POWER SAMACHARA | KANNADA NEWS | 08-04-2023
ದಾವಣಗೆರೆ: ಆಕೆ ಅವರ ಮನೆಯ ಹಿರಿಯ ಮಗಳು ಓದುವುದರ ಜೊತೆಗೆ ತಂದೆ ತಾಯಿಗೂ ಆಸರೆಯಾಗಿದ್ದಳು. ಕಾಲೇಜು ಮುಗಿಸಿ ಜಮೀನಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು.. ಆದರೆ ವಿಧಿ ಸಲಗದ ರೂಪದಲ್ಲಿ ಬಂದಿದ್ದು, ಬಾರದೂರಿಗೆ ಪ್ರಯಾಣ ಬೆಳಸಿದ್ದಾಳೆ.. ಒಂಟಿ ಸಲಗದ ಆರ್ಭಟಕ್ಕೆ ಹತ್ತಾರೂ ಗ್ರಾಮದ ಜನರು ಭಯಭೀತರಾಗಿದ್ದು, ಐದಾರು ಜನರಿಗೆ ಗಾಯಗೊಳಿಸಿದ್ದು ಸಲಗ ಆರ್ಭಟ ಮುಂದುವರೆದಿದೆ..
ಒಂಟಿ ಸಲಗ ಆರ್ಭಟಕ್ಕೆ ನಲುಗಿದ ಗ್ರಾಮಸ್ಥರು, ಆನೆ ನಡೆದಿದ್ದೇ ದಾರಿ ಎಂದು ಹೊರಟ ಸಲಗ, ಇದಕ್ಕೆಲ್ಲ ಕಾರಣ ಇಂದು ಬೆಳ್ಳಂಬೆಳಗ್ಗೆ ಒಂಟಿ ಸಲಗದ ಆರ್ಭಟವೇ ಕಾರಣ.. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೋಮ್ಲಾಪುರ, ಕಾಶಿಪುರ ಸೂಳೆಕೆರೆ ಸೇರಿದಂತೆ ಹಲವು ಕಡೆಗಳಲ್ಲಿ ಒಂಟಿ ಸಲಗದ ದಾಳಿಯಾಗಿದ್ದು, ದಾಳಿಗೆ ಮೂರ್ನಾಲ್ಕು ಜನರು ಗಾಯಗೊಂಡಿದ್ದು ಒಬ್ಬ ಯುವತಿ ಬಲಿಯಾಗಿದ್ದಾಳೆ.. ಸೋಮ್ಲಾಪುರದ ಕವನ ಪ್ರಥಮ ಪಿಯುಸಿ ಮುಗಿಸಿದ್ದು ಕಾಲೇಜ್ ಗೆ ರಜೆ ಇದ್ದ ಹಿನ್ನಲೆ ಜಮೀನಿಗೆ ತಾಯಿ ಮಂಜುಳ ಜೊತೆ ಕವನ ತೆರಳಿದ್ದಳು.. ಬಿಸಿಲು ಹೆಚ್ಚಾಗಿದ್ದ ಹಿನ್ನಲೆ ಬೆಳಗ್ಗೆಯೇ 7 ಗಂಟೆ ಸುಮಾರಿಗೆ ತಾಯಿ ಜೊತೆ ಅವರೆ ಕಾಯಿ ಬಿಡಿಸುತ್ತಿದ್ದಳು, ಏಕಾಏಕಿ ತಾಯಿ ಮಗಳ ಮೇಲೆ ಹಿಂದೆಯಿಂದ ದಾಳಿ ಮಾಡಿದ ಕಾಡಾನೆ, ಸೊಂಡಿಲಿನಿಂದ ಕವನಾಳನ್ನು ಬಿಸಾಕಿದೆ.. ತಾಯಿ ಮಂಜುಳಿಗೆ ಕೂಡ ಗಂಭೀರ ಗಾಯ ಮಾಡಿದ್ದು ಇಬ್ಬರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯ ದಲ್ಲಿ ಕವನ ಸಾವನ್ನಪ್ಪಿದ್ದು, ಮಂಜುಳ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಶವಗಾರದ ಮುಂದೆ ಬಾಲಕಿಯ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು..
ಚನ್ನಗಿರಿಯಲ್ಲಿ ಆನೆ ಆರ್ಭಟ..
ಇನ್ನೂ ಚನ್ನಗಿರಿ ಸುತ್ತಾಮುತ್ತ ಆನೆ ದಾಳಿ ಇದೇನು ಹೊಸದೇನಲ್ಲ, ಕಳೆದ ಮೂರು ವರ್ಷಗಳ ಹಿಂದೆ ಆನೆ ದಾಳಿ ಮಾಡಿದ್ದು, ಒಬ್ಬ ಸಾವನ್ನಪ್ಪಿದ್ದು, ಹಲವಾರು ಜನರಿಗೆ ಗಂಭೀರ ಗಾಯಗೊಂಡಿದ್ದರು. ಈಗ ಮತ್ತೆ ದಾಳಿ ನಡೆಸಿದ್ದು, ಕಾಶಿಪುರ ಸೋಮ್ಲಾಪುರದ ಮೂರ್ನಾಲ್ಕು ಜನರಿಗೆ ಗಾಯಗೊಳಿಸಿದೆ.. ಅಲ್ಲದೆ ಇತ್ತ ಅರಣ್ಯ ಇಲಾಖೆಯವರು ಹಾಗೂ ಪೊಲೀಸರು ಆನೆಯನ್ನು ಕಾಡಿಗಟ್ಟುವ ಪ್ರಯತ್ನ ನಡೆಸುತ್ತಿದ್ದು, ಆನೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಿಗದೆ ತಪ್ಪಿಸಿಕೊಳ್ಳುತ್ತಿದೆ.. ಇನ್ನು ಗಾಯಗೊಂಡವರಿಗೆ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ..
ಕಾಡು ನಾಶ, ನಾಡಿನತ್ತ ಪ್ರಾಣಿ ಸಂಕುಲ
ಒಟ್ಟಾರೆಯಾಗಿ ಕಾಡನ್ನು ನಾಶ ಪಡುಸುತ್ತಾ ಹೋದರೆ ಕಾಡುಪ್ರಾಣಿಗಳು ನಾಡಿನೊಳಗೆ ನುಗ್ಗುವುದು ಸಾಮಾನ್ಯ, ಆದರೆ ಇಂತಹ ಅವಘಡಗಳಲ್ಲಿ ಅಮಾಯಕ ಜೀವಗಳು ಬಲಿಯಾಗುತ್ತಿದ್ದು, ಕಾಡನ್ನು ನಾಶ ಮಾಡದೇ ಮುನ್ನೆಚ್ಚರಿಕೆ ವಹಿಸಬೇಕಿದೆ..