POWER SAMACHARA | KANNADA NEWS | BREKING NEWS| 19-01-2024
ದಾವಣಗೆರೆ: ಜನವರಿ 22ರಂದು ಇಡೀ ದೇಶವೇ ರಾಮಮಂದಿರ ಉದ್ಘಾಟನೆ ಕಣ್ತುಂಬಿಕೊಳ್ಳಲು ಕಾತುರಿಂದ ಕಾಯುತ್ತಾ ಇದೆ, ಆದರೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ನಿರಂತರ ಕರೆಂಟ್ ಕಟ್ ನಿಂದ ಜನ ಬೇಸತ್ತಿದ್ದಾರೆ, ಈ ಹಿನ್ನಲೆ ಸೋಮವಾರ ವಿದ್ಯುತ್ ಕಟ್ ಮಾಡದಂತೆ ರಾಮ ಸೀತೆ ಬೆಸ್ಕಾಂಗೆ ಆಗಮಿಸಿ ಮನವಿ ಸಲ್ಲಿಕೆ ಮಾಡಿದ್ದಾರೆ..
ದಾವಣಗೆರೆ ನಗರದ ಅಂಬೇಡ್ಕರ್ ವೃತ್ತದ ಬಳಿ ಇರುವ ಬೆಸ್ಕಾಂ ಕಚೇರಿ ಮುಂಭಾಗ ಮಾತೃದೇವೋ ಭವ ಸಂಘಟನೆ ಹಾಗೂ ಹಿಂದೂ ಪರ ಹೋರಾಟಗಾರರು ವಿಭಿನ್ನವಾಗಿ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ. ಲೋಡ್ ಶೆಡ್ಡಿಂಗ್ ಹಾಗೂ ಕಾಮಗಾರಿ ಹೆಸರಿನಲ್ಲಿ ಒಂದು ವಾರದಿಂದ ನಿರಂತರ ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ, ಹೀಗಾಗಿ ಜ.22ಕ್ಕೆ ರಾಮ ಮಂದಿರ ಉದ್ಘಾಟನೆ ಹಿನ್ನಲೆ ನಗರದ ಬೆಸ್ಕಾಂ ಕಚೇರಿಗೆ ಆಗಮಿಸಿದ ರಾಮ ಸೀತೆ ವೇಷಧಾರಿ ಮಕ್ಕಳು ವಿದ್ಯುತ್ ತೆಗೆಯದಂತೆ ಬೆಸ್ಕಾಂ ಎಂಡಿ ಪಾಟೀಲ್ ರವರಿಗೆ ಮನವಿ ಸಲ್ಲಿಸಿದರು..
ಸೋಮವಾರದಂದು ದೇಶಾದ್ಯಂತ ರಾಮನ ಹಬ್ಬ ಇದೆ, ಆದ್ದರಿಂದ ಅಂದು ಯಾವುದೇ ತೊಂದರೆ ಆಗದಂತೆ ವಿದ್ಯುತ್ ನೀಡಬೇಕು, ನಾವು ಅಯೋಧ್ಯೆಗೆ ಹೋಗಲು ಆಗುವುದಿಲ್ಲ, ಆದ್ದರಿಂದ ಮನೆಯಲ್ಲಿ ಟಿವಿ ಮುಖಾಂತರ ರಾಮನ ಹಬ್ಬ ವೀಕ್ಷಣೆ ಗೆ ತೊಂದರೆ ಆಗಬಾರದು ಎಂದು ರಾಮನಾಗಿ ಬಂದ ಧನುಸುಖ್ ಪ್ರಸಾದ್ ಯಾದವ್, ಸೀತೆಯಾಗಿ ಬಂದ ಸಾರಿಯಾ ಮನವಿ ಮಾಡಿಕೊಂಡರು, ರಾಮ ಸೀತೆ ಮನವಿ ಪುರಸ್ಕರಿಸಿದ ಬೆಸ್ಕಾಂ ಎಂಡಿ ಪಾಟೀಲ್, ವಿದ್ಯುತ್ ಕಡಿತಗೊಳಿಸಲ್ಲ ಎಂದು ಭರವಸೆ ನೀಡಿದರು..
ಈ ಸಂದರ್ಭದಲ್ಲಿ ಮಾಜಿ ಮೇಯರ್ ಎಸ್ಟಿ ವೀರೇಶ್, ಜಿಲ್ಲಾ ಶೋಷಿತ ವರ್ಗಗಳ ಒಕ್ಕೂಟದ ಮುಖಂಡ ಬಾಡದ ಆನಂದರಾಜು, ಸಂಸ್ಥೆಯ ಪೋತುಲ ಶ್ರೀನಿವಾಸ್, ನವೀನ್ ಗುಬ್ಬಿ, ಚಂದ್ರಕಲಾ ಮಂಜುನಾಥ್, ದಾಗಿನಕಟ್ಟಿ ನಾಗರಾಜ್, ಶಂಕರಗೌಡ ಬಿರದಾರ್, ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಪಾಟೇಲ್, ಟಿಂಕರ್ ಮಂಜಣ್ಣ, ಸೋಗಿ ಗುರು ಸೇರಿದಂತೆ ಮತ್ತಿರರಿದ್ದರು..