POWER SAMACHARA | KANNADA NEWS | BREKING NEWS| 04-05-2024
ದಾವಣಗೆರೆ: ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್ ಬೇಕಾ, ನಾನು ಬೇಕಾ, ನಾನು ಸಿಎಂ ಆಗಿ ಮುಂದುವರೆಯಬೇಕು ಎಂದರೆ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮತ ನೀಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ..
ದಾವಣಗೆರೆ ನಗರದ ಬಾಪೂಜಿ ಕಲ್ಯಾಣ ಮಂಟಪದಲ್ಲಿ ನಡೆದ ಕುರುಬ ಸಮಾಜದ ಸಭೆಯಲ್ಲಿ ಅಬ್ಬರಿಸಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕದಲ್ಲಿ ನಾನು ಮುಖ್ಯಮಂತ್ರಿ ಆಗಿರೋದಕ್ಕೆ ಬಯಸುತ್ತೀರಾ ಇಲ್ವಾ ನೀವು, ನಾನು ಮುಂದುವರಿಬೇಕಾ,
ಆಗಿದ್ರೆ ಕಾಂಗ್ರೆಸ್ ಗೆ ಸಫೋರ್ಟ್ ಮಾಡಿ, ದಾವಣಗೆರೆಯಲ್ಲಿ ವಿನಯ್ ಕುಮಾರ್ ಎಂಬಾತ ಪಕ್ಷೇತರರಾಗಿ ನಿಂತಿದ್ದಾರೆ. ಅವರಿಗೆ ಅನೇಕ ಸರಿ ಫೋನ್ ಮಾಡಿ ಹೇಳಿದೆ, ಚುನಾವಣೆಗೆ ನಿಲ್ಲಬೇಡ ಎಂದು, ನೀನು ನಿಂತರೆ ಬಿಜೆಪಿಗೆ ಸಪೋರ್ಟ್ ಮಾಡಿದಂತೆ ಆಗುತ್ತೆ ಎಂದಿದ್ದೆ. ಕಾಗಿನೆಲೆ ಶ್ರೀ ಅವರ ಜೊತೆ ಬಂದಿದ್ದರು, ನಾನು ನಿಲ್ಲಲ್ಲ, ಬೇರೆ ಏನಾದ್ರು ಮಾಡಿ ಎಂದು ಕೇಳಿದ್ದರು, ಆಗ ನಾಮಿನೇಷನ್ ಹಾಕಲ್ಲ ಎಂದ ಗಿರಾಕಿ ಉಲ್ಟಾ ಹೊಡೆದು ಬಿಟ್ಟಾ, ಯಾರೋದೊ ಕುಮ್ಮಕ್ಕು ಇರಬೇಕು, ಬಿಜೆಪಿಯವರು ಒಂದಾದ್ರು ಕುರುಬರಿಗೆ ಟಿಕೆಟ್ ಕೊಟ್ಟಿದ್ದಾರ. ಕಳೆದ ಭಾರೀ ಮೂರು ಟಿಕೆಟ್, ಈ ಭಾರೀ ಎರಡು ಟಿಕೆಟ್ ಕೊಟ್ಟಿದ್ದೇವೆ. ಕೆಎಸ್ ಈಶ್ವರಪ್ಪ ನನ್ನ ಮೇಲೆ ಎಗರಿ ಬೀಳ್ತಾ ಇದ್ದಾ, ರಕ್ತ ಕಾರೋನು, ಅಂತವನಿಗೆ ಟಿಕೆಟ್ ಕೊಡಲಿಲ್ಲ ಎಂದರು..
ಬಿಜೆಪಿಗೆ ಸಫೊರ್ಟ್ ಮಾಡೋಕೆ ವಿನಯ್ ಕುಮಾರ್ ನಿಂತಿದ್ದಾನೆ, ನಾನು ಬೇಕಾ ವಿನಯ್ ಕುಮಾರ್ ಬೇಕಾ ಹೇಳಿ, ನಾನು ಬೇಕು ಅನ್ನೋದಾದರೇ ಯಾರು ವಿನಯ್ ಕುಮಾರ್ ಗೆ ಒಂದು ವೋಟ್ ಹಾಕಬಾರದು, ಹಾಕ್ತಿರಾ, ಹಾಕ್ತಿರಾ ಎಂದು ಸಿಎಂ ಪ್ರಶ್ನೆ ಮಾಡಿದರು..
ಜಾತಿ ಎಂದಾಕ್ಷಣ ವೋಟ್ ಹಾಕಬೇಡಿ..
ವಿನಯ್ ಕುಮಾರ್ ಜಾತಿಯಲ್ಲಿ ಹುಟ್ಟಿದ್ದಾನೆ ಎಂದ ತಕ್ಷಣ ವೋಟ್ ಕೊಡಬೇಕಾ, ನಮ್ ಜಾತಿಯವನು ಅಂದಾಕ್ಷಣ ಕೊಡಬೇಕಾ, ವಿನಯ್ ಕುಮಾರ್ ಪಾರ್ಟಿಗೆ ಬಂದು ಆರು ತಿಂಗಳು ಆಗಿತ್ತು, ಎಸ್ ಎಸ್ ಮಲ್ಲಿಕಾರ್ಜುನ್ ಕುಟುಂಬ ಮೂವತ್ತು ವರ್ಷದಿಂದ ಕೆಲಸ ಮಾಡಿದೆ, ಜಿಲ್ಲಾಧ್ಯಕ್ಷರು, ಕಾರ್ಯಕರ್ತರು ಹೇಳಿದವರಿಗೆ ಟಿಕೆಟ್ ಕೊಡಬೇಕು ತಾನೇ, ಬೆಂಗಳೂರಿನಲ್ಲಿ ಕೋಚಿಂಗ್ ಮಾಡಿಕೊಂಡು ಇದೀಯಾ, ಮುಂದೇ ಏನಾದ್ರು ಮಾಡ್ತಿವಿ ಇರು ಎಂದೆವು, ನಾನು ನಮ್ಮ ಕಾಗಿನೆಲೆ ಶ್ರೀಗಳು ಗಿಳಿಗೆ ಹೇಳಿದಂತೆ ಪಾಠ ಹೇಳಿದೆವು, ಮನೆ ಹಾಳು ಮಾಡಿಕೊಳ್ಳ ಬೇಡ ಎಂದೇ, ಒಂದೇ ಜಾತಿ ವೋಟ್ ಹಾಕಿದ್ರೆ ಗೆಲ್ತಾರಾ, ಏನಾದ್ರು ಮಾಡೋಣ ಎಂದ್ರೆ ಕೇಳಬೇಕಾ ಬೇಡ್ವಾ, ಅರ್ಜಿ ಹಾಕಬೇಡ ಎಂದೇ ಹಾಕಲ್ಲ ಎಂದು ಎಲ್ಲರು ಮಾತು ತಿರಸ್ಕಾರ ಮಾಡಿ ನಾಮಪತ್ರ ಸಲ್ಲಿಕೆ ಮಾಡಿದ, ವಿನಯ್ ಕುಮಾರ್ ಗೆ ವೋಟ್ ಹಾಕೋದ್ರಿಂದ ಏನೂ ಲಾಭ, ಜಾತಿ ವ್ಯಾಮೋಹದಿಂದ ಒಂದೊಂದು ವೋಟು ಹಾಕಿದ್ರೆ ಬಿಜೆಪಿಗೆ ಲಾಭ ಆಗುತ್ತೆ ಎಂದು ವಾಗ್ದಾಳಿ ನಡೆಸಿದರು..
ಭೈರತಿ ಬಸವರಾಜ್ ಕಥೆ ಗೊತ್ತಾ..
ಹಿರಿಯ ನಾಯಕ ಎ ಕೃಷ್ಣಪ್ಪಗೆ ಟಿಕೆಟ್ ತಪ್ಪಿಸಿ ಭೈರತಿ ಬಸವರಾಜ್ ಗೆ ಟಿಕೆಟ್ ಕೊಡಿಸಿದ್ದೆ, ಅವ ಗಿರಾಕಿ ನನಗೆ ಚೂರಿ ಹಾಕಿಬಿಟ್ಟ, ಈಗ ಆ ಭೈರತಿ ಮಾತು ಕೇಳ್ತಿರಾ, ನನಗೆ ಚೂರಿ ಹಾಕಿದವರ ಮಾತು ಕೇಳ್ತಿರಾ, ಭೈರತಿ ಕದ್ದು ವಿನಯ್ ಕುಮಾರ್ ಮನೆಗೆ ಹೋಗಿದ್ದನಂತೆ, ರಾತ್ರಿ ಒಂದು ಗಂಟೆಯಲ್ಲಿ ಹೋಗಿದ್ದನಂತೆ, ವ್ಯವಹಾರ ಕುದುರಿಸೋಕಾ ಎಂದು ಕಿಡಿಕಾರಿದರು..
ಪ್ರಭಾ ಮಲ್ಲಿಕಾರ್ಜುನ ಗೆದ್ದರೆ ನಾನೇ ಗೆದ್ದಂಗೆ, ನಾನೇ ಚುನಾವಣೆಗೆ ನಿಂತಿದ್ದೀನಿ ಎಂದುಕೊಳ್ಳಿ, ಹೆಚ್ಚು ಜನ ಗೆದ್ದರೆ ನನಗೆ ಶಕ್ತಿ ಅಲ್ವಾ, 136 ಜನ ಗೆದ್ದಿದ್ದೇವೆ, ಈ ಚುನಾವಣೆ ಆದ ಮೇಲೆ ಸರ್ಕಾರ ಬಿದ್ದೋಗುತ್ತೆ ಅಂತಾ ಹೇಳಿದ್ದಾರೆ, ಇದು ಸುಳ್ಳು ನಾನು ಐದು ವರ್ಷ ನಮ್ಮ ಸರ್ಕಾರ ಗಟ್ಟಿಯಾಗಿ ಇರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು..