POWER SAMACHARA | KANNADA NEWS | BREKING NEWS| 12-04-2024
ದಾವಣಗೆರೆ: ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು, ಪತಿ, ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಜೊತೆ ಆಗಮಿಸಿದ ಪ್ರಭಾ ಮಲ್ಲಿಕಾರ್ಜುನ್ ಉಮೇದುವಾರಿಕೆ ಸಲ್ಲಿಕೆ ಮಾಡಿದರು.
ಅದೃಷ್ಟದ ಮೊರೆ ಹೋದ ಪ್ರಭಾ ಮಲ್ಲಿಕಾರ್ಜುನ್..!
ಪುತ್ರ ಸಮರ್ಥ್ , ಶಾಸಕರಾದ ಎಂಪಿ ಲತಾ, ಕೆಎಸ್ ಬಸವಂತಪ್ಪ, ದೇವೇಂದ್ರಪ್ಪ, ಮುಖಂಡರಾದ ಜೆ ಮಾರುತಿ, ಮುದೇಗೌಡ್ರು ಗಿರೀಶ್ ಸೇರಿದಂತೆ ಬೆಂಬಲಿಗರು ಇದ್ದರು, ಇನ್ನೂ ಅದೃಷ್ಟಕ್ಕೆ ಮೊರೆ ಹೋದ ಎಸ್ ಎಸ್ ಮಲ್ಲಿಕಾರ್ಜುನ್, ಸೂಚಕರಾಗಿ ಹಳೇ ಕುಂದುವಾಡದ ಕುರುಬ ಜನಾಂಗದ ಯುವಕ ಜಿಹೆಚ್ ಗಣೇಶ ಅವರನ್ನೂ ಆಯ್ಕೆ ಮಾಡಿಕೊಂಡು ಜೊತೆಗೆ ಕರೆದುಕೊಂಡು ಬಂದಿದ್ದು ವಿಶೇಷವಾಗಿತ್ತು, ಕಳೆದ ವಿಧಾನಸಭೆ ಚುನಾವಣೆಯಲ್ಲೂ ಜಿಹೆಚ್ ಗಣೇಶ್ ಸೂಚಕರಾಗಿ ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಸಹಿ ಹಾಕಿದ್ದರು. ಇನ್ನೂ ಇದೇ 18ರಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿ ಅಪಾರ ಬೆಂಬಲಿಗರ ಜೊತೆ ಸೇರಿ ಮತ್ತೊಮ್ಮೆ ಉಮೇದುವಾರಿಕೆ ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ..
ಈ ಭಾರೀ ಒಂದು ಅವಕಾಶ ಕೊಡಿ ಎಂದ ಪ್ರಭಾ ಮಲ್ಲಿಕಾರ್ಜುನ್..
ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್, ಕ್ಷೇತ್ರದಲ್ಲಿ ಉತ್ತಮವಾದ ವಾತಾವರಣ ಇದೆ, ಕ್ಷೇತ್ರ ಅಭಿವೃದ್ಧಿ ಕಾಣದ ಹಿನ್ನಲೆ ಕಾಂಗ್ರೆಸ್ ಕಡೆ ಜನರು ಒಲವು ತೋರಿಸುತ್ತಿದ್ದಾರೆ, ಬಿಜೆಪಿಯವರು ಅಭಿವೃದ್ಧಿ ಕೆಲಸ ಮಾಡಿಲ್ಲ ಆದ್ದರಿಂದ ನಮ್ಮ ಮೇಲೆ ಅರೋಪ ಮಾಡ್ತಾ ಇದ್ದಾರೆ, ನಾವು ಯಾರ ಮೇಲೆ ಅರೋಪ ಮಾಡೋದಿಲ್ಲ, ಅಭಿವೃದ್ಧಿಯ ಕೆಲಸಗಳನ್ನು ಹೇಳಿ ಜನರಲ್ಲಿ ಮತ ಕೇಳುತ್ತಿದ್ದೇವೆ, 8 ವಿಧಾನಸಭಾ ಕ್ಷೇತ್ರಗಳಲ್ಲಿ 7 ಜನ ಶಾಸಕರು ನಮ್ಮವರೇ ಇದ್ದಾರೆ, ಅದ್ದರಿಂದ ಗೆಲುವು ಸಾಧಿಸುತ್ತೇವೆ ಎನ್ನುವ ನಿರೀಕ್ಷೆ ಇದೆ, ಒಂದು ಅವಕಾಶ ಕೊಡಿ ಎಂದು ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದಾರೆ..
ಉತ್ತಮವಾದ ವಾತಾವರಣ ಇದೆ: ಎಸ್ ಎಸ್ ಎಂ..
ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್, ಕ್ಷೇತ್ರದಲ್ಲಿ ಉತ್ತಮವಾದ ವಾತಾವರಣ ಇದೆ, ಕ್ಷೇತ್ರ ಅಭಿವೃದ್ಧಿ ಕಾಣದ ಹಿನ್ನಲೆ ಕಾಂಗ್ರೆಸ್ ಕಡೆ ಜನರು ಒಲವು ತೋರಿಸುತ್ತಿದ್ದಾರೆ, ಬಿಜೆಪಿಯವರು ಅಭಿವೃದ್ಧಿ ಕೆಲಸ ಮಾಡಿಲ್ಲ ಆದ್ದರಿಂದ ನಮ್ಮ ಮೇಲೆ ಅರೋಪ ಮಾಡ್ತಾ ಇದ್ದಾರೆ, ನಾವು ಯಾರ ಮೇಲೆ ಅರೋಪ ಮಾಡೋದಿಲ್ಲ, ಅಭಿವೃದ್ಧಿಯ ಕೆಲಸಗಳನ್ನು ಹೇಳಿ ಜನರಲ್ಲಿ ಮತ ಕೇಳುತ್ತಿದ್ದೇವೆ, 8 ವಿಧಾನಸಭಾ ಕ್ಷೇತ್ರಗಳಲ್ಲಿ 7 ಜನ ಶಾಸಕರು ನಮ್ಮವರೇ ಇದ್ದಾರೆ, ಅದ್ದರಿಂದ ಗೆಲುವು ಸಾಧಿಸುತ್ತೇವೆ ಎನ್ನುವ ನಿರೀಕ್ಷೆ ಇದೆ, ಒಂದು ಅವಕಾಶ ಕೊಡಿ ಎಂದು ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದಾರೆ..