POWER SAMACHARA | KANNADA NEWS | BREKING NEWS| 14-01-2024
ದಾವಣಗೆರೆ: ದಾವಣಗೆರೆ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಬಿಜೆಪಿ ಕಟ್ಟಾಳು ರಾಜಶೇಖರ್ ಅವರು ಆಯ್ಕೆಯಾಗಿದ್ದಾರೆ..
ಬಹಳ ದಿನಗಳ ಚರ್ಚೆಗಳ ನಂತರ ಅಧ್ಯಕ್ಷರ ಆಯ್ಕೆಯಾಗಿದ್ದು, ಮೈಸೂರಿನಿಂದ ನಾಗೇಂದ್ರ, ಶಿವಮೊಗ್ಗದಿಂದ ಮೇಘರಾಜ್, ದಾವಣಗೆರೆಯಿಂದ ರಾಜಶೇಖರ್ ಸೇರಿದಂತೆ ಎಲ್ಲಾ ಜಿಲ್ಲೆಗಳಿಗೆ ಅಧ್ಯಕ್ಷರನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಯ್ಕೆ ಮಾಡಿ ಆದೇಶ ಮಾಡಿದ್ದಾರೆ. ಪಕ್ಷದಲ್ಲಿ ನಿಷ್ಟಾವಂತ ಎಂಬ ಹಣೆಪಟ್ಟಿಯೊಂದಿಗೆ ರಾಜಶೇಖರ್ ಗುರುತಿಸಿಕೊಂಡಿದ್ದ ಹಿನ್ನಲೆ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ, ಈ ಹಿಂದೇ ರಾಜಶೇಖರ್ ಬಿಜೆಪಿ ಮಾಧ್ಯಮ ವಕ್ತಾರರಾಗಿ ಹಾಗೂ ಪಕ್ಷದಲ್ಲಿ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದರು..