<h3><strong>POWER SAMACHARA | KANNADA NEWS | BREKING NEWS| 14-07-2023..</strong></h3> <h3><strong>ದಾವಣಗೆರೆ:</strong> ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಲೋಕಸಭೆ ಬಿಜೆಪಿ ಟಿಕೆಟ್ ಆಕಾಂಕ್ಷಿ ವಿಚಾರಕ್ಕೆ ಸಂಸದ ಜಿ.ಎಂ.ಸಿದ್ದೇಶ್ವರ್ ಟಾಂಗ್ ನೀಡಿದ್ದಾರೆ, ರೇಣುಕಾಚಾರ್ಯ ಎಂಪಿ ಸ್ಥಾನಕ್ಕೆ ಬಂದರೆ ನಾನು ಹೊನ್ನಾಳಿ ಎಂಎಲ್ ಎ ಸ್ಥಾನಕ್ಕೆ ಹೋಗುತ್ತೇನೆ, ಹೊನ್ನಾಳಿಯಲ್ಲಿ ಗೆದ್ದು ಮಂತ್ರಿಯಾಗುತ್ತೇನೆ ಎಂದು ದಾವಣಗೆರೆಯಲ್ಲಿ ಸಂಸದ ಜಿಎಂ ಸಿದ್ದೇಶ್ವರ್ ಹೇಳಿಕೆ ನೀಡಿದ್ದಾರೆ..</h3> <img class="aligncenter wp-image-1895 size-full" src="https://powersamachara.com/wp-content/uploads/2023/07/gm-siddeshvar.jpg" alt="" width="860" height="573" /> <h3>ರೇಣುಕಾಚಾರ್ಯ ಎಂಪಿ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಹೇಳುತ್ತಾ ಹೋಗುತ್ತಿದ್ದಾರೆ, ಎಲ್ಲರಿಗೂ ಆಸೆ ಇರುತ್ತೆ ತಪ್ಪೇನಿಲ್ಲ, ಪಕ್ಷ ತೀರ್ಮಾನ ಮಾಡುತ್ತೆ, ಮುಂಚೆಯೆ ಟಿಕೆಟ್ ಘೋಷಣೆ ಮಾಡಬೇಕು ಎಂದು ರೇಣುಕಾಚಾರ್ಯ ಹೇಳಿರುವುದು ಒಳ್ಳೆಯ ಬೆಳವಣಿಗೆ ಎಂದರು..</h3> <h3><strong>ಎಂಪಿ VS ಎಂಪಿ..!</strong></h3> <h3>ಎಂಪಿ ರೇಣುಕಾಚಾರ್ಯ ಲೋಕಸಭೆಗೆ ಬಂದರೆ ಹೊನ್ನಾಳಿಯಲ್ಲಿ ಸ್ಥಾನ ಖಾಲಿ ಆಗುತ್ತೆ ಅದನ್ನೂ ಭರ್ತಿ ಮಾಡಬೇಕಿದೆ, ಆ ಸ್ಥಾನವನ್ನು ನಾನು ತುಂಬುತ್ತೇನೆ, ಹೊನ್ನಾಳಿಯಲ್ಲಿ ನಮ್ಮ ಜನ ಬಹಳ ಇದ್ದಾರೆ, ನಾನು ಅಲ್ಲಿ ಸ್ಪರ್ಧೆ ಮಾಡಬೇಕು ಎಂದು ಬಹಳ ಜನ ಅಪೇಕ್ಷೆ ಪಡುತ್ತಾ ಇದ್ದಾರೆ, ಪಕ್ಷ ತೀರ್ಮಾನಕ್ಕೆ ಬದ್ದ ಎಂದು ಎಂಪಿ ಜಿಎಂ ಸಿದ್ದೇಶ್ವರ್ ಹೇಳಿಕೆ ನೀಡಿದ್ದಾರೆ..</h3> <img class="aligncenter wp-image-1905 size-full" src="https://powersamachara.com/wp-content/uploads/2023/07/ravindranath-renukacharya-visit1-1.jpg" alt="" width="860" height="573" /> <h3><strong>ಎಂಪಿ ರೇಣುಕಾಚಾರ್ಯಗೆ ಎಂಪಿ ಸ್ಥಾನದ ಮೇಲೆ ಕಣ್ಣು..!</strong></h3> <h3>ದಾವಣಗೆರೆಯಲ್ಲಿ ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ರನ್ನ ಭೇಟಿ ಮಾಡಿ ಮಾಧ್ಯಮದವರ ಜೊತೆ ಮಾತನಾಡಿದ್ದ ಎಂಪಿ ರೇಣುಕಾಚಾರ್ಯ, ಎಲ್ಲಾ ತಾಲ್ಲೂಕುಗಳಲ್ಲಿ ಜನ ಕರೆ ಮಾಡಿ ಲೋಕಸಭೆಗೆ ಸ್ಪರ್ಧೆ ಮಾಡಿ ಎಂದು ಒತ್ತಡ ಹೇರುತ್ತಿದ್ದಾರೆ, ಹೀಗಾಗಿ ನಾನು ಪ್ರಬಲ ಆಕಾಂಕ್ಷಿ ಎಂದು ಹೇಳಿಕೆ ನೀಡಿದ್ದರು, ಈ ಹೇಳಿಕೆ ಬೆನ್ನಲ್ಲೆ ಸಂಸದರ ಕಚೇರಿಯಲ್ಲಿ ಮಾತನಾಡಿರುವ ಜಿಎಂ ಸಿದ್ದೇಶ್ವರ್, ಹೊನ್ನಾಳಿಯಲ್ಲಿ ಈ ಹಿಂದಿನಿಂದಲೂ ಬಹಳ ಜನ ನನಗೆ ಒತ್ತಡ ಹೇರುತ್ತಿದ್ದರು, ಅಲ್ಲಿ ನಮ್ಮ ಜನ ಬಹಳಷ್ಟಿದ್ದಾರೆ, ರೇಣುಕಾಚಾರ್ಯ ಲೋಕಸಭೆಗೆ ಬಂದರೆ, ನಾನು ಹೊನ್ನಾಳಿ ವಿಧಾನಸಭೆಗೆ ಹೋಗುತ್ತೇನೆ ಎಂದು ಟಾಂಗ್ ಕೊಟ್ಟಿದ್ದಾರೆ..</h3>