<h3><strong>POWER SAMACHARA | KANNADA NEWS | BREKING NEWS| 18-08-2023..</strong></h3> <h3><strong>ದಾವಣಗೆರೆ</strong> : ನಾಗರ ಪಂಚಮಿ ಪ್ರಯುಕ್ತ ದಾವಣಗೆರೆಯಲ್ಲಿ ಶಾಲಾ ಮಕಳಿಗೆ ಹಾಲು ಉಣಿಸುವ ಹಬ್ಬ ಹಮ್ಮಿಕೊಳ್ಳಲಾಗಿತ್ತು, ದಾವಣಗೆರೆ ನಗರದ ಬಿಜಿಎಂ ಶಾಲೆಯಲ್ಲಿ ಕಲ್ಲು ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು ಎಂಬ ವಿನೂತಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.</h3> <h3>ಕೂಡಲ ಸಂಗಮ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು, ನಾಗರ ಪಂಚಮಿಯಲ್ಲಿ ಕಲ್ಲು ನಾಗರಕ್ಕೆ ಹಾಲು ಹಾಕುವ ಬದಲು ಮಕ್ಕಳಿಗೆ ಹಾಲು ನೀಡಿ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಸಲಹೆ ನೀಡಿದರು.</h3> <h3>ಕಲ್ಲಿನ ನಾಗರಕ್ಕೆ ಹಾಲೇರೆಯುವ ಬದಲು ಮಕ್ಕಳಿಗೆ ಹಾಲುಣಿಸಿದರೆ ಸಾರ್ಥಕವಾಗುತ್ತದೆ, ಮೌಢ್ಯತೆಯನ್ನು ದೂರ ಮಾಡುವ ದೃಷ್ಟಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ, ನಾಗರ ಪಂಚಮಿ ಹಬ್ಬವನ್ನು ಮಕ್ಕಳ ಪಂಚಮಿ ಎಂದು ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒತ್ತಾಯಿಸುವುದಾಗಿ ಜಯ ಮೃತ್ಯುಂಜಯ ಸ್ವಾಮಿ ಹೇಳಿದರು..</h3>