<h3><strong>POWER SAMACHARA | KANNADA NEWS | BREKING NEWS| 23-07-2023..</strong></h3> <h2><strong>Power Exclusive</strong></h2> <h3><strong>ದಾವಣಗೆರೆ:</strong> ಖಾಸಗಿ ಬಸ್ ಮತ್ತು ಬುಲೆರೋ ವಾಹನ ನಡುವೆ ಡಿಕ್ಕಿಯಾಗಿ, ಕೂದಲೆಳೆ ಅಂತರದಲ್ಲಿ ಕೆರೆಗೆ ಬೀಳುತ್ತಿದ್ದ ಬಸ್ ಪಾರಾಗಿರುವ ಘಟನೆ ದಾವಣಗೆರೆ ತಾಲೂಕಿನ ಕೊಡಗನೂರು ಕೆರೆ ಏರಿ ಮೇಲೆ ನಡೆದಿದೆ..</h3> <img class="aligncenter wp-image-1997 size-full" src="https://powersamachara.com/wp-content/uploads/2023/07/kodagunu-accsident-2.jpg" alt="" width="860" height="573" /> <h3>ದೃಶ್ಯ ಮೈ ಜುಮ್ಮೆನ್ನೆಸುವಂತಿದೆ, ಕೆರೆಗೆ ಇನ್ನೆನ್ನು ಬಸ್ ಪಲ್ಟಿಯಾಯಿತು ಎಂದುಕೊಂಡ ಪ್ರಯಾಣಿಕರಿಗೆ ಅದೃಷ್ಟ ಚೆನ್ನಾಗಿತ್ತೇನೊ, ಕೂದಲೆಳೆ ಅಂತರದಲ್ಲಿ ಬಸ್ ನಿಂತಿದೆ..</h3> <img class="aligncenter wp-image-2002 size-full" src="https://powersamachara.com/wp-content/uploads/2023/07/kodaganuru-accsident-3.jpg" alt="" width="860" height="573" /> <h3></h3> <h3>ಅದೃಷ್ಟವಶಾತ್ ಬಸ್ ನಲ್ಲಿದ್ದ ಪ್ರಯಾಣಿಕರು ಪಾರಾಗಿದ್ದಾರೆ, ಬುಲೆರೋ ವಾಹನ ಚಾಲಕ ಗಾಯಗೊಂಡಿದ್ದು, ದಾವಣಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ, ದಾವಣಗೆರೆ ಕಡೆಯಿಂದ SMMS ಖಾಸಗಿ ಬಸ್ ಮತ್ತು ಹೊಳಲ್ಕೆರೆ ಕಡೆಯಿಂದ ತೆರಳುತ್ತಿದ್ದ ಹೆದ್ನೆ ಗ್ರಾಮದ ಬುಲೇರೋ ನಡುವೆ ಡಿಕ್ಕಿ ಸಂಭವಿಸಿದ್ದು, ಈ ವೇಳೆ ಸ್ವಲ್ಪದರಲ್ಲಿ ಕೆರೆಗೆ ಬೀಳುತ್ತಿದ್ದ ಬಸ್ ಪಾರಾಗಿದೆ, ಬಸ್ ಕೆರೆಗೆ ಬಿದ್ದಿದ್ದರೆ ನಾವೆಲ್ಲ ಸಾವನ್ನಪ್ಪುತ್ತಿದ್ದೆವು ಎಂದು ಎದುಸಿರು ಬಿಡುತ್ತಾ ಪ್ರಯಾಣಿಕರು ಮಾತನಾಡಿಕೊಳ್ಳುತ್ತಿದ್ದು ಕಂಡು ಬಂದಿದೆ, ಇನ್ನೂ ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ..</h3>