವರದ್ದು, ವಿರೋಧ ಪಕ್ಷಗಳಿಗೆ ಕೆಲಸ ಇಲ್ಲ ಚುನಾವಣೆಯಲ್ಲಿ ಸೋತಿದ್ದರಿಂದ ಈ ರೀತಿ ಮಾಡುತ್ತಿದ್ದಾರೆ, ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
- ಪ್ರಧಾನಿಗಳು ಕಾಣೆಯಾಗಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ, ಪ್ರಧಾನಿಗಳು ಇಲ್ಲೇ ಇದ್ದಾರಲ್ಲ ಅವರು ಎಲ್ಲಿಗೆ ಹೋಗಿದ್ದಾರೆ, ವಾಕ್ ಸ್ವಾತಂತ್ರ್ಯ ಇರೋದಿದ್ರ ಅವರ ಭಾವನೆ ವ್ಯಕ್ತಪಡಿಸುತ್ತಾರೆ, ಪೆಹಲ್ಗಾಮ್ ದಾಳಿಗೆ ಪ್ರತಿಕಾರದ ಬಗ್ಗೆ ರಾಜಣ್ಣ ಹೇಳಿಕೆ ನೀಡಿದ್ದು, ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೇ ಆಗಲೇ ಬೇಕು ಎನ್ನುವುದು ದೇಶದ ಜನರ ಭಾವನೆ, ನಾನು ಕೂಡ ದೇಶದ ಪ್ರಜೆಗಳಲ್ಲಿ ಒಬ್ಬ ನನ್ನ ಭಾವನೆ ಕೂಡ ಅದೇ ಇದೆ ಎಂದು ದಾವಣಗೆರೆಯಲ್ಲಿ ಸಹಕಾರ ಸಚಿವ ಕೆ ಎನ್ ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ..