POWER SAMACHARA | KANNADA NEWS | BREKING NEWS| 05-07-2024
ದಾವಣಗೆರೆ: ವೈದ್ಯೋ ನಾರಾಯಣ ಹರಿ ಎಂಬ ಗಾದೆ ಮಾತು ಇತ್ತೀಚಿನ ದಿನಗಳಲ್ಲಿ ಅಕ್ಷರಶಃ ಸುಳ್ಳಾಗುತ್ತಿದೆಯೋ ಎಂಬ ಅನುಮಾನ ಮೂಡಿದೆ, ಏಕಂದ್ರೆ ಒಂದಿಲ್ಲೊಂದು ಎಡವಟ್ಟುಗಳು ವೈದ್ಯರಿಂದ ಆಗುತ್ತಲೇ ಇವೆ, ಬೆಣ್ಣೆನಗರಿ ದಾವಣಗೆರೆಯಲ್ಲಿ ಇಂತದೊಂದು ಪ್ರಕರಣ ಗಂಭೀರತೆ ಪಡೀತಾ ಇದೆ, ಹೆರಿಗೆ ವೇಳೆ ಮಗುವಿನ ಮರ್ಮಾಂಗ ಹಾಗೂ ಸುತ್ತಾಮುತ್ತ ಕೊಯ್ಯಲಾಗಿದೆ ಎಂಬ ಗಂಭೀರ ಆರೋಪವೊಂದು ಕೇಳಿ ಬಂದಿದ್ದು ಪೋಷಕರು ಕೆರಳಿ ಕೆಂಡವಾಗಿದ್ದಾರೆ.. ಆಗಿದ್ರೆ ಏನಿದು ವೈದ್ಯರ ಯಡವಟ್ಟು ಅಂತೀರಾ ಈ ಸ್ಟೋರಿ ನೋಡಿ..
ವೈದ್ಯನ ನಿರ್ಲಕ್ಷ್ಯ ಮಗು ಸಾವು..
ಹೌದು.. ವೈದ್ಯೋ ನಾರಾಯಣ ಹರಿ ಎಂಬ ಮಾತು ಈ ಹಿಂದೆ ಇತ್ತು, ಜೀವ ಉಳಿಸೋ ವೈದ್ಯರು ದೇವರಿಗೆ ಸಮಾನ ಎಂದು ರೋಗಿಗಳು ಅಂದುಕೊಂಡಿದ್ದರು, ಆದರೆ ಈಗ ಎಲ್ಲವು ಬದಲಾಗ್ತಿದೆ, ಆರೋಗ್ಯ ಕ್ಷೇತ್ರ ಪೂರ್ಣ ಉದ್ಯಮವಾಗಿ ಬಿಟ್ಟಿದೆ, ಸೂಕ್ತ ಚಿಕಿತ್ಸೆ ಮರೀಚಿಕೆ ಆಗಿ ಬಿಟ್ಟಿದೆ, ಬೇಕಾ ಬಿಟ್ಟ ಚಿಕಿತ್ಸೆ, ನಿರ್ಲಕ್ಷ್ಯದ ಚಿಕಿತ್ಸೆಯಿಂದ ಜನರು ಬೇಸತ್ತಿದ್ದಾರೆ, ಅಂತಹದ್ದೊಂದು ಪ್ರಕರಣ ದಾವಣಗೆರೆಯಲ್ಲಿ ಮರು ಕಳುಹಿಸಿದೆ, ದಾವಣಗೆರೆ ನಗರದ ಕೊಂಡಜ್ಜಿ ರಸ್ತೆಯಲ್ಲಿರೋ ಅರ್ಜುನ್ ಎಂಬುವವರ ಪತ್ನಿ ಅಮೃತಾ, ಜೂನ್ 27ರಂದು ಹತ್ತು ತಿಂಗಳು ಹೆತ್ತು ಹೊತ್ತು ಹೆರಿಗೆಗೆಂದು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು, ಹೆರಿಗೆ ವೇಳೆ ವೈದ್ಯರು ಎಡವಟ್ಟು ಮಾಡಿದ್ದಾರೆ ಎನ್ನಲಾಗಿದೆ, ಸೀಜೆರಿಯನ್ ಮಾಡಿ ಮಗು ತೆಗೆಯುವ ವೇಳೆ ಮಗುವಿನ ಮರ್ಮಾಂಗವನ್ನೆ ವೈದ್ಯ ನಿಜಾಮುದ್ದಿನ್ ಕೊಯ್ದಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ..
ಕಣ್ಣೀರಿಡುತ್ತಿರುವ ಕುಟುಂಬ..!
ದಾವಣಗೆರೆ ಜಿಲ್ಪಾತ್ರೆಯಲ್ಲಿ ವೈದ್ಯನ ಭಾರೀ ಎಡವಟ್ಟಿನಿಂದ ಮಗು ಕಳೆದುಕೊಂಡ ಕುಟುಂಬ ಕಣ್ಣೀರಿಟ್ಟಿದೆ, ಅಮೃತಾಗೆ ಸಿಜೇರಿಯನ್ ಮಾಡಿ ಮಗು ತೆಗೆಯುವ ವೇಳೆ ನಿರ್ಲಕ್ಷ್ಯ ವಹಿಸಿ ಮಗುವಿನ ಮರ್ಮಾಂಗ ಕೊಯ್ದಿದ್ದಾರೆ ಎಂದು ಪೋಷಕರು ದೂರಿದ್ದು, ಮಗುವಿನ ಸ್ಥಿತಿ ಚಿಂತಾಜನಕ ಹಿನ್ನಲೆ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು, ಚಿಕಿತ್ಸೆ ಫಲಿಸದೇ ಇಂದು ಮಗು ಸಾವನ್ನಪ್ಪಿದೆ, ಮಗುವಿನ ಸಾವಿಗೆ ವೈದ್ಯರೇ ನೇರ ಕಾರಣ ಎಂದು ಪೋಷಕರ ಆಕ್ರೋಶ ವ್ಯಕ್ತಪಡಿಸಿ ದಾವಣಗೆರೆ ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ರು, ಈ ಕೂಡಲೇ ವೈದ್ಯ ನಿಜಾಮುದ್ದಿನ್ ರನ್ನ ಅಮಾನತು ಮಾಡುವಂತೆ ಆಗ್ರಹಿಸಿದ್ರು. ಇನ್ನೂ ವಿಡಿಯೋ ಒಂದರಲ್ಲಿ ವೈದ್ಯ ನಿಜಾಮುದ್ದಿನ್ ಮಾತನಾಡಿದ್ದು ಹಿಂಭಾಗದಲ್ಲಿ ಕತ್ತರಿ ಟಚ್ ಆಗಿದೆ ಎಂದು ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಸ್ಪತ್ರೆ ಜಿಲ್ಲಾ ಸರ್ಜನ್ ನಾಗೇಂದ್ರಪ್ಪ, ಗರ್ಭ ಕೋಶದಲ್ಲಿ ನೀರು ಜಾಸ್ತಿ ಇದ್ದಿದ್ದರಿಂದ ಸಿಜೇರಿಯನ್ ಮಾಡಿ ಹೆರಿಗೆ ಮಾಡಲಾಗಿದೆ, ಈ ವೇಳೆ ಮಗುವಿಗೆ ಗಾಯ ಆಗಿದೆ, ಹೀಗಾಗಿ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿತ್ತು, ಆದರೆ ಮಗುವಿಗೆ ಇನ್ಫೆಕ್ಷನ್ ಆಗಿ ಮಗು ಸಾವನ್ನಪ್ಪಿದೆ, ಈ ಕುರಿತು ಜಿಲ್ಲಾಧಿಕಾರಿಯವರಿಗೆ ವರದಿ ನೀಡಲಾಗಿದೆ, ತನಿಖೆಯಿಂದ ಸತ್ಯಾಸತ್ಯತೆ ತಿಳಿಯಲಿದೆ ಎಂದು ಮಾಹಿತಿ ನೀಡಿದ್ದಾರೆ..
ಒಟ್ಟಾರೆ ಅಸ್ಪತ್ರೆಗಳಲ್ಲಿ ಕೇರ್ ಎಂಬ ಪದದ ಬದಲು ಡೋಂಟಕೇರ್ ಎಂಬ ಪರಿಸ್ಥಿತಿ ನಿರ್ಮಾಣ ಆಗ್ತಿದೆ, ಸರಿಯಾದ ಚಿಕಿತ್ಸೆ, ಔಷಧ ಸಿಗದೇ ಬಡ ಜನರು ನರಳಾಟ ಮಾಡ್ತಿದ್ರೆ, ಇತ್ತ ಸಾವು ನೋವುಗಳು ಸಂಭವಿಸುತ್ತಲೇ ಇವೆ, ಇಂತಹ ಪ್ರಕರಣಗಳು ಮರು ಕಳಿಸುವ ಮುನ್ನ ಆರೋಗ್ಯ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಿದೆ..