POWER SAMACHARA | KANNADA NEWS | BREKING NEWS| 06-09-2023
ದಾವಣಗೆರೆ : ಈ ಸರ್ಕಾರಿ ಹಾಸ್ಟೇಲ್ ಗಳ ಅವ್ಯವಸ್ಥೆ ಮುಗಿಯದ ಕಥೆ, ಎಲ್ಲಾ ಸೌಕರ್ಯಗಳು, ಅನುದಾನ ಇದ್ರು ಸಹ ಅಧಿಕಾರಿ ವರ್ಗ, ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳ ಆರೋಗ್ಯಕ್ಕೆ ಕುತ್ತು ಬರುತ್ತದೆ, ಇಂತಹದ್ದೊಂದು ನಿರ್ಲಕ್ಷ್ಯದಿಂದ ಬರೋಬ್ಬರಿ 40ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದು ನರಳಾಟ ಅನುಭವಿಸುತ್ತಿದ್ದಾರೆ..
ಹೌದು.. ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಮೊರಾರ್ಜಿ ವಸತಿಯುತ ಶಾಲೆಯಲ್ಲಿ ಈ ಘಟನೆ ನಡೆದಿದೆ.. ಆ ಎಲ್ಲಾ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಮುಂದೇ ಉನ್ನತ ಮಟ್ಟಕ್ಕೆ ಬೆಳೆಯಬೇಕೆಂದು ಪರೀಕ್ಷೆ ಪಾಸಾಗಿ ಮನೆ ಬಿಟ್ಟು ಮೊರಾರ್ಜಿ ವಸತಿಯುತ ಶಾಲೆಗೆ ಸೇರಿದವರು, ಏಕಂದ್ರೆ ಮೊರಾರ್ಜಿ ಶಾಲೆ ಅಂದರೆ ಉತ್ತಮ ಶಿಕ್ಷಣ, ಗುಣಮಟ್ಟದ ಆಹಾರ ಸಿಗುತ್ತೆ ಅಂತಾ ಪೋಷಕರು ಮಕ್ಕಳನ್ನು ಮೊರಾರ್ಜಿ ಶಾಲೆಗೆ ಸೇರಿಸುತ್ತಾರೆ, ಆದರೆ ಸರ್ಕಾರದಿಂದ ಎಲ್ಲಾ ಸೌಕರ್ಯಗಳು, ಅನುದಾನ ಸಿಕ್ಕರು ಸಹ ಅಧಿಕಾರಿಗಳು, ಸಿಬ್ಬಂದಿಗಳು ನಿರ್ಲಕ್ಷ್ಯ ವಹಿಸುವುದರಿಂದ ಹಾಸ್ಟೇಲ್ ಗಳು ಅವ್ಯವಸ್ಥೆಯ ಆಗರವಾಗಿ ಹೋಗಿರುತ್ತವೆ, ಮಾಯಕೊಂಡ ಮೊರಾರ್ಜಿ ಶಾಲೆಯಲ್ಲಿ ಆಗಿದ್ದು ಇದೆ, ಫುಡ್ ಪಾಯಿಸನ್ ನಿಂದ ಸುಮಾರು 40 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದರು, ಕೆಲ ವಿದ್ಯಾರ್ಥಿಗಳಿಗೆ ಶಾಲೆಯಲ್ಲೇ ಚಿಕಿತ್ಸೆ ನೀಡಲಾಗಿದೆ, ಇನ್ನೂ 17ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಳಸಿದ ಅನ್ನ ನೀಡಲಾಗಿದೆ, ಅನ್ನ ಬೆಂದಿರಲಿಲ್ಲ, ಪುಳ್ಳೆ ಹೊಗರಿ ಸರಿ ಇರಲಿಲ್ಲ ಎಂದು ಇನ್ನೂ ವಾರ್ಡನ್ ವಿರುದ್ದ ಪೋಷಕರು ಆರೋಪಿಸಿದ್ದು ಶಾಲೆಯಲ್ಲಿ ಹೇಳುವವರು ಕೇಳುವವರು ಯಾರು ಇಲ್ಲ, ಎಲ್ಲವು ಅವ್ಯವಸ್ಥೆಯಿಂದ ಕೂಡಿದೆ ಎಂದು ಪೋಷಕರಾದ ಮಂಜುನಾಥ್ ದೂರಿದ್ದಾರೆ..
ಕೊಳೆತ ತರಕಾರಿ: ಹೊಟ್ಟೆ ನೋವಿನಿಂದ ವಿದ್ಯಾರ್ಥಿಗಳ ನರಳಾಟ
ಇನ್ನೂ ವಿದ್ಯಾರ್ಥಿನಿಯರು ವಾಂತಿ ಭೇದಿ ಹೊಟ್ಟೆ ನೋವಿನಿಂದ ನರಳಾಟ ಅನುಭವಿಸಿದ್ದಾರೆ, ಇತ್ತ ವಸತಿಯುತ ಶಾಲೆಯಲ್ಲಿ ಕೊಳೆತ ಟೊಮ್ಯಾಟೊ, ಮುಳುಗಾಯಿ, ಶುಂಠಿ, ಹುಳು ಬಿದ್ದ ದಾಸ್ತಾನುಗಳು ಪತ್ತೆಯಾಗಿವೆ, ಈ ಹಿನ್ನಲೆ ಮಾಯಕೊಂಡ ಶಾಸಕ ಬಸವಂತಪ್ಪ ಮೊರಾರ್ಜಿ ಶಾಲೆಗೆ ಭೇಟಿ ನೀಡಿದ್ರು, ಕೊಳೆತ ತರಕಾರಿ ನೋಡಿ ವಾರ್ಡನ್ ಹಾಗೂ ಅಧಿಕಾರಿಗಳ ವಿರುದ್ದ ಕಿಡಿಕಾರಿದ್ರು, ನಿಮ್ಮ ಮನೆಯಲ್ಲೂ ಇಂತಹದ್ದೆ ತರಕಾರಿ ಉಪಯೋಗಿಸ್ತಿರಾ ಅಂತಾ
ತೆಗೆದುಕೊಂಡಿದ್ದಾರೆ.
ಜಿಲ್ಲಾಧಿಕಾರಿ, ಸಿ.ಇ.ಒ ಭೇಟಿ ಪರಿಶೀಲನೆ..
ವಸತಿಯುತ ಶಾಲೆಗೆ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್ ಭೇಟಿ ನೀಡಿ ಪರಿಶೀಲನೆ ನಡೆಸಿದರು, ಮಂಗಳವಾರ ರಾತ್ರಿಯ ಊಟಕ್ಕೆ ಮಾಡಲಾದ ಅನ್ನ ಸರಿಯಾಗಿ ಬೇಯಿಸದ ಕಾರಣ ಕೆಲ ವಿದ್ಯಾರ್ಥಿಗಳಿಗೆ ಹೊಟ್ಟೆ ನೋವು ಕಾಣಿಸಿಕೊಂಡಿರುತ್ತದೆ. ಈ ವಿದ್ಯಾರ್ಥಿಗಳನ್ನು ತಕ್ಷಣ ಸಿ.ಜಿ ಆಸ್ಸತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿರುತ್ತದೆ. ವಿದ್ಯಾರ್ಥಿನಿಯರ ಹೆಚ್ಚು ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದು, ಯಾವುದೇ ಅಪಾಯ ಇರುವುದಿಲ್ಲ. ಮಕ್ಕಳ ಪೋಷಕರಿಗೂ ಸಹ ಮಾಹಿತಿಯನ್ನು ನೀಡಲಾಗಿದೆ. ಜಿಲ್ಲಾಧಿಕಾರಿ ಹಾಗೂ ಸಿ.ಇ.ಒ ವಸತಿ ಶಾಲೆಯಲ್ಲಿನ ಅಡುಗೆ ಮನೆ, ಉಗ್ರಾಣ ಪರಿಶೀಲನೆ ನಡೆಸಿ ಸ್ವಚ್ಚತೆ ಕಾಪಾಡಲು ಸೂಚನೆ ನೀಡಿದರು. ನಿರ್ಲಕ್ಷತೆ ವಹಿಸಿದ ಈ ವಸತಿ ಶಾಲೆಯ ವಾರ್ಡನ್ ಅವರನ್ನು ತಕ್ಷಣ ಬದಲಾಯಿಸಲು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದರು. ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾಗರಾಜ್.ಕೆ ಉಪಸ್ಥಿತರಿದ್ದರು.
ಒಟ್ಟಾರೆ ಅಧಿಕಾರಿಗಳು, ವಾರ್ಡನ್ ನಿರ್ಲಕ್ಷ್ಯವೋ, ಅವಘಡವೋ, ಅಥವಾ ಆಹಾರದಲ್ಲಿ ಏನಾದರು ಬಿದ್ದಿದಿಯೋ ಗೊತ್ತಿಲ್ಲ ಮಕ್ಕಳು ಮಾತ್ರ ನರಳಾಟ ಅನುಭವಿಸಿ ಆಸ್ಪತ್ರೆ ಸೇರಿದ್ದಾರೆ, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕಿದೆ..