<h3><strong>POWER SAMACHARA | KANNADA NEWS | BREKING NEWS| 12-06-2023</strong></h3> <h3><strong>ದಾವಣಗೆರೆ :</strong> ಅನುಮಾನಾಸ್ಪದವಾಗಿ ಹಾಸ್ಟೆಲ್ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ನಗರದ ಹಳೇ ಕುಂದುವಾಡ ಬಳಿಯ ಎಂಬಿ ಸಿಟಿಯಲ್ಲಿ ನಡೆದಿದೆ..</h3> <img class="aligncenter wp-image-1542 size-full" src="https://powersamachara.com/wp-content/uploads/2023/06/hanging-death2-1.jpg" alt="" width="860" height="573" /> <h3>ಕುಂದುವಾಡಲ್ಲಿರುವ ಬಿಸಿಎಂ ಹಾಸ್ಟೆಲ್ ನಲ್ಲಿದ್ದ ಸುದೀಪ್ ಗೌಡ(21) ಸಾವನ್ನಪ್ಪಿದ ವಿದ್ಯಾರ್ಥಿ ಎಂದು ತಿಳಿದು ಬಂದಿದೆ, ಮೂಲತಃ ಹಿರಿಯೂರು ತಾಲ್ಲೂಕಿನ ದಿಂಡಾವರ ಗ್ರಾಮದ ಯುವಕ ಸುದೀಪ್, ಜೆಎಚ್ ಪಟೇಲ್ ಕಾಲೇಜಿನಲ್ಲಿ ಬಿಸಿಎ ಓದುತ್ತಿದ್ದ, ಆದರೆ ಸೋಮವಾರ ಮಧ್ಯಾಹ್ನ ಗಿಡಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ, ನೆಲಕ್ಕೆ ಕಾಲು ತಾಕುವಂತಿದ್ದು, ಅನುಮಾನಕ್ಕೆ ಕಾರಣವಾಗಿದೆ, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ..</h3> <img class="aligncenter wp-image-1537 size-full" src="https://powersamachara.com/wp-content/uploads/2023/06/hanging-death.jpg" alt="" width="860" height="573" /> <h3>ಸ್ಥಳಕ್ಕೆ ವಿದ್ಯಾನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ..</h3>