<strong>POWER SAMACHARA | KANNADA NEWS | 13-04-2023</strong> <strong>ದಾವಣಗೆರೆ ;</strong> ರೈತ ಮೋರ್ಚಾ ದಾವಣಗೆರೆ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ಅವರಿಗೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆ ಮಾಡುವ ಮೂಲಕ ಹೈಕಮಾಂಡ್ ಹೊಸ ಮುಖಗಳಿಗೆ ಮಣೆ ಹಾಕುವುದರ ಜೊತೆಗೆ ನಿಷ್ಠಾವಂತ ಕಾರ್ಯಕರ್ತನಿಗೆ ಅವಕಾಶ ಕಲ್ಪಿಸಿ ಕೊಟ್ಟಿದೆ.. <img class="alignnone size-medium wp-image-892" src="https://powersamachara.com/wp-content/uploads/2023/04/IMG-20221223-WA0032-300x261.jpg" alt="" width="300" height="261" /> <h2>ಬಡವರ ಪರ ಮಿಡಿದ ಹೃದಯವಂತ..</h2> ಲೋಕಿಕೆರೆ ನಾಗರಾಜ್ ಅವರು ರೈತ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ರೈತ ಪರ ಕೆಲಸಗಳಲ್ಲಿ ತೊಡಗಿಕೊಂಡವರು, ಅಷ್ಟೆ ಯಾಕೆ ಕೊರೊನಾ ಸಂದರ್ಭದಲ್ಲಿ ಆಟೋ ಚಾಲಕರು, ಬಡವರು, ಕೂಲಿಕಾರ್ಮಿಕರು, ಟ್ಯಾಕ್ಸಿ ಚಾಲಕರು, ಕಲಾವಿದರು ಸೇರಿದಂತೆ ಸಾವಿರಾರು ಮಂದಿಗೆ ಆಹಾರದ ಕಿಟ್ ಸೇರಿದಂತೆ ಹಣದ ಸಹಾಯ ಮಾಡಿ ಮೆಚ್ಚುಗೆಗೆ ಪಾತ್ರವಾಗಿದ್ದರು, ಈ ಸಮಾಜ ಮುಖಿ ಕೆಲಸಗಳನ್ನ ಮೆಚ್ಚಿ ಬಿಜೆಪಿ ವರಿಷ್ಠರು ಲೋಕಿಕೆರೆ ನಾಗರಾಜ್ ಅವರಿಗೆ ಟಿಕೆಟ್ ಘೋಷಣೆ ಮಾಡುವ ಮೂಲಕ ಅವಕಾಶ ಕಲ್ಪಿಸಿದೆ.. ಇನ್ನೂ ಈಗಾಗಲೇ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಪ್ರಚಾರ ಶುರು ಮಾಡಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನೇರ ನೇರ ಪೈಪೋಟಿ ಎದುರಿಸುವುದರಲ್ಲಿ ಅನುಮಾನವಿಲ್ಲ ಎನ್ನಲಾಗ್ತಿದೆ.. <img class="alignnone size-medium wp-image-893" src="https://powersamachara.com/wp-content/uploads/2023/04/IMG-20230127-WA0075-300x300.jpg" alt="" width="300" height="300" /> <h3>ದಕ್ಷಿಣಕ್ಕೆ ಅಜಯ್ ಕುಮಾರ್, ಮಾಯಕೊಂಡಕ್ಕೆ ಬಸವರಾಜ್ ನಾಯ್ಕ್..</h3> ಇನ್ನೂ ತೀವ್ರ ಕುತೂಹಲ ಕೆರಳಿಸಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಕಾರ್ಪೋರೇಟರ್ ಹಾಗೂ ಮಾಜಿ ಮೇಯರ್ ಅಜಯ್ ಕುಮಾರ್ ಅವರಿಗೆ ಹೈಕಮಾಂಡ್ ಮಣಿ ಹಾಕಿದೆ, ಮಾಯಕೊಂಡಕ್ಕೆ ಮಾಜಿ ಶಾಸಕ ಬಸವರಾಜ್ ನಾಯ್ಕ್ ರಿಗೆ ಮತ್ತೆ ಅದೃಷ್ಟ ಒಲಿದು ಬಂದಿದ್ದು, ಚನ್ನಗಿರಿಗೆ ತುಮ್ಕೋಸ್ ಮಾಜಿ ಅಧ್ಯಕ್ಷ ಶಿವಕುಮಾರ್ ಗೆ ಟಿಕೆಟ್ ನೀಡಲಾಗಿದೆ. <p style="text-align: right;"><img class="alignnone size-medium wp-image-894" src="https://powersamachara.com/wp-content/uploads/2023/04/IMG-20230123-WA0094-298x300.jpg" alt="" width="298" height="300" /></p> <p style="text-align: center;"><img class="alignnone size-medium wp-image-895" src="https://powersamachara.com/wp-content/uploads/2023/04/IMG-20230412-WA0084-300x300.jpg" alt="" width="300" height="300" /></p>