<h3><strong>POWER SAMACHARA | KANNADA NEWS | BREKING NEWS| 18-08-2023</strong></h3> <h3><strong>ದಾವಣಗೆರೆ</strong>: ಪಂಚಮಸಾಲಿ 2A ಮೀಸಲಾತಿ ಹೋರಾಟಕ್ಕೆ ಮತ್ತೆ ಕೂಡಲ ಜಯ ಮೃತ್ಯುಂಜಯ ಶ್ರೀ ಜಯಮೃತ್ಯುಂಜಯ ಸ್ವಾಮಿಜಿ ಕರೆ ನೀಡಿದ್ದಾರೆ..</h3> <h3>ದಾವಣಗೆರೆಯಲ್ಲಿ ಮಾತನಾಡಿದ ಶ್ರೀಗಳು, ಕಳೆದ ಅವಧಿಯ ಕೊನೆಯಲ್ಲಿ ಸರ್ಕಾರ 2d ಗ್ರೂಪ್ ನಿರ್ಮಾಣ ಮಾಡಿತ್ತು, ಆದರೆ 2A, 2D ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ, ನಾವು ಸಿಎಂ ಸಿದ್ದರಾಮಯ್ಯನವರಿಗೆ 2ಎ ಮೀಸಲಾತಿ ಹಕ್ಕೋತ್ತಾಯ ಮಾಡಿದ್ದೇವೆ, ಸಮಸ್ಯೆ ಸರಿಪಡಿಸಿ ನ್ಯಾಯ ಕೊಡಿಸಿ, ಲೋಕಸಭೆ ಚುನಾವಣೆ ಒಳಗೆ ಮೀಸಲಾತಿ ಕೊಡಬೇಕು ಎಂದು ಆಗ್ರಹಿಸಿದ್ದೆವು, ಅಧಿವೇಶನ ಬಳಿಕ ಕಾನೂನು ಸಲಹೆಗಾರರ ಸಭೆ ಕರೆಯುತ್ತೇವೆ ಎಂದು ಹೇಳಿ ಸಿಎಂ ಸಿದ್ದರಾಮಯ್ಯನವರು ಸಭೆ ಕರೆದಿಲ್ಲ, ಹೀಗಾಗಿ ನಾವು ಕೂಡಲಸಂಗಮ ಸಭೆಯಲ್ಲಿ ನಿರ್ಣಯ ಮಾಡಿದ್ದೇವೆ ನಿಪ್ಪಾಣಿ ವಿಧಾನಸಭಾ ಕ್ಷೇತ್ರದಿಂದ ಹೋರಾಟ ಪ್ರಾರಂಭ ಮಾಡುತ್ತೇವೆ ಎಂದರು.</h3> <h3>ಶ್ರಾವಣ ಮಾಸದಲ್ಲಿ ಇಷ್ಟಲಿಂಗ ವಿಶೇಷ ಪೂಜೆಗಳ ಮೂಲಕ ಮತ್ತೆ ಹೋರಾಟ ಪ್ರಾರಂಭ ಮಾಡುತ್ತೇವೆ, ವಿನೂತನ ಹೋರಾಟ ನಡೆಸುತ್ತೇವೆ, ಸಿಎಂ ಹಾಲುಮತ ಸಮಾಜಕ್ಕೆ ಕೇಂದ್ರಕ್ಕೆ ಎಸ್ ಟಿ ಶಿಫಾರಸ್ಸು ಮಾಡಿದ್ದಾರೆ, ಅಲ್ಲಿ ಆ ಜಾಗ ಖಾಲಿ ಆಗುತ್ತದೆ, ಆ ಸ್ಥಾನ ನಮಗೆ ಕೊಡಿಸಲಿ, ಜೊತೆಗೆ ಎಲ್ಲಾ ಲಿಂಗಾಯಿತರಿಗೆ ಓಬಿಸಿ ಮೀಸಲಾತಿ ನೀಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಿ ಎಂದರು..</h3> <h3>ಪ್ರತ್ಯೇಕ ಲಿಂಗಾಯಿತ ಧರ್ಮ ವಿಚಾರ ಮಾತನಾಡಿದ ಅವರು, ಸದ್ಯ ಆ ಹೋರಾಟದ ಬಗ್ಗೆ ಮಾತನಾಡುವುದಿಲ್ಲ, ಜಾಗತಿಕ ಲಿಂಗಾಯಿತ ಮಹಾಸಭಾ ಆ ಹೋರಾಟ ಮುಂದುವರೆಸಿದೆ, ಜಾಮದಾರ್ ಅವರು ಈ ಬಗ್ಗೆ ಹೋರಾಟ ಮುಂದುವರೆಸಿದ್ದಾರೆ, ಪ್ರತ್ಯೇಕ ಧರ್ಮ ಹೋರಾಟಕ್ಕೆ ನನ್ನ ಬೆಂಬಲ ಇದ್ದೇ ಇದೆ, ಪ್ರತ್ಯೇಕ ಧರ್ಮದಿಂದ ಸಂವಿಧಾನ ಮಾನ್ಯತೆ ಸಿಗುತ್ತದೆ, 2A ಮೀಸಲಾತಿ ಹೋರಾಟದಲ್ಲಿರುವ ಕಾರಣ ಅಲ್ಲಿ ಹೋಗಲು ಆಗುತ್ತಿಲ್ಲ, 2A ಮೀಸಲಾತಿ ದಡಕ್ಕೆ ಬಿಡುವ ಕೆಲಸ ಮಾಡುತ್ತಿದ್ದೇನೆ ಎಂದು ಶ್ರೀಗಳು ತಿಳಿಸಿದರು..</h3>