POWER SAMACHARA | KANNADA NEWS |19-05-2023
ದಾವಣಗೆರೆ: ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಹಾಗೂ ಡಿ.ಕೆ ಶಿವಕುಮಾರ್ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನಲೆ ನಾಳೆ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆಯ ಶೇಖರಪ್ಪ ನಗರ ಹಾಗೂ ಭಾರತ್ ಕಾಲೋನಿಯ ಕಾಂಗ್ರೆಸ್ ಅಭಿಮಾನಿಗಳು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಸಂಚಾಲಕ ಕೆ.ಎ ಪಾಪಣ್ಣ ಮಾತನಾಡಿ, ದಾವಣಗೆರೆಯ ೧೯ ಹಾಗೂ ೨೦ ನೇ ವಾರ್ಡಿನ ಶೇಖರಪ್ಪ ನಗರ, ಭಾರತ್ ಕಾಲೋನಿ ಎ ಬ್ಲಾಕ್ ನ ಕಾಂಗ್ರೆಸ್ ಅಭಿಮಾನಿಗಳು ಆರ್ ಎಂ ಸಿ ರಸ್ತೆಯಲ್ಲಿರುವ ಗಣೇಶ ಹೋಟೆಲ್ ಸರ್ಕಲ್ ಬಳಿ ಮೇ.೨೦ ರಂದು ಮಧ್ಯಾಹ್ನ ೧೨ ಕ್ಕೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸುಮಾರು ೫ ರಿಂದ ೧೦ ಸಾವಿರ ಜನರು ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆಯಿದೆ. ಕಾಂಗ್ರೆಸ್ ಗೆ ಮತ್ತೆ ಅಧಿಕಾರ ದೊರೆತ ಹಿನ್ನೆಲೆಯಲ್ಲಿ ಗೋಧಿಹುಗ್ಗಿ ಸಿಹಿಯೊಂದಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ದಾದಾಪೀರ್,ಜಗದೀಶ್,ಪರಶುರಾಮಪ್ಪ, ಪೂಜಾರ್, ಎಲ್.ವೀರೇಶ್, ತಿಮ್ಮೇಶ್ ನಾಯ್ಕ್, ಹೆಚ್.ವಿ ಪ್ರಭುಲಿಂಗಪ್ಪ, ಅಬ್ದುಲ್, ಲಿಂಗರಾಜ್ ಮತ್ತಿತರರಿದ್ದರು.