POWER SAMACHARA | KANNADA NEWS | BIG BREKING NEWS|20-05-2023
ದಾವಣಗೆರೆ : “ದೇವರ ಹೆಸರಿನಲ್ಲಿ” ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ..
![](https://powersamachara.com/wp-content/uploads/2023/05/cm-siddaramayya-padagrahana2.jpg)
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪದಗ್ರಹಣ ಸಮಾರಂಭ ನಡೆಯಿತು.
![](https://powersamachara.com/wp-content/uploads/2023/05/cm-ayke.jpg)
ಭಾಗ್ಯಗಳ ಸರದಾರ ಸಿದ್ದರಾಮಯ್ಯ ದೇವರ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್, ಗಂಗಾಧರ ಅಜ್ಜ ಹೆಸರಿನಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ರಾಜ್ಯಪಾಲರಾದ ಥಾವರ್ ಚಾಂದ್ ಗೆಹ್ಲೋಟ್ ಪ್ರಮಾಣ ವಚನ ಬೋಧಿಸಿದ್ದಾರೆ..
![](https://powersamachara.com/wp-content/uploads/2023/05/dcm-dk-padagrahana1.jpg)
ಎಂಟು ಸಚಿವರು ಪ್ರಮಾಣ ವಚನ..
ಎಂಟು ಮಂದಿ ಶಾಸಕರಿಗೆ ಸಚಿವ ಸ್ಥಾನ ದೊರಕಿದೆ, ಸಂಪುಟ ದರ್ಜೆ ಸಚಿವರಾಗಿ ಡಾ. ಜಿ ಪರಮೇಶ್ವರ್, ಕೆಎಚ್ ಮುನಿಯಪ್ಪ, ಕೆಜೆ ಜಾರ್ಜ್, ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ, ಜಮೀರ್ ಖಾನ್ ಇದೇ ವೇಳೆ ಅಧಿಕಾರ ಸ್ವೀಕಾರ ಮಾಡಿದರು..
![](https://powersamachara.com/wp-content/uploads/2023/05/cm-siddaramayya-padagrahana-rahul-karge.jpg)