Saturday, June 21, 2025
  • Home
  • ರಾಜ್ಯ
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಷ್ಟ್ರೀಯ ಸುದ್ದಿ
Power Samachara
  • Home
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಜ್ಯ
  • ರಾಷ್ಟ್ರೀಯ ಸುದ್ದಿ
  • Login
No Result
View All Result
Power Samachara
Home Home

‘ಉದೋ’ ದೇವಿ ಎಂದ ಭಕ್ತರು, ‘ದೋ’ ಎಂದು ಸುರಿದ ವರುಣದೇವ..! ಬೆಣ್ಣೆನಗರಿಯಲ್ಲಿ ಅಚ್ಚರಿ: ‘ಎಡೆಗೆ’ ಕರಗಿ ‘ಎಡಬಿಡದೇ’ ಸುರಿದ ಮಳೆರಾಯ..!

Power Samachara News by Power Samachara News
June 20, 2023
in Home
0
‘ಉದೋ’ ದೇವಿ ಎಂದ ಭಕ್ತರು, ‘ದೋ’ ಎಂದು ಸುರಿದ ವರುಣದೇವ..! ಬೆಣ್ಣೆನಗರಿಯಲ್ಲಿ ಅಚ್ಚರಿ: ‘ಎಡೆಗೆ’ ಕರಗಿ ‘ಎಡಬಿಡದೇ’ ಸುರಿದ ಮಳೆರಾಯ..!
0
SHARES
0
VIEWS
Share on WhatsappShare on FacebookShare on Twitter

POWER SAMACHARA | KANNADA NEWS | BREKING NEWS| 20-06-2023..

ದಾವಣಗೆರೆ: ಮುಂಗಾರು ಕೈ ಕೊಟ್ಟ ಹಿನ್ನಲೆ ರೈತನ ಬದುಕು‌ ಮುರಾಬಟ್ಟೆ ಆಗಿ ಹೋಗಿದೆ, ಕುಡಿಯುವ ನೀರಿಗೂ ಸಹ ಹಾಹಾಕಾರ ಎದುರಾಗುವ ಸಾಧ್ಯತೆ ಇದೆ, ಈಗಾಗಲೇ ಗೊಬ್ಬರ, ಬಿತ್ತನೆ ಬೀಜ ಖರೀದಿ ಮಾಡಿರುವ ಅನ್ನದಾತ ಭೂಮಿ ಹದ ಮಾಡುವ ಮುಖೇನಾ ಮಳೆರಾಯನಿಗಾಗಿ ಕಾದು ಕೂತಿದ್ದಾನೆ. ಬೆಣ್ಣೆನಗರಿ ದಾವಣಗೆರೆಯಲ್ಲಿ ಮಳೆಗಾಗಿ ನಗರ ದೇವತೆಗೆ ಎಡೆ ಹಾಕಿ ಪೂಜೆ ನಡೆಸಿ, ದೇವರ ಮೊರೆ ಹೋಗಿದ್ದಾರೆ.. ನಂಬಿಕೆಯಂತೆ ಮಳೆ ಬಂತಾ, ಇಲ್ವಾ ಅನ್ನೋದು ಮಾತ್ರ ಇಂಟರೆಸ್ಟಿಂಗ್..

ಹೌದು.. ಮಳೆಗಾಗಿ ಎಲ್ಲಾ ಪ್ರಾರ್ಥನೆ, ಬೇಡಿಕೆ, ಹರಕೆ ನಡೆದಿದ್ದು ದಾವಣಗೆರೆಯ ನಗರ ದೇವತೆ ದುಗ್ಗಮ್ಮ ದೇವಿಯ ಸನ್ನಿದಾನದಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನಲೆ ರೈತರು ಬೆಳೆ ಬೆಳೆಯದೇ ಮಳೆಗಾಗಿ ಆಕಾಶ ನೋಡುವ ಸ್ಥಿತಿಗೆ ತಲುಪಿದ್ದಾರೆ. ಮೋಡ ಕಟ್ಟದೇ, ಮಳೆ ಸುರಿಯದೇ ರೈತ ಕಂಗಾಲಾಗಿ ಹೋಗಿದ್ದಾನೆ, ಇದರಿಂದ ದಶಕಗಳ ಕಾಲದಿಂದ ನಡೆದುಕೊಂಡ ಸಂಪ್ರದಾಯದಂತೆ ದುಗ್ಗಮ್ಮ ದೇವಿಗೆ ಎಡೆ ಜಾತ್ರೆ ಮಾಡಿದ್ದು, ಇದರಿಂದ ಬೆಳಿಗ್ಗೆಯಿಂದ ಭಕ್ತಾದಿಗಳು ಶ್ರದ್ದಾ ಭಕ್ತಿಯಿಂದ ತಾಯಿಗೆ ಎಡೆ ಹಾಕಿ ಪೂಜೆ ಸಲ್ಲಿಸುತ್ತಿದ್ದಾರೆ.

ದುಗ್ಗಮ್ಮ ದೇವಿಗೆ ಹೋಳಿಗೆ, ಮೊಸರನ್ನ, ಕಡಬು ಹೀಗೆ ಸಾಕಷ್ಟು ಖಾದ್ಯಗಳನ್ನು ಸಿದ್ದಪಡಿಸಿ ಎಡೆ ಇಟ್ಟು ಎಡೆ ಜಾತ್ರೆ ಆಚರಿಸಿ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಭಕ್ತ ಗಣ ದೇವಿಗೆ ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಇನ್ನು ಎಡೆ ತಂದು ಪೂಜೆ ಸಲ್ಲಿಸಿದ ಭಕ್ತರು ಮಳೆ ಬರಿಸುವಂತೆ, ಸುರಿಸುವಂತೆ ಕೈ ಮುಗಿದು ಬೇಡಿಕೊಂಡಿದ್ದಾರೆ, ಇದೊಂದು ವಿಶಿಷ್ಠವಾದ ಆಚರಣೆಯಾಗಿದೆ. ದಾವಣಗೆರೆ ಜಿಲ್ಲೆ ಅಲ್ಲದೆ ರಾಜ್ಯದಲ್ಲಿ ಮಳೆಯಾಗಲಿ ಕೆರೆ, ಕಟ್ಟೆಗಳು ತುಂಬಲಿ ಎಂದು ಈ ಆಚರಣೆಯನ್ನು ಮಾಡಲಾಗುತ್ತದೆ.

Related posts

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

May 14, 2025
ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

May 1, 2025

ಮಳೆ ಬರದೇ ಇದ್ದರೆ ಎಡೆ ಜಾತ್ರೆ..

ವಿಶೇಷವಾಗಿ ಮಳೆಗಾಲದಲ್ಲಿ ಮಳೆ ಇಲ್ಲದೆ ಬರ ಆವರಿಸಿದಾಗ ಈ ವಿಶಿಷ್ಠವಾದ ಪದ್ದತಿಯನ್ನು ದೇವಾಲಯದ ಕಮಿಟಿಯವರು, ಜಾತ್ರೆ ಮಾಡುತ್ತಾ ಬಂದಿದ್ದಾರೆ.‌ ಅಲ್ಲದೆ ಎಡೆ ಜಾತ್ರೆ ಮಾಡಿದ ಎರಡು ಮೂರು ದಿನಗಳಲ್ಲಿ ಮಳೆ ಆಗುತ್ತದೆ ಎನ್ನುವ ನಿದರ್ಶನಗಳು ಕೂಡ ಇವೆ ಎಂದು ದೇವಸ್ಥಾನ ಧರ್ಮದರ್ಶಿ ಗೌಡ್ರು ಚನ್ನಬಸಪ್ಪ ಅಭಿಪ್ರಾಯಿಸಿದ್ದಾರೆ…

ಬೇಡಿಕೊಂಡರೇ ಇಷ್ಟಾರ್ಥ ಸಿದ್ದಿ..!

ಇನ್ನು ರಾಜ್ಯದ ವಿವಿಧ ಕಡೆಗಳಿಂದ ದೇವಿಯ ದರ್ಶನಕ್ಕೆ ಭಕ್ತರು ಬರುತ್ತಿದ್ದು, ಹರಕೆ ಮಾಡಿಕೊಂಡರೆ ಇಷ್ಟಾರ್ಥ ಸಿದ್ದಿಯಾಗುತ್ತದೆ ಎನ್ನುವ ನಂಬಿಕೆ ಕೂಡ ಇದೆ, ಯಾವ ವರ್ಷ ಮಳೆಬಾರದೆ ಬರ ಕಾಣಿಸುತ್ತದೆಯೋ ಆಗ ದುಗ್ಗಮ್ಮ ದೇವಿಗೆ ಮೊದಲು ಅಭಿಷೇಕ ಮಾಡುತ್ತಾರೆ.. ನಂತರ ಎಡೆ ಜಾತ್ರೆ ಮೂಲಕ ಸಾವಿರಾರು ಮಹಿಳೆಯರು ದೇವಿಗೆ ಎಡೆ ಇಟ್ಟು ಪ್ರಾರ್ಥನೆ ಮಾಡುತ್ತಾರೆ.‌ ಅದಾಗ್ಯೂ ಮಳೆ ಬಾರದಿದ್ದರೆ ಐದು ದಿನಗಳ ಕಾಲ ದೇವಸ್ಥಾನದ ಆವರಣದಲ್ಲಿ ಸಂತೆ ಮಾಡುತ್ತಾರೆ, ಆಗ ಮಳೆ ಬಂದೇ ಬರುತ್ತದೆ ಎನ್ನುವ ನಂಬಿಕೆ ಇದೆ ಭಕ್ತರಲ್ಲಿದೆ..

ಏನೇ ಆಗಲಿ ಪ್ರಪಂಚ ಎಷ್ಟೇ ಮುಂದುವರೆದರೂ, ಕಂಪ್ಯೂಟರ್ ಯುಗವಾದರೂ ಕೂಡ ಕೆಲವೊಂದು ನಂಬಿಕೆಗಳು ಮಾತ್ರ ನಿಬ್ಬೆರಗಾಗುವಂತೆ ಮಾಡುತ್ತವೆ.. ನಂಬಿಕೆಯೋ, ಕಾಕತಾಳಿಯವೋ
ಕೈ ಕೊಟ್ಟಿದ್ದ ಮಳೆರಾಯ ಎಡೆ ಜಾತ್ರೆ ಮಾಡಿ ಮೂರ್ನಾಲ್ಕು ಗಂಟೆ ಕಳೆಯುತ್ತಿದ್ದಂತೆ ಸಂಜೆ ವೇಳೆ ಧರೆಗೆ ಇಳಿದು ಅಚ್ಚರಿಕೆ ಕಾರಣವಾಗಿದೆ, ದಾವಣಗೆರೆಯಲ್ಲಿ ಬೆಳಿಗ್ಗೆ ದೇವಿ ಎಡೆ ಜಾತ್ರೆ ನಡೆದು ಸಂಜೆ ವೇಳೆಗೆ ವರುಣದೇವ ಆಗಮಿಸಿ ಅಚ್ಚರಿ ಮೂಡಿಸಿದ್ದಾನೆ..

ಎಡೆ ಜಾತ್ರೆ ಬಳಿಕ ಎಡ ಬಿಡದೇ ಸುರಿದ ಮಳೆ..!

ಎಡೆ ಜಾತ್ರೆ ನಂಬಿಕೆ ಮತ್ತೆ ಸಾಬೀತಾಗಿದೆ, ಮಳೆಗಾಗಿ ದಾವಣಗೆರೆ ನಗರ ದೇವತೆ ದುರ್ಗಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗಿತ್ತು, ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆ ಎಡೆ ಹಾಕಿ ಭಕ್ತರು ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದರು, ಹೋಳಿಗೆ, ಮೊಸರು ಅನ್ನ, ತಂದು ದುರ್ಗಾದೇವಿಗೆ ಪೂಜೆ ಮಾಡಿ ಮಳೆ ಬರಿಸವ್ವ ತಾಯೇ ಎಂದು ಭಕ್ತರು ಬೇಡಿಕೊಂಡಿದ್ದರು, ಮಳೆ ಇಲ್ಲದೆ ದಾವಣಗೆರೆ ಜಿಲ್ಲೆಯಲ್ಲಿ ಬಿತ್ತನೆಗೆ ಕುಂಠಿತವಾಗಿತ್ತು, ಆದರೆ ಸಂಜೆ ಮಳೆ ಬಂದ ಹಿನ್ನಲೆ ಕಂಗಾಲಾಗಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ, ಸತತ ಒಂದು ಗಂಟೆಯಿಂದ ಮಳೆ ಸುರಿದಿದೆ, ರಾತ್ರಿ ಕೂಡ ಮಳೆ ಮುಂದುವರೆದಿದೆ..

ಚನ್ನಗಿರಿಯಲ್ಲಿ ರೌದ್ರನರ್ತನ: ಬೈಕ್ ಗಳ ಮುಳುಗಡೆ..!

ದಾವಣಗೆರೆಯ ಚನ್ನಗಿರಿಯಲ್ಲಿ ಸಂಜೆ ಭಾರೀ ಮಳೆಯಾಗಿದ್ದು
ಭಾರೀ ಮಳೆಗೆ ಬೈಕ್ ಗಳು ಮುಳುಗಡೆಯಾಗಿವೆ.

ಚನ್ನಗಿರಿ ಪಟ್ಟಣದ ಕೃಷಿ ಕಚೇರಿ ಮುಂಭಾಗ ಬೈಕ್ ಗಳು ಮುಳುಗಡೆಯಾಗಿದ್ದು, ವರುಣನ ರೌದ್ರನರ್ತನಕ್ಕೆ ಚನ್ನಗಿರಿಯಲ್ಲಿ ಅವಾಂತರಗಳು ಸೃಷ್ಟಿಯಾಗಿದೆ, ಮಳೆ ಆಗದ ಹಿನ್ನಲೆ ಕಂಗಾಲಾಗಿದ್ದ ರೈತರ ಮುಖದಲ್ಲಿ ಮಳೆ ಬಂದ ಮಂದಹಾಸ ಮೂಡಿದೆ, ಆದರೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಬೈಕ್ ಗಳು ಮುಳುಗಡೆಗೊಂಡಿವೆ..
Tags: Davanagererainದಾವಣಗೆರೆಮಳೆರಾಯವರುಣ

Related Posts

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!
Home

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

by Power Samachara News
May 14, 2025
0

POWER SAMACHARA | KANNADA NEWS | BREKING NEWS| 14-05-2025.. ದಾವಣಗೆರೆ: ಇತ್ತೀಚೆಗೆ ಬಂದಿದ್ದ ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಇಲ್ಲೊಬ್ಬ ಬ್ಯಾಂಕ್ ಸಿಬ್ಬಂದಿ...

Read more
ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

May 1, 2025
ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

April 30, 2025
ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

April 29, 2025
ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ

ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ

April 25, 2025
ಮೊಬೈಲ್ ಬಿಟ್ಟೆ, ಕಷ್ಟ ಮೆಟ್ಟಿ ನಿಂತೆ, ಯಶಸ್ಸಿನ ಮೆಟ್ಟಿಲು ಹತ್ತೆಬಿಟ್ಟೆ..!  ಕುರಿ ಮಂದೆಯಲ್ಲಿ ಸಾಧನೆಯ ಶಿಖರ ಏರಿದ ‘ಬೀರದೇವ’

ಮೊಬೈಲ್ ಬಿಟ್ಟೆ, ಕಷ್ಟ ಮೆಟ್ಟಿ ನಿಂತೆ, ಯಶಸ್ಸಿನ ಮೆಟ್ಟಿಲು ಹತ್ತೆಬಿಟ್ಟೆ..! ಕುರಿ ಮಂದೆಯಲ್ಲಿ ಸಾಧನೆಯ ಶಿಖರ ಏರಿದ ‘ಬೀರದೇವ’

April 25, 2025
ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!
Home

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

by Power Samachara News
May 14, 2025
0

POWER SAMACHARA | KANNADA NEWS | BREKING NEWS| 14-05-2025.. ದಾವಣಗೆರೆ: ಇತ್ತೀಚೆಗೆ ಬಂದಿದ್ದ ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಇಲ್ಲೊಬ್ಬ ಬ್ಯಾಂಕ್ ಸಿಬ್ಬಂದಿ...

Read more
ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

May 1, 2025
ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

April 30, 2025
ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

April 29, 2025
ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ

ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ

April 25, 2025
  • Home
  • ರಾಜ್ಯ
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಷ್ಟ್ರೀಯ ಸುದ್ದಿ

© 2023 Power Samachara -Design by Newbie Techy.

No Result
View All Result
  • Power Samachara

© 2023 Power Samachara -Design by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In