<strong>POWER SAMACHARA | KANNADA NEWS | 14-04-2023</strong> <strong>ದಾವಣಗೆರೆ :</strong> ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸುವ ಏಕೈಕ ಪಕ್ಷ ಬಿಜೆಪಿ, ದಾವಣಗೆರೆಯ ತಳಮಟ್ಟದ ಕಾರ್ಯಕರ್ತರನ್ನ ರಾಷ್ಟ್ರೀಯ ನಾಯಕರು ಗುರುತಿಸಿ ಟಿಕೆಟ್ ನೀಡಿದ್ದಾರೆ, ದಕ್ಷಿಣಕ್ಕೆ ಬಿಜಿ ಅಜಯ್ ಕುಮಾರ್ ಉತ್ತರಕ್ಕೆ ಲೋಕಿಕೆರೆ ನಾಗರಾಜ್ ಅವರನ್ನ ಗುರುತಿಸಿ ಟಿಕೆಟ್ ನೀಡಿರುವುದು ಉತ್ತಮ ಬೆಳವಣಿಗೆ ಎಂದು ದಾವಣಗೆರೆಯಲ್ಲಿ ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.. <img class="alignnone size-medium wp-image-935" src="https://powersamachara.com/wp-content/uploads/2023/04/badada-anandharaj-1-300x141.jpg" alt="" width="300" height="141" /><span style="color: #212121; font-size: 1.563em;">ಗೆಲ್ಲುವ ಕುದುರೆ ಆಯ್ಕೆ..</span> ಉತ್ತರ-ದಕ್ಷಿಣಕ್ಕೆ ಗೆಲ್ಲುವ ಕುದುರೆಗಳನ್ನ ಬಿಜೆಪಿ ಆಯ್ಕೆ ಮಾಡಿದೆ, ಇತರೆ ರಾಷ್ಟ್ರೀಯ ಪಕ್ಷಗಳಲ್ಲಿ ಟಿಕೆಟ್ ಗಾಗಿ ದೆಹಲಿಯಲ್ಲಿ ನಾಯಕರ ಮನೆ ಬಾಗಿಲು ಕಾಯುವಂತ ಸಂಸ್ಕೃತಿ ಇಂದಿಗೂ ಇದೆ. ಆದರೆ ಬಿಜೆಪಿಯಲ್ಲಿ ಪ್ರಾಮಾಣಿಕವಾಗಿ ಪಕ್ಷದ ಕೆಲಸ ಮಾಡಿದವರು ನಾಯಕರ ಮನೆ ಬಾಗಿಲಿಗೆ ಹೋಗುವ ಅವಶ್ಯಕತೆ ಇಲ್ಲ ಎಂಬುದನ್ನ ತೋರಿಸಿಕೊಟ್ಟಿದೆ. ಸ್ಮಾರ್ಟ್ ಸಿಟಿಗೆ ಇಂತಹ ಸ್ಮಾರ್ಟ್ ಯುವ ನಾಯಕರನ್ನ ಆಯ್ಕೆ ಮಾಡಿರುವುದು ಪಕ್ಷದ ಸಣ್ಣ ಕಾರ್ಯಕರ್ತರಿಗೂ ಹೊಸ ಹುಮ್ಮಸ್ಸು ನೀಡಿದೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಎಲ್ಲಾ ಸಮಾಜದವರಿಗೆ ಬೇಕಾದ ಸಂಸದರಾದ ಸಿದ್ದೇಶ್ವರ್ ಹಾಗೂ ಹಾಲಿ ಶಾಸಕರಾದ ಎಸ್ ಎ ರವೀಂದ್ರನಾಥ್ ಅವರು ಇಂತಹ ಯುವ ನಾಯಕರಿಗೆ ಟಿಕೆಟ್ ಕೊಡಿಸುವ ಮೂಲಕ ಕುಟುಂಬ ರಾಜಕಾರಣ ಬಿಜೆಪಿ ಪಕ್ಷದ ಸಂಸ್ಕೃತಿಯಲ್ಲ ಎಂದು ತೋರಿಸಿಕೊಟ್ಟಿದ್ದಾರೆ. <img class="alignnone size-medium wp-image-936" src="https://powersamachara.com/wp-content/uploads/2023/04/badada-anandharaj-3-135x300.jpg" alt="" width="135" height="300" /> ಟೀಕೆ ಮಾಡುವಂತ ಕಾಂಗ್ರೆಸ್ ಗೆ ತಕ್ಕ ಉತ್ತರ ನೀಡಿದ್ದಾರೆ. ವಯೋ ಸಹಜತೆಯಿಂದ ಚುನಾವಣೆ ರಾಜಕೀಯಕ್ಕೆ ಸ್ವಯಂ ನಿವೃತ್ತಿ ಘೋಷಿಸಿದ ಎಸ್ ರವೀಂದ್ರನಾಥ್ ಎಲ್ಲರಿಗು ಮಾದರಿಯಾಗಿದ್ದಾರೆ. ಈ ಮೂಲಕ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. <h3>ಉತ್ತರ-ದಕ್ಷಿಣದಲ್ಲಿ ಕಮಲ ಗೆಲುವು</h3> ಉತ್ತರ ಮತ್ತು ದಕ್ಷಿಣದಲ್ಲಿ ಬಿಜೆಪಿಯ ಕಮಲ ಅರಳುವುದರಲ್ಲಿ ಯಾವುದೇ ಅನುಮಾನವಿಲ್ಲ, ರವೀಂದ್ರನಾಥ್ ಅವರು ಸರಳ ಸಜ್ಜನಿಕೆ ರಾಜಕಾರಣಿಯಾಗಿ ಭ್ರಷ್ಟಾಚಾರವಿಲ್ಲದೆ ಆಡಳಿತ ನಡೆಸಿದ್ದು, ಈ ಬಾರಿ ಗೆಲುವಿಗೆ ರವೀಂದ್ರನಾಥ್ ಸಾಧನೆಗಳೇ ಸಾಕು ಎಂದು ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜು ತಿಳಿಸಿದ್ದಾರೆ.. <img class="alignnone size-medium wp-image-893" src="https://powersamachara.com/wp-content/uploads/2023/04/IMG-20230127-WA0075-300x300.jpg" alt="" width="300" height="300" /> ದಕ್ಷಿಣ ಕ್ಷೇತ್ರದಲ್ಲಿ ಅಜಯ್ ಕುಮಾರ್ ಗೆಲುವನ್ನ ಯಾರು ತಡೆಯಲು ಸಾಧ್ಯವಿಲ್ಲ ಯುವ ರಾಜಕಾರಣಿಯಾದ ಅಜಯ್ ಕುಮಾರ್ ಕಾಂಗ್ರೆಸ್ ವಿರುದ್ಧ ಗೆದ್ದೇ ಗೆಲ್ಲುತ್ತಾರೆ, ಉತ್ತರದಲ್ಲಿ ಸರಳ ಸಜ್ಜನಿಕೆ ರಾಜಕಾರಣಿ ನಾಗರಾಜ್ ಲೋಕಿಕೆರೆ ಕೂಡ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ, ಉಭಯ ನಾಯಕರು ದಾವಣಗೆರೆಯಲ್ಲಿ ಹೊಸ ದಾಖಲೆ ಜೊತೆಗೆ ರಾಜಕೀಯ ಚಿತ್ರಣವನ್ನೇ ಬದಲಿಸಲಿದ್ದಾರೆ ಎಂದು ಬಾಡದ ಆನಂದರಾಜು ತಿಳಿಸಿದ್ದಾರೆ.. ಈ ಸಂದರ್ಭದಲ್ಲಿ ನಗರ ಪಾಲಿಕೆ ಸದಸ್ಯ ಮಂಜುನಾಯ್ಕ್, ಶ್ಯಾಮನೂರು ಗಿರೀಶ್, ಮಹಿಳಾ ಮುಖಂಡರಾದ ಚೇತನಾ, ಸಲೀನಾ, ಭಾಗ್ಯ ಪಿಸಾಳೆ ಸೇರಿದಂತೆ ಮತ್ತಿತರರಿದ್ದರು..