<h3><strong>POWER SAMACHARA | KANNADA NEWS | BREKING NEWS| 13-08-2023..</strong></h3> <h3><strong>ಚಿತ್ರದುರ್ಗ:</strong> ಅವರೆಲ್ಲ ವೀಕೆಂಡ್ ಅಂತಾ ಖುಷಿಯಾಗಿ ಪ್ರವಾಸಕ್ಕೆ ತೆರಳುತ್ತಾ ಇದ್ದರು, ಆದರೆ ಅವರು ಹೋಗುವ ರಸ್ತೆಯ ಮಧ್ಯೆದಲ್ಲಿ ಜವರಾಯ ಕಾದು ಕೂತಿದ್ದ ಅನ್ನಿಸುತ್ತೆ, ರಸ್ತೆಯಲ್ಲಿ ಸಂಚರಿಸುತ್ತಿದ್ದ ಲಾರಿಗೆ ಕಾರ್ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ..</h3> <img class="aligncenter wp-image-2176 size-full" src="https://powersamachara.com/wp-content/uploads/2023/08/chitrdurga-accsident-1-1.jpg" alt="" width="870" height="570" /> <h3>ಹೌದು.. ಲಾರಿಗೆ ಹಿಂಬದಿಯಿಂದ ಕಾರ್ ಡಿಕ್ಕಿ ಹೊಡೆದು ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿದೆ, ಡಿಕ್ಕಿಯಾದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ, ಮೂವರು ಗಾಯಗೊಂಡಿದ್ದು, ಗಾಯಾಳುಗಳನ್ನು ಚಿತ್ರದುರ್ಗ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.</h3> <img class="aligncenter wp-image-2177 size-full" src="https://powersamachara.com/wp-content/uploads/2023/08/chitrdurga-accsident-2.jpg" alt="" width="870" height="570" /> <h3>ವಿಜಯಪುರದಿಂದ ಚಿಕ್ಕಮಗಳೂರಿಗೆ ಪ್ರವಾಸಕ್ಕೆಂದು ಖಾಸಗಿ ಬ್ಯಾಂಕ್ ನೌಕರ ಸಂಗನಬಸವಪ್ಪ ಮತ್ತು ಕುಟುಂಬಸ್ಥರು ತೆರಳುತ್ತಾ ಇದ್ದರು, ಚಾಲಕ ನಿದ್ದೆ ಗಣ್ಣಲ್ಲಿ ಇದ್ದನೇನೋ ಗೊತ್ತಿಲ್ಲ, ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರ್ ಡಿಕ್ಕಿ ಹೊಡೆದಿದೆ, ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ..</h3> <img class="wp-image-2178 size-full alignnone" src="https://powersamachara.com/wp-content/uploads/2023/08/chitrdurga-accsident-3.jpg" alt="" width="870" height="570" /><span style="color: #212121; font-size: 1.563em;">ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕುದರಿ ಸಾಲವಡಗಿ ಮೂಲದ ಸಂಗನಬಸವಪ್ಪ(36), ಪತ್ನಿ ರೇಖಾ(29), ಪುತ್ರ ಅಗಸ್ತ್ಯ(07), ಸಂಬಂಧಿ ಭೀಮಾಶಂಕರ್(26) ಸಾವನ್ನಪ್ಪಿದ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಮತ್ತೋರ್ವ ಪುತ್ರ ಆದರ್ಶ(3), ಪುತ್ರಿ ಅನ್ವಿಕಾ(5) ಹಾಗೂ ಚಾಲಕ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ, ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನೂ ಸ್ಥಳಕ್ಕೆ ಎಸ್ಪಿ ಪರುಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..</span>