<h3><strong>POWER SAMACHARA | KANNADA NEWS | BREKING NEWS| 31-05-2023</strong></h3> <h3><strong>ದಾವಣಗೆರೆ:</strong> ನನಗೆ ಟಿಕೆಟ್ ಸಿಕ್ಕಿದ್ದರೆ 20ರಿಂದ 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಿದ್ದೆ, ಕಾಣದ ಕೈಗಳ ಪಿತೂರಿಯಿಂದ ಟಿಕೆಟ್ ತಪ್ಪಿತು ಎಂದು ಹರಿಹರದ ಮಾಜಿ ಶಾಸಕ ಎಸ್ ರಾಮಪ್ಪ ಮೊದಲ ಭಾರೀಗೆ ತಮ್ಮ ಅಸಮದಾನವನ್ನು ಹೊರ ಹಾಕಿದ್ದಾರೆ..</h3> <img class="aligncenter wp-image-1418 size-full" src="https://powersamachara.com/wp-content/uploads/2023/05/s-ramappa-2.jpg" alt="" width="860" height="573" /> <h3><strong>590 ಕೋಟಿ ರೂ. ಅನುದಾನ ತಂದಿದ್ದೇನೆ..</strong></h3> <h3>ದಾವಣಗೆರೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ಸರ್ವೆಗಳಲ್ಲೂ ನನ್ನ ಹೆಸರೇ ಇತ್ತು, ಕಾಣದ ಕೈಗಳಿಂದ ಷ್ಯಡ್ಯಂತ್ರ, ಪಿತೂರಿ ನಡೆದಿದೆ, ನಮ್ಮ ಪಕ್ಷ ವಿರೋಧ ಪಕ್ಷದಲ್ಲಿದ್ದರು ಸಹ ಶಾಸಕನಾಗಿ ಸಾಕಷ್ಟು ಅನುದಾನ ತಂದು ಕೆಲಸ ಮಾಡಿದೆ, 590 ಕೋಟಿ ಅನುದಾನ ತಂದಿದ್ದು, 70ಕೋಟಿ ರೂ. ಕೆಲಸ ನಡೆಯುತ್ತಿದೆ, ಈಗ ನನಗೆ ಟಿಕೆಟ್ ನೀಡಿದ್ದರೆ ಗೆದ್ದು, ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡಲು ಅನುಕೂಲ ಆಗುತ್ತಿತ್ತು, ಆದರೆ ಬಿ ಫಾರಂ ತಪ್ಪಿಸಲಾಯಿತು, ಕಾಗಿನೆಲೆ ಶ್ರೀ, ಪಂಚಮಪೀಠದ ಸ್ವಾಮಿಜಿಗಳು ಟಿಕೆಟ್ ತಪ್ಪಿಸಲು ಪತ್ರ ಬರೆದಿದ್ದಾರೆ ಎಂದು ಹೇಳಲಾಗಿತ್ತು, ಆದರೆ ಸ್ವಾಮಿಜಿಯವರು ಪತ್ರ ಬರೆದಿಲ್ಲ ಎಂದು ಭಾವಿಸಿರುವೆ ಎಂದರು.</h3> <h3><strong>ಎಂಎಲ್ ಸಿ ಮಾಡಿ ಎಂದು ಕೇಳಿದ್ದೇನೆ..</strong></h3> <h3>ಈ ಹಿಂದೆ ಬಿಜೆಪಿ ಗಾಳಿಯಲ್ಲೂ ಗೆದ್ದು ಬಂದಿದ್ದೆ, ಈ ಭಾರೀ ಅತೀ ಹೆಚ್ಚಿನ ಅಂತರದಲ್ಲಿ ಸುಲಭವಾಗಿ ಗೆಲ್ಲುತ್ತಿದೆ, ಆದರೆ ನನಗೆ ಮೋಸ ಆಗಿದೆ, ಗೆಲ್ಲುವಂತಹ ಶಾಸಕನಿಗೆ ಟೆಕೆಟ್ ತಪ್ಪಿಸಲಾಗಿದೆ, ಹೀಗಾಗಿ ಎಂಎಲ್ ಸಿ ಮಾಡಿ ಎಂದು ಕೇಳಿದ್ದೇನೆ, ನಿಗಮ ಮಂಡಳಿ ಸ್ಥಾನ ಕೊಟ್ಟರು ನಿಭಾಯಿಸುತ್ತೇನೆ, ಅಂತಿಮವಾಗಿ ಪಕ್ಷದ ನಿರ್ಧಾರಕ್ಕೆ ಬದ್ದನಾಗಿ ಇರುತ್ತೇನೆ ಎಂದು ರಾಮಪ್ಪ ತಿಳಿಸಿದ್ದಾರೆ..</h3> <img class="aligncenter wp-image-1419 size-full" src="https://powersamachara.com/wp-content/uploads/2023/05/s-ramappa1.jpg" alt="" width="860" height="573" /> <h3><strong>9 ವರ್ಷವಾದರೂ ಮೋದಿ 15 ಲಕ್ಷ ರೂ. ಅಕೌಂಟ್ ಗೆ ಹಾಕಿದ್ದಾರಾ: ಎಸ್. ರಾಮಪ್ಪ ಪ್ರಶ್ನೆ..</strong></h3> <h3>ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಮುನ್ನ ನೀಡಲಾಗಿದ್ದ ಗ್ಯಾರಂಟಿ ಯೋಜನೆಗಳನ್ನು ರಾಜ್ಯ ಸರ್ಕಾರ ಶೀಘ್ರವೇ ಅನುಷ್ಠಾನಗೊಳಿಸಲಿದೆ, ಗ್ಯಾರಂಟಿ ಯೋಜನೆಗಳ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತಿರುವುದು ಸರಿಯಲ್ಲ ಎಂದು ಮಾಜಿ ಶಾಸಕ ಎಸ್ ರಾಮಪ್ಪ ಹೇಳಿದರು.</h3> <h2><strong>ಗ್ಯಾರಂಟಿ ಕೊಡ್ತೀವಿ ತಡೀರಿ..!</strong></h2> <h3>ವಿಧಾನಸಭಾ ಚುನಾವಣೆ ಪೂರ್ವದಲ್ಲಿ ರಾಜ್ಯದ ಜನತೆಗೆ 5 ಗ್ಯಾರಂಟಿಗಳನ್ನು ಪ್ರಕಟಿಸಿದ್ದು ಶೀಘ್ರ ಅನುಷ್ಠಾನಗೊಳ್ಳಲಿವೆ. ಅದರಂತೆ ರಾಜ್ಯದ ಜನರು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆಯಿಟ್ಟು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಸಂಪುಟದ ಸದಸ್ಯರುಗಳು ಅಧಿಕಾರ ಪ್ರತಿಜ್ಞಾವಿಧಿ ಸ್ವೀಕರಿಸಿದ ಮೊದಲ ಸಂಪುಟ ಸಭೆಯಲ್ಲಿಯೇ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಕ್ರಮ ತೆಗೆದುಕೊಂಡಿದ್ದು, ಯೋಜನೆಗಳ ಅನುಷ್ಟಾನಕ್ಕೆ ಸಂಬಂಧಿಸಿದಂತೆ ರೂಪು ರೇಷೆಗಳನ್ನು ಬಿಡುವಿಲ್ಲದೇ ತಯಾರು ಮಾಡುತ್ತಿದ್ದಾರೆ, ಆದರೆ ಸೋಲಿನ ಹತಾಶೆಯಲ್ಲಿರುವ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ನಡೆಸುತ್ತಿರುವುದು ಖಂಡನೀಯ ಎಂದು ತಿಳಿಸಿದರು..</h3> <h2><strong>ಬಿಜೆಪಿಗೆ ಸೋಲಿನ ಹತಾಷೆ..!</strong></h2> <h3>ಕಾಂಗ್ರೆಸ್ ಪಕ್ಷ ನುಡಿದಂತೆ ಈ ಹಿಂದೆಯೂ ನಡೆದಿದೆ. ಈಗಲೂ ಸಹ ನುಡಿದಂತೆ ನಡೆಯಲಿದೆ, ಸರ್ಕಾರ ರಚನೆಯಾಗಿ 15 ದಿನದಲ್ಲೇ ಈ ರೀತಿಯ ಟೀಕೆ ಮಾಡುವುದು ತರವಲ್ಲ. ಸೋಲಿನ ಹತಾಷೆಯಿಂದ ಕೆಲವು ಪ್ರತಿಪಕ್ಷದ ನಾಯಕರುಗಳು ಕೆಲವೆಡೆ ಜನರನ್ನು ಸರ್ಕಾರದ ವಿರುದ್ಧ ಎತ್ತಿಗಟ್ಟುವ ಕೆಲಸವನ್ನು ಸಹ ಮಾಡುತ್ತಿದ್ದಾರೆ. ನಮ್ಮ ಯೋಜನೆಗಳ ಬಗ್ಗೆ ಕೇಳುವ ಬಿಜೆಪಿ ನಾಯಕರುಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರದ ಜನತೆಗೆ ತಲಾ ಒಬ್ಬಬ್ಬರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ತಿಳಿಸಿ 9 ವರ್ಷ ಕಳೆದರೂ 15 ರೂ ಆದರೂ ಹಾಕಿದ್ದಾರ, ಅದರ ಬಗ್ಗೆ ಯಾಕೆ ಮೌನ ವಹಿಸಿದ್ದಾರೆ ಎಂಬುದನ್ನು ತಿಳಿಸಬೇಕು ಎಂದು ಹರಿಹಾಯ್ದರು.</h3> <h3>ಪಕ್ಷ ನೀಡಿರುವ ಎಲ್ಲಾ ಗ್ಯಾರಂಟಿ ಯೋಜನೆಗಳು ಸಹ ಜಾರಿಗೆ ಬರಲಿವೆ. ಜನರ ಆಶಯಗಳಿಗೆ ಸರ್ಕಾರ ಸ್ಪಂದಿಸಲಿದೆ, ಯಾವುದೇ ಅಪಪ್ರಚಾರಗಳಿಗೆ ಜನತೆ ಕಿವಿಗೊಡದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಉತ್ತರ ನೀಡಬೇಕು ಎಂದರು.</h3> <h3>ಗೋಷ್ಠಿಯಲ್ಲಿ, ಬಿ. ರೇವಣಸಿದ್ದಪ್ಪ, ಮುರುಗೇಶಪ್ಪ, ನಾಗೇಂದ್ರಪ್ಪ,ಜಿ. ಕೃಷ್ಣಮೂರ್ತಿ, ಶಶಿ ರೆಡ್ಡಿ, ರೆಹಮಾನ್ ಖಾನ್, ಪ್ರಸನ್ನ ಬೆಳಕೆರೆ, ಗಣೇಶ್ ಮೆಹರ್ವಾಡೆ, ಅಬು ಸಲೇಹಾ ಮತ್ತಿತರರು ಹಾಜರಿದ್ದರು..</h3>