POWER SAMACHARA | KANNADA NEWS | BREKING NEWS| 26-11-2023..
ದಾವಣಗೆರೆ; ಮಾಜಿ ಸಚಿವ ವಿ. ಸೋಮಣ್ಣ ಹೇಳಿಕೆಗೆ ದಾವಣಗೆರೆಯಲ್ಲಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಕೆಂಡಾಮಂಡಲರಾಗಿದ್ದಾರೆ, ಮಠದಲ್ಲಿ ಮಾತನಾಡುವ ಅವಶ್ಯಕತೆ ಇತ್ತಾ, ಸಿದ್ದಗಂಗಾ ಮಠದಲ್ಲಿ ರಾಜಕಾರಣ ಮಾಡಿದ್ದಾರೆ, ದೆಹಲಿಗೆ ಹೋಗ್ತಾರಾ ಹೋಗಲಿ ಅದೇನು ಚಾಡಿ ಹೇಳುತ್ತಾರೋ ಹೇಳಲಿ, ನಮಗೂ ದೆಹಲಿ ನಾಯಕರು ಗೊತ್ತು, ನಾವು ದೆಹಲಿಗೆ ಹೋಗ್ತಿವಿ ಎಂದು ಸಿಡಿಮಿಡಿಗೊಂಡಿದ್ದಾರೆ…
ಬಿಎಸ್ ವೈ ಬಗ್ಗೆ ಮಾತನಾಡಿದರೆ ಸುಮ್ಮನಿರಲ್ಲ
ಬಿಎಸ್ ವೈ ಬಗ್ಗೆ ಮಾತನಾಡಿದರೆ ಸುಮ್ಮನೇ ಇರಲ್ಲ, ಬಿಎಸ್ ವೈ ಕರೆದು ಹೊಡೆದರು ಪರವಾಗಿಲ್ಲ, ನಾನು ಈ ವಿಚಾರವಾಗಿ ಮಾತನಾಡುತ್ತೇನೆ, ವಿನಾಕಾರಣ ಬಿಎಸ್ ವೈ ಬಗ್ಗೆ ಮಾತನಾಡೋದು ಸರಿಯಲ್ಲ, ವಿಧಾನ ಸಭೆ ಸೋಲಿನ ಹೊಡೆತವನ್ನು ವರಿಷ್ಠರು ನೋಡಿದ್ದಾರೆ, ಹೀಗಾಗಿ ವಿಜಯೇಂದ್ರರನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ, ವರಿಷ್ಠರ ನಿರ್ಧಾರವನ್ನೂ ಸೋಮಣ್ಣ ವಿರೋಧಿಸಿದಂತಿದೆ, ಕರ್ನಾಟಕದಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತಂದಿದೆ ಬಿಎಸ್ ವೈ, ಬಿಎಸ್ ವೈ ಬೇರೆಯವಂತೆ ರೆಡಿ ಮೇಡ್ ಫುಡ್ ಅಲ್ಲ, ಸೋಮಣ್ಣ ಬಂದಿದ್ದು ಕಾಂಗ್ರೆಸ್ ನಿಂದ, ಸೋಮಣ್ಣನಿಂದ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ, ಕಾಂಗ್ರೆಸ್ ನಿಂದ ಬಂದು ಅಧಿಕಾರ ಅನುಭವಿಸಿದ್ದೀರಿ, ಸೋತರು ಸಹ ಎಂಎಲ್ ಸಿ ಆಗಿ ಅಧಿಕಾರ ಅನುಭವಿಸಿದ್ದೀರಿ, ನಿಮ್ಮನ್ನೂ ಸಚಿವರನ್ನಾಗಿ ಬಿಎಸ್ ವೈ ಮಾಡಿದ್ದು ತಪ್ಪಾ, ಕಾಂಗ್ರೆಸ್ ನಿಂದ ಬಂದು ಸಚಿವರಾಗಲಿಲ್ಲವೇ.. ಆಗ ನಮಗೇನು ಸಾಮಾರ್ಥ್ಯ ಇರಲಿಲ್ಲವೆ, ನಿರಂತರವಾಗಿ ಅಧಿಕಾರ ಅನುಭವಿಸಿ ಹೀಗ ಬಿಎಸ್ ವಿರುದ್ದ ಮಾತನಾಡುತ್ತೀರಾ, ಕೀಳು ಮಟ್ಟದ ಭಾಷೆ ಬಳಸುತ್ತೀರಾ ಎಂದು ಕಿಡಿಕಾರಿದರು..
ಜಾತಿ ಗಣತಿ ವಿರೋಧ ಹಿನ್ನಲೆ ಮಾತನಾಡಿದ ಅವರು, ಗಾಜಿನಮನೆಯಲ್ಲಿ ಕೂತು ವರದಿ ತಯಾರಿಸಿದ್ದಾರೆ, ಮನೆಮನೆಗೆ ಹೋಗಿ ವರದಿ ತಯಾರಿಸಿ, ಜಾತಿ ಗಣತಿ ಅವೈಜ್ಞಾನಿಕವಾಗಿದೆ, ತರಾತುರಿ ಏನಿದೆ, ಆರು ತಿಂಗಳ ಆಗಲಿ, ಸರಿಯಾಗಿ ಮಾಡಿ ಎಂದು ರೇಣುಕಾಚಾರ್ಯ ಹೇಳಿದ್ದಾರೆ..