POWER SAMACHARA | KANNADA NEWS | BREKING NEWS| 29-04-2025..
ದಾವಣಗೆರೆ: ಇಲ್ಲಿನ ಬಿಐಇಟಿಯಲ್ಲಿ ಹಮ್ಮಿಕೊಂಡಿದ್ದ ನಮ್ಮ ದವನ-2025 ಸಮಾರಂಭವು ಸಂಗೀತ, ನೃತ್ಯ, ನಾಟಕ, ಚರ್ಚಾ ಸ್ಪರ್ಧೆ, ಸಾಹಿತ್ಯ ಮತ್ತು ಕಲೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ನಡೆಸುವ ಮೂಲಕ ಸಮಾರೋಪಗೊಂಡಿತು.
ಪತ್ರಕರ್ತೆ ಪ್ರೀತಿ ನಾಗರಾಜ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತಮ್ಮಲ್ಲಿ ಅಡಗಿರುವ ಪ್ರತಿಭೆ ಹೊರಹಾಕಲು ಒಂದು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು. 18 ವಿಭಾಗಗಳಲ್ಲಿ ವಿವಿಧ ಸ್ಪರ್ಧಿಗಳು ನಡೆದವು. ಕಾಲೇಜಿನ 15 ವಿಭಾಗದ ಸುಮಾರು 525 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ದವನ ಚಾಂಪಿಯನ್ ಪ್ರಶಸ್ತಿಯನ್ನು ಡೇಟಾಸ್ಯೆನ್ಸ್ ವಿಭಾಗ ಗಳಿಸಿತು. ಪ್ರಥಮ ರನ್ನರ್ ಅಪ್ ನ್ನು ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗ ಹಾಗೂ ದ್ವಿತೀಯ ರನ್ನರ್ ಅಪ್ ನ್ನು ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗ ಗಳಿಸಿದವು.
ಕಾಲೇಜಿನ ಡೇಟಾ ಸೈನ್ಸ್ ವಿಭಾಗದ ಆರ್. ನಿತಿನ್ ಮತ್ತು ತನುಶ್ರೀ ಶಿವಾನಂದ್ ಈ ವರ್ಷದ ದವನ ಕುವರ ಮತ್ತು ದವನ ಕುವರಿ ಪ್ರಶಸ್ತಿಗೆ ಭಾಜನರಾದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ನಿರ್ದೇಶಕರಾದ ಪ್ರೊ. ವೈ ವೃಷಭೇಂದ್ರಪ್ಪ ವಹಿಸಿದ್ದರು. ಪ್ರಾಂಶುಪಾಲರಾದ ಡಾ.ಎಚ್ ಬಿ ಅರವಿಂದ್ ಸರ್, ಡಾ.ಮಾನವೇಂದ್ರ, ಡಾ. ಕೆ ಸಿ ದೇವೇಂದ್ರಪ್ಪ, ಹಾಗೂ ವಿದ್ಯಾರ್ಥಿ ಪರಿಷತ್ತಿನ ಸಂಚಾಲಕರಾದ ಡಾ. ಎಸ್ ಎಂ ಚಂದ್ರಶೇಖರ್, ಪ್ರೊ. ಶ್ರೀನಿಧಿ ಆರ್ ಕುಲಕರ್ಣಿ, ಸಾವನ್ ಬಸವರಾಜ್, ಡಾ. ಶಿವಕುಮಾರ್ ಸ್ವಾಮಿ ಮತ್ತು ಭಾಗ್ಯಶ್ರೀ ಭಾಗವಹಿಸಿದ್ದರು. ಚಿನ್ಮಯಿ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಡಿ.ಆರ್. ಸಹನಾ ವಂದಿಸಿದರು.