POWER SAMACHARA | KANNADA NEWS | BREKING NEWS| 25-04-2025
ದಾವಣಗೆರೆ: ಸಾಧನೆ ಯಾರಪ್ಪನ ಸ್ವತ್ತಲ್ಲ ಎಂಬ ಮಾತು ನಿಜ ಆಗ್ಬಿಟ್ಟಿದೆ, ಕುರಿ ಕಾಯುತ್ತಲೇ ಈ ಯುವಕ ದೇಶವೇ ಮೆಚ್ಚುವಂತ ಸಾಧನೆ ಮಾಡ್ಬಿಟ್ಟಿದ್ದಾನೆ, ಇವನ ಕಷ್ಟ ಕೇಳಿದ್ರೆ ನಿಜಕ್ಕೂ ಕೂಡ ಕಣ್ಣೀರು ಬರೋದು ಗ್ಯಾರಂಟಿ, ಈ ಮಧ್ಯೆ ಯುಪಿಎಸ್ಸಿ ಪಾಸ್ ಮಾಡಿ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾನೆ, ಕುರಿಗಾಯಿಯ ಯಶೋಗಾಥೆ ಇಲ್ಲಿದೆ ನೋಡಿ..
ಹೌದು.. ಇತ ಬೆಳಗಾವಿ ಹೊರವಲಯದಲ್ಲಿ ಕುರಿ ಕಾಯ್ಕೊಂಡು ಇದ್ದ, ಇತನಿಗೆ ದೆಹಲಿಯಲ್ಲಿರುವ ಆತನ ಸ್ನೇಹಿತನಿಂದ ಮೊಬೈಲ್ ಫೋನ್ಗೆ ಕರೆ ಬಂದಿದೆ, ಆ ಕರೆ ಇವನ ಜೀವನದ ಚಿತ್ರಣ ಬದಲಿಸಿ ಬಿಟ್ಟಿದೆ, ಆ ಕರೆ ಇವನನ್ನ ಅತೀ ಎತ್ತರದ ಸ್ಥಾನಕ್ಕೆ ಕೂರಿಸುವ ಕರೆ ಆಗಿತ್ತು, ಆ ಕರೆ ಬೇರೆನೂ ಅಲ್ಲ ಯುಪಿಎಸ್ ಸಿ ಪರೀಕ್ಷೆಯಲ್ಲಿ 551ನೇ ರ್ಯಾಂಕ್ ಪಡೆದಿದ್ದಾನೆ ಎಂಬ ಕರೆ ಸಡಗರಕ್ಕೆ ಕಾರಣವಾಗ್ಬಿಟ್ಟಿತ್ತು, ಬೀರದೇವ ಡೋಣೆ ದೇಶವೇ ತಿರುಗಿ ನೋಡುವಂಥ ಸಾಧನೆ ಮಾಡಿದ್ದಾರೆ. ಸಾಧನೆಗೆ ಬಡತನ, ಮತ- ಅಂತಸ್ತು ಅಡ್ಡಿಯಾಗುವುದಿಲ್ಲ ಎಂದು ತೋರಿಸಿದ್ದಾರೆ. ಕುರಿ ಕಾಯುವ ಕಾಯಕದ ಜತೆಗೇ ಸ್ಫೂರ್ತಿಯ ಕಾರಂಜಿಯಾಗಿ ಹೊರ ಹೊಮ್ಮಿದ್ದಾನೆ..
ಕುರಿ ಕಾಯಲು ಬೆಳಗಾವಿಗೆ ಬಂದಿದ್ದ ಬೀರದೇವ
15 ದಿನಗಳ ಹಿಂದೆ ತಂದೆ- ತಾಯಿಗೆ ನೆರವಾಗಲು ಕುರಿ ಕಾಯುತ್ತ ಬೆಳಗಾವಿಗೆ ಬಂದಿದ್ದರು ಬೀರದೇವ. ಐಪಿಎಸ್ ಆಗುವ ಕನಸಿನ ಬುತ್ತಿ ಅವರು ಇದ್ದಲ್ಲಿಗೇ ಹುಡುಕಿಕೊಂಡು ಬಂದಿದೆ. ಬೀರದೇವ ಮೂಲತ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಯಮಗೆ ಗ್ರಾಮದವರು. ತಂದೆ ಸಿದ್ದಪ್ಪ, ತಾಯಿ ಬಾಲಾಬಾಯಿ ಕುರಿಗಾಹಿಗಳು, ಪಾಲಕರು ಜಿಲ್ಲೆಯ ಹದ್ದಿಯಲ್ಲೇ ಕುರಿ ಮೇಯಿಸುತ್ತಾರೆ. ಬೀರದೇವ ಸೋದರ ಮಾವಂದಿರು ಬೆಳಗಾವಿಯಲ್ಲಿ ಕುರಿ ಹಿಂಡು ಹೊಂದಿದ್ದಾರೆ. ಸಮಯ ಸಿಕ್ಕಾಗ ಈ ಸಾಧಕ ಇಲ್ಲಿಗೇ ಬಂದು ಕುರಿ ಕಾಯುವುದು ರೂಢಿ ಮಾಡಕೊಂಡಿದ್ದ, ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆಯಾದ ಸಂಗತಿ ಕೇಳಿ ಕುಟುಂಬದವರ ಸಂತಸಕ್ಕೆ ಪಾರವೇ ಇಲ್ಲ. ಆ ಆನಂದವನ್ನೂ ಅವರು ಕುರಿಗಳ ಮಧ್ಯದಲ್ಲೇ ಸಂಭ್ರಮಿಸುತ್ತಿದ್ದಾರೆ. ಎಸ್ಎಸ್ಎಲ್ಸಿ ಓದಿರುವ ಅವರ ತಂದೆ, ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದರು. ಅಣ್ಣ ವಾಸುದೇವ ಮಿಲಿಟರಿ ಸೇರಿದ ಬಳಿಕ ಬೀರದೇವ ಯುಪಿಎಸ್ಸಿಗೆ ಸಿದ್ಧತೆ ಶುರು ಮಾಡಿದರು. ಹಲವು ದಾನಿಗಳು, ಸಿಎಸ್ಆರ್ ಫಂಡ್ ನೀಡುವವರಿಂದಲೂ ಹಣದ ನೆರವು ಪಡೆದರು.
ಮೊಬೈಲ್ ಬಿಟ್ಟೆ, ಸಾಮಾಜಿಕ ಜಾಲತಾಣದಿಂದ ದೂರ ಉಳಿದೆ.
ನಾಲ್ಕನೇ ಪ್ರಯತ್ನದಲ್ಲಿ ಯಶಸ್ಸು ಗಳಿಸಿದ್ದಾರೆ. ದಿನವೂ ಎಂಟು ತಾಸು ಓದುವುದು ರೂಢಿ. ಪ್ರತಿ ತಾಸಿಗೂ ಐದು ನಿಮಿಷ ಬಿಡುವು ಪಡೆಯುತ್ತೇನೆ. ಮಿದುಳು ಸ್ವಲ್ಪ ನಿರಾಳ ಆಗಲು ಇದು ಮುಖ್ಯ. ರಾತ್ರಿ 11ಕ್ಕೆ ಮಲಗಿ, ಬೆಳಿಗ್ಗೆ 7.30ಕ್ಕೆ ಏಳುತ್ತೇನೆ. ದೈನಂದಿನ ಕೆಲಸಗಳ ಜತೆಗೇ 8 ತಾಸು ಗಟ್ಟಿಯಾಗಿ ಓದಲು ಸಾಧ್ಯವಿದೆ. ಮೊಬೈಲ್ ಬಿಟ್ಟೆ, ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದೆ. ಅವು ನಮ್ಮನ್ನು ವ್ಯಾಕುಲತೆಗೆ ತಳ್ಳುತ್ತವೆ. ಪ್ರತಿ ದಿನ ಒಂದು ತಾಸು ಗ್ರಂಥಾಲಯದಲ್ಲಿ ಪತ್ರಿಕೆಗಳನ್ನು ಕಡ್ಡಾಯ ಓದುತ್ತೇನೆ ಎಂದು ಬೀರದೇವ ತನ್ನ ಓದಿನ ಬಗ್ಗೆ ತಿಳಿಸಿದ್ದಾನೆ.
ಕನ್ನಡವೋ, ಮರಾಠಿಯೋ, ಇಂಗ್ಲಿಷ್ಟೋ… ಯಾವುದು ಸುಲಭವೋ ಅದೇ ಮಾಧ್ಯಮ ಆಯ್ಕೆ ಮಾಡಿಕೊಳ್ಳಬೇಕು. ಎಲ್ಲದಕ್ಕೂ ಮುಖ್ಯವಾಗಿ ಬೇಕಿರುವುದು ತನ್ಮಯತೆ. ಅದೇ ಯಶಸ್ಸಿನ ಮೊದಲ ಮೆಟ್ಟಿಲಾಗುತ್ತದೆ, ಚಂಚಲತೆಯಿಂದ ಹೊರ ಬರಬೇಕು, ನನ್ನನ್ನು ನಾನೇ ಶೋಧಿಸಿಕೊಂಡು ಮೂರು ಬಾರಿ ಏಕೆ ವಿಫಲನಾದೆ ಎಂದು ಖಾತ್ರಿ ಮಾಡಿಕೊಂಡೆ. ಚಂಚಲತೆ ಮೆಟ್ಟಿ ನಿಂತೆ. ಯಶಸ್ಸು ಸಿಕ್ಕಿತು. ಪರಿಶ್ರಮಕ್ಕೆ ಫಲ ಸಿಕ್ಕಿದೆ.
ಪ್ರಾಥಮಿಕ ಪ್ರೌಢಶಾಲೆ ಪಿಯು ಶಿಕ್ಷಣ ಮರಾಠಿಯಲ್ಲಿ ಸರ್ಕಾರಿ ಶಾಲೆಗಳಲ್ಲೇ ಮುಗಿಸಿದೆ. ಪುಣೆಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದೆ. ಯುಪಿಎಸ್ಸಿ ಟಾಪರ್ಗಳನ್ನು ನೋಡಿ ನನ್ನಲ್ಲಿ ಕನಸು ಮೊಳೆಯಿತು. ದೆಹಲಿಗೆ ಹೋಗಿ ಕೋಚಿಂಗ್ ಪಡೆದು ಬಂದೆದ್ದೆ. ಹಿರಿಯರಾದ ಸವಿತಾ ಕುಲಕರ್ಣಿ, ನಿಶಾಂತ ಮತ್ತು ಕೋಮಲ್ ಅಧ್ಯಯನ ಸಾಮಗ್ರಿ ನೀಡಿ ನೆರವಾದರು. ಮತ್ತೊಮ್ಮೆ ಪುಣೆಯಲ್ಲಿ ಕೋಚಿಂಗ್ ಪಡೆದೆ. ಹಣ ಹೋದರೂ ಚಿಂತೆಯಿಲ್ಲ ಅವಕಾಶಗಳು ಕಳೆದು ಹೋಗಬಾರದು ಎಂಬುದು ನನ್ನ ಅನಿಸಿಕೆ. ಎಷ್ಟೇ ಆತ್ಮಸ್ಥೆರ್ಯವಿದ್ದರೂ ಒಮ್ಮೆ ಕೋಚಿಂಗ್ ಪಡೆಯುವುದು ಅವಶ್ಯಕ ಎಂದಿದ್ದಾರೆ..