<h3><strong>POWER SAMACHARA | KANNADA NEWS | BREKING NEWS| 21-06-2023..</strong></h3> <h3><strong>ದಾವಣಗೆರೆ:</strong> ಶಾಲಾ-ಕಾಲೇಜು ತರಗತಿ ಶುರುವಾಗುವ ಸಮಯ ಮತ್ತು ಬಿಡುವ ಸಂದರ್ಭದಲ್ಲಿ ಹಾಗೂ ವಾಹನ ದಟ್ಟಣೆ ಹೆಚ್ಚಿರುವ ವೇಳೆ ನಗರದಲ್ಲಿ ಲಾರಿಗಳ ಸಂಚಾರ ನಿರ್ಭಂಧಿಸಲಾಗಿದೆ ಎಂದು ದಾವಣಗೆರೆಯಲ್ಲಿ ಎಸ್ಪಿ ಡಾ. ಅರುಣ್ ತಿಳಿಸಿದ್ದಾರೆ..</h3> <img class="aligncenter wp-image-1668 size-full" src="https://powersamachara.com/wp-content/uploads/2023/06/sp-arun.jpg" alt="" width="860" height="573" /> <h3>ನಗರದ ಹಳೇ ಕುಂದುವಾಡದಲ್ಲಿ ಬಾಲಕಿ ಮೇಲೆ ಲಾರಿ ಹರಿದು ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಳು, ಈ ಕುರಿತು ಮಾಧ್ಯಮಗಳು ವಿಸ್ತೃತ ವರದಿ ಪ್ರಸಾರ ಮಾಡಿದ್ದವು ಹಾಗೂ ವಿವಿಧೆಡೆ ಶಾಲಾ ಕಾಲೇಜ್ ಗಳ ವಿದ್ಯಾರ್ಥಿಗಳ ಓಡಾಟ ಸಂದರ್ಭದಲ್ಲಿ ಆದ ಕೆಲ ಘಟನೆ ಹಾಗೂ ಬೆಳಿಗ್ಗೆ ಸಂಜೆ ವಾಹನ ದಟ್ಟಣೆ ಹೆಚ್ಚಾಗಿರುವ ಕಾರಣ ಬೆಳಿಗ್ಗೆ 9 ರಿಂದ 11ರವರೆಗೆ ಮತ್ತು ಸಂಜೆ 4ರಿಂದ 6 ರವರೆಗೆ ಲಾರಿ ಸಂಚಾರಕ್ಕೆ ಅವಕಾಶ ಇಲ್ಲ ಎಂದು ಎಸ್ಪಿ ಸೂಚನೆ ನೀಡಿದ್ದಾರೆ, ಈ ಹಿಂದೆಯೂ ಸಹ ಬೆಳಿಗ್ಗೆ ಮತ್ತು ಸಂಜೆ ಅವಧಿಗೆ ಭಾರೀ ಲಾರಿ ಪ್ರವೇಶ ನಿರ್ಭಂಧಿಸಲಾಗಿತ್ತು, ಆದರೆ ಲಾರಿ ಓಡಾಟ ಹೆಚ್ಚಾದ ಹಿನ್ನಲೆ ಲಾರಿ ಸಂಚಾರ ನಿಷೇಧಿಸಿ ಮತ್ತೊಮ್ಮೆ ಎಸ್ಪಿ ಸೂಚನೆ ಹೊರಡಿಸಿದ್ದಾರೆ..</h3> <img class="aligncenter wp-image-1669 size-full" src="https://powersamachara.com/wp-content/uploads/2023/06/magu-death-6-1.jpg" alt="" width="860" height="573" /> <h3><strong>ಲಾರಿಗಳ ನಿಲುಗಡೆಗೆ ಸ್ಥಳ ಗುರುತು</strong></h3> <h3>ಈ ಅವಧಿಯಲ್ಲಿ ಲಾರಿಗಳ ಸ್ಥಳ ನಿಲುಗಡೆಗೆ ಸ್ಥಳ ಗುರುತಿಸಲಾಗಿದೆ, ಬಾಡಾ ಕ್ರಾಸ್, ಜಿಎಂಐಟಿ ಕಾಲೇಜ್, ಮಾಗನಹಳ್ಳಿ ರಸ್ತೆ, ಡಿಸಿಎಂ ಅಂಡರ್ ಪಾಸ್, ಶಾಮನೂರು ಅಂಡರ್ ಪಾಸ್, ಲೋಕಿಕೆರೆ ಕ್ರಾಸ್ ಬಳಿ ಲಾರಿ ನಿಲುಗಡೆಗೆ ಸ್ಥಳ ಗುರುತಿಸಲಾಗಿದೆ.</h3> <h3><img class="alignnone wp-image-1670 size-full" src="https://powersamachara.com/wp-content/uploads/2023/06/larry1.jpg" alt="" width="860" height="573" />ಈ ಅವಧಿಯಲ್ಲಿ ಗ್ಯಾಸ್ ವಾಹನಗಳು, ಪೆಟ್ರೋಲ್ ವಾಹನಗಳು ಮತ್ತು ಜಿಲ್ಲಾಧಿಕಾರಿಗಳಿಂದ ವಿಶೇಷ ಅನುಮತಿ ಪಡೆದ ಕೆಲವು ವಾಹನಗಳಿಗೆ ಮಾತ್ರ ಅನುಮತಿಸಲಾಗುತ್ತದೆ ಎಂದು ಎಸ್ಪಿ ತಿಳಿಸಿದ್ದಾರೆ..</h3>