<h3><strong>POWER SAMACHARA | KANNADA NEWS | BREKING NEWS| 07-07-2023</strong></h3> <h3><strong>ದಾವಣಗೆರೆ:</strong> ವೈದ್ಯಕೀಯ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಡಾ. ಜಿ.ಸಿ. ಬಸವರಾಜ್ ಅವರ ಕುರಿತು ಸಾಹಿತಿ ಡಾ. ಎನ್.ಜೆ. ಶಿವಕುಮಾರ್ ರಚಿಸಿರುವ 'ಸಾಧನೆಯ ಹಾದಿಯಲ್ಲಿ' ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಜು. ೯ ರಂದು ನಗರದ ರೋಟರಿ ಬಾಲಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಎನ್.ಜೆ. ಶಿವಕುಮಾರ್ ತಿಳಿಸಿದರು.</h3> <h3><img class="aligncenter wp-image-1823 size-full" src="https://powersamachara.com/wp-content/uploads/2023/07/press-meet.jpg" alt="" width="860" height="573" /></h3> <h3>ದಾವಣಗೆರೆ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಡಾ. ಜಿ.ಸಿ. ಬಸವರಾಜ್ ಅವರ ಸ್ನೇಹವೃಂದ ಬಳಗವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.</h3> <h3>ಕಾರ್ಯಕ್ರಮದ ಸಾನ್ನಿಧ್ಯವನ್ನು ಡಂಬಳ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಬಸವಪ್ರಭು ಸ್ವಾಮೀಜಿ, ಡಾ. ಗುರುಬಸವ ಸ್ವಾಮೀಜಿ, ಡಾ. ಬಸವ ಜಯಚಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.</h3> <h3>ಕಾರ್ಯಕ್ರಮವನ್ನು ಮಾಜಿ ಶಾಸಕ ಎಸ್.ವಿ. ರಾಮಚಂದ್ರಪ್ಪ ಉದ್ಘಾಟಿಸಲಿದ್ದು, ಕೃತಿ ಲೋಕಾರ್ಪಣೆಯನ್ನು ಜೆಜೆಎಂ ವೈದ್ಯಕೀಯ ಕಾಲೇಜು ನಿರ್ದೇಶಕ ಡಾ. ಎಂ.ಜಿ. ರಾಜಶೇಖರ್ ಮಾಡಲಿದ್ದಾರೆ. ಕೃತಿ ಕುರಿತು ಸಾಹಿತಿ ಡಾ. ಎಂ.ಜಿ. ಈಶ್ವರಪ್ಪ ಮಾತನಾಡಲಿದ್ದಾರೆ.</h3> <h3>ಡಾ. ಸಿದ್ದಲಿಂಗಪ್ಪ ಎಲಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಜೆಜೆಎಂ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಶಾಮನೂರು ಮುರುಗೇಶ್, ಡಾ. ಸುಬ್ಬಾರೆಡ್ಡಿ, ಶಾಸಕ ಎನ್.ವೈ. ಗೋಪಾಲಕೃಷ್ಣ, ಪ್ರೊ. ಲಿಂಗಪ್ಪ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.</h3> <h3>ಕೃತಿಯಲ್ಲಿ ಬಸವರಾಜ್ ಅವರ ವೈದ್ಯಕೀಯ ಸಾಧನೆ ಹಾಗೂ ದೇವಸಮುದ್ರದ ಅವರ ಕುಟುಂಬದವರ ಸಾರ್ಥಕ ಬದುಕಿನ ಕುರಿತು ತಿಳಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ, ಡಾ. ಜಿ.ಸಿ. ಬಸವರಾಜ್, ಶಿವರುದ್ರಾಚಾರ್ ಹಾಗೂ ಚಂದ್ರಶೇಖರ್ ಸ್ವಾಮಿ ಉಪಸ್ಥಿತರಿದ್ದರು.</h3>