<h3><strong>POWER SAMACHARA | KANNADA NEWS | BREKING NEWS| 22-07-2023</strong></h3> <h3><strong>ದಾವಣಗೆರೆ:</strong> ಆಸ್ತಿ ವಿಚಾರಕ್ಕೆ ಅಣ್ಣ ತಮ್ಮಂದಿರ ಮಧ್ಯೆ ಗಲಾಟೆ ನಡೆದಿದ್ದು, ಕಾರಿನ ಗ್ಲಾಸ್ ಒಡೆದು ಬೆಂಕಿ ಇಟ್ಟ ಘಟನೆ ದಾವಣಗೆರೆ ತಾಲೂಕಿನ ಮೆಳ್ಳೇಕಟ್ಟೆ ಗ್ರಾಮದಲ್ಲಿ ನಡೆದಿದೆ..</h3> <img class="aligncenter wp-image-1978 size-full" src="https://powersamachara.com/wp-content/uploads/2023/07/brother-war.jpg" alt="" width="860" height="573" /> <h3>ಮೆಳ್ಳೇಕಟ್ಟೆ ಗ್ರಾಮದ ಅಣ್ಣ ಸಿದ್ದೇಶ್ ತಮ್ಮ ಮಲ್ಲಿಕಾರ್ಜುನ ಮಧ್ಯೆ ಗಲಾಟೆ ನಡೆದಿದೆ ಎನ್ನಲಾಗಿದೆ, ತಾಯಿ ಹೆಸರಿಗಿರುವ ಅಡಿಕೆ ಜಮೀನನ್ನು ತನ್ನ ಹೆಸರಿಗೆ ಮಾಡುವಂತೆ ಅಣ್ಣ ಸಿದ್ದೇಶ್ ಗಲಾಟೆ ಮಾಡಿದ್ದಾನೆ ಎನ್ನಲಾಗಿದೆ, ಮಲ್ಲಿಕಾರ್ಜುನ್ ಮನೆ ಬಳಿ ಆಗಮಿಸಿದ ಸಿದ್ದೇಶ್, ಮನೆ ಮುಂದೆ ನಿಂತಿದ್ದ ಕಾರ್ ಗೆ ರಾಡ್ ನಿಂದ್ ಗ್ಲಾಸ್ ಒಡೆದು ಬಳಿಕ ಬೆಂಕಿ ಇಟ್ಟು ಗಲಾಟೆ ಮಾಡಿದ್ದಾನೆ ಎನ್ನಲಾಗಿದೆ.</h3> <h3><img class="aligncenter wp-image-1979 size-full" src="https://powersamachara.com/wp-content/uploads/2023/07/brother-war2.jpg" alt="" width="860" height="573" /></h3> <h3>ಇನ್ನೂ ತಡೆಯಲು ಬಂದು ಮಲ್ಲಿಕಾರ್ಜುನ್ ಮತ್ತು ಅವರ ಮನೆಯವರ ಮೇಲೂ ರಾಡ್ ನಿಂದ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದ್ದು, ನಡು ರಸ್ತೆಯಲ್ಲೆ ನಡೆದಿರುವ ಗಲಾಟೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ, ಈ ಬಗ್ಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..</h3>