POWER SAMACHARA | KANNADA NEWS | BREKING NEWS| 12-02-2025
SPECIAL STORY
ದಾವಣಗೆರೆ: ಬೆಣ್ಣೆನಗರಿ ದಾವಣಗೆರೆಯಲ್ಲಿ ಹಲವು ಧಾರ್ಮಿಕ ಕೇಂದ್ರಗಳಿವೆ, ಈ ಐತಿಹಾಸಿಕ ಧಾರ್ಮಿಕ ಶ್ರದ್ದಾ ಕೇಂದ್ರಗಳಿಗೆ ಇದೀಗ ಮತ್ತೊಂದು ಭವ್ಯ ಮಂದಿರ ಸೇರ್ಪಡೆಯಾಗುತ್ತಿದೆ, ಅದರಲ್ಲೂ ವಿಶೇಷ ಆಕರ್ಷಣೆಯಾಗಿ ಹಿಂದೂಗಳ ಶ್ರದ್ದಾ ಕೇಂದ್ರ ಅಯೋಧ್ಯೆ ರಾಮಮಂದಿರದ ಮೂರ್ತಿ ಮಾದರಿಯಲ್ಲೇ ವಿಗ್ರಹ ಕೆತ್ತನೆಯಾಗಿದ್ದು ಭಕ್ತರನ್ನೂ ಸೆಳೆಯುತ್ತಿದೆ.. ಯಾವುದು ಆ ವಿಗ್ರಹ, ಈ ವಿಗ್ರಹ ಇರೋದಾದ್ರು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ..
ವಾಯುಪುತ್ರನ ಆಗಮನ: ಗ್ರಾಮದಲ್ಲಿ ಸಂಭ್ರಮ..
ಹೌದು..ಅಯೋಧ್ಯೆಯ ಬಾಲರಾಮನ ವಿಗ್ರಹ ಇಡೀ ದೇಶದ ಗಮನ ಸೆಳೆದಿದ್ದು ಗೊತ್ತೆ ಇದೆ, ಈ ಕೈ ಚಳಕದ ಹಿಂದೆ ನಮ್ಮ ಕರ್ನಾಟಕದ ಮೈಸೂರಿನವರೇ ಆದ ಅರುಣ್ ಯೋಗಿರಾಜ್ ಅವರು ಇದ್ದಿದ್ದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿಯಾಗಿತ್ತು, ಹೀಗ ಕಲಾಕಾರ ಅರುಣ್ ಯೋಗಿರಾಜ್ ಅವರ ಅದ್ಭುತ ಕೈ ಚಳಕದಿಂದ ಮತ್ತೊಂದು ವಿಗ್ರಹ ಕಣ್ಮನ ಸೆಳೆಯುವಂತಿದೆ. ಈ ಒಂದು ವಿಗ್ರಹ ಸ್ಥಾಪನೆ ಆಗುತ್ತಿರುವುದು ಬೇರೆಲ್ಲೂ ಅಲ್ಲ ನಮ್ಮ ಬೆಣ್ಣೆನಗರಿ ಖ್ಯಾತಿಯ ದಾವಣಗೆರೆಯಲ್ಲಿ, ಹೌದು ದಾವಣಗೆರೆ ನಗರದ ಹಳೇ ಕುಂದುವಾಡದಲ್ಲಿ ಈಗಾಗಲೇ ಈ ಒಂದು ಅದ್ಭುತ ವಿಗ್ರಹ ಆಗಮಿಸಿದೆ, ಶ್ರೀ ಬಸವ ಆಂಜನೇಯ ಅಭಿವೃದ್ದಿ ಸಮಿತಿಯಿಂದ ಗ್ರಾಮದವರೇ ಹಣ ಹಾಕಿ ಶಿಲೆಯಲ್ಲೇ ಮೂರುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀ ಆಂಜನೇಯ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ, ಪವನ ಸುತ, ವಾಯುಪುತ್ರ, ವಾನರ ಶ್ರೇಷ್ಠ, ಕೇಸರಿನಂದನ, ರಾಮಧೂತ, ಅಂಜನಿ ಪುತ್ರ, ರಾಮನ ಬಂಟ ಎಂದೆಲ್ಲ ಕರೆಸಿಕೊಳ್ಳುವ ಊರ ಕಾಯುವ ಆಂಜನೇಯನಿಗೆ ಭಕ್ತ ಗಣ ಕೇಳಬೇಕೆ, ಅತೀ ಹೆಚ್ಚು ಭಕ್ತ ಗಣ ಹೊಂದಿರೋ ಹನುಮನ ಭವ್ಯ ದೇವಸ್ಥಾನ ಉದ್ಘಾಟನೆಗೆ ಸಿದ್ದವಾಗಿದೆ, ಶ್ರೀ ಆಂಜನೇಯ ದೇವಸ್ಥಾನಕ್ಕೆ ವಿಶೇಷವಾಗಿ ಕೆತ್ತನೆಯಾಗಿರುವ ವಿಗ್ರಹ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ, ಅಯೋಧ್ಯೆಯ ಬಾಲರಾಮನ ವಿಗ್ರಹ ಹೋಲುವ ವಿಗ್ರಹವನ್ನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿ ಕೊಟ್ಟಿರೋದು ಭಕ್ತಗಣವನ್ನ ಕೈ ಬೀಸಿ ಕರೆಯುವಂತೆ ಮಾಡಿದೆ, ಮಂಗಳವಾರ ಬೆಳಿಗ್ಗೆ ಮೈಸೂರುನಿಂದ ಹಳೇ ಕುಂದುವಾಡ ಗ್ರಾಮಕ್ಕೆ ವಿಗ್ರಹ ಆಗಮಿಸಿದ್ದು, ಮೆರವಣಿಗೆ ಮೂಲಕ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ಆಕರ್ಷಕ ಲೈಟಿಂಗ್ ಅಲಂಕಾರ, ಆಂಧ್ರ ಪಂಡಿತರಿಂದ ದೇವ ಯಜ್ಞ..!
ಆಕರ್ಷಕ ದೇಗುಲ, ವಿಶಾಲ ಆವರಣ ಹೊಂದಿರುವ ದೇವಸ್ಥಾನವನ್ನ ಸಂಪೂರ್ಣವಾಗಿ ಶಿಲೆಯಲ್ಲೆ ನಿರ್ಮಿಸಲಾಗಿದೆ, ಪಕ್ಕದಲ್ಲೇ ಬಸವೇಶ್ವರ ದೇವಸ್ಥಾನವನ್ನ ಅಚ್ಚುಕಟ್ಟಾಗಿ, ಸುಂದರವಾಗಿ ಕಟ್ಟಲಾಗಿದೆ, ಈ ಎರಡು ದೇಗುಲಗಳನ್ನ ಶಿಲ್ಪಿಗಳಾದ ತಮಿಳುನಾಡಿನ ಎಸ್ ವಡಿವೇಲು, ಕೆಆರ್ ಮಾರಿಯಪ್ಪನ್ ಕಟ್ಟಿಕೊಟ್ಟಿದ್ದಾರೆ, ಎರಡು ದೇವಸ್ಥಾನಗಳಿಗೆ ಅಂದಾಜು ಐದುವರೆ ಕೋಟಿ ರೂಪಾಯಿ ವೆಚ್ಚ ತಗುಲಿದೆ ಎನ್ನಲಾಗಿದೆ, ಗ್ರಾಮಸ್ಥರಿಂದ ದೇಣಿಗೆ ಪಡೆದು ಗ್ರಾಮದ ಮುಖಂಡರು, ಯುವಕರ ಸತತ ಪರಿಶ್ರಮದಿಂದ ದೇವಸ್ಥಾನಗಳು ನಿರ್ಮಾಣಗೊಂಡಿವೆ. ಇನ್ನೂ ಇದೇ 16-17ರಂದು ಈ ಎರಡು ದೇವಸ್ಥಾನಗಳು ಅದ್ದೂರಿಯಾಗಿ ಉದ್ಘಾಟನೆಗೆ ಸಿದ್ದವಾಗಿದ್ದು, ಆಂಧ್ರಪ್ರದೇಶದ ತಿರುಪತಿ ದೇವಸ್ಥಾನ ಹಾಗೂ ಪೂರ್ವ ಗೋಧಾವರಿಯ ಪಂಡಿತರಿಂದ ದೇವ ಯಜ್ಞ, ವಿವಿಧ ಹೋಮಗಳ ಮೂಲಕ ದೇವರ ಪ್ರಾಣ ಪ್ರತಿಷ್ಟಾಪನೆ ನಾಳೆಯಿಂದ ಜರುಗಲಿವೆ, ಗ್ರಾಮದ ಬಸವ ಆಂಜನೇಯ ಡೊಳ್ಳು ಸಂಘ ಡೊಳ್ಳಿನ ಸದ್ದು ಮಾಡಲು ಸಿದ್ದವಾಗಿದೆ, ಜೊತೆಗೆ 18ರಂದು ಹಳೇ ಕುಂದುವಾಡ ಗ್ರಾಮದಲ್ಲಿ ಸಾವು ತಂದ ಸೌಭಾಗ್ಯ ನಾಟಕ ಪ್ರದರ್ಶನವಾಗಲಿದೆ, ಫೆಬ್ರುವರಿ 13ರಿಂದ 17ರವರೆಗೆ ನಿತ್ಯ ವಿವಿಧ ಕಾರ್ಯಕ್ರಮಗಳು ಹಳೇ ಕುಂದುವಾಡದಲ್ಲಿ ಜಗಮಗಿಸಲಿದೆ..
ಫೆ. 13ರಿಂದ 17ರವರೆಗೆ ದೇವಸ್ಥಾನ ಉದ್ಘಾಟನೆ, ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ
ದಾವಣಗೆರೆ ತಾಲೂಕಿನ ಹಳೇಕುಂದುವಾಡ ಗ್ರಾಮದ ಶ್ರೀ ಆಂಜನೇಯಸ್ವಾಮಿ ಮತ್ತು ಶ್ರೀ ಬಸವೇಶ್ವರ ದೇವಸ್ಥಾನದ ಉದ್ಘಾಟನೆ, ಶಿಲಾಮೂರ್ತಿ ಪ್ರತಿಷ್ಠಾಪನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಫೆಬ್ರವರಿ 13ರಿಂದ 17ರವರೆಗೆ 5 ದಿನಗಳ ಕಾಲ ನಡೆಯಲಿದ್ದು, 17ರಂದು ಧಾರ್ಮಿಕ ಸಭೆ ನಡೆಯಲಿದೆ ಎಂದು ಶ್ರೀ ಆಂಜನೇಯ ಸ್ವಾಮಿ, ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ಮಾಹಿತಿ ನೀಡಿದೆ..
ಆಂಜನೇಯ ಸ್ವಾಮಿ ಮಹಿಮೆಯನ್ನು ಹೊಂದಿದ್ದು, ದೇವಸ್ಥಾನಕ್ಕೆ ವಿವಿಧೆಡೆಯಿಂದ ದರ್ಶನಕ್ಕೆ ಆಗಮಿಸುತ್ತಾರೆ, ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಕಲ್ಲಿನಲ್ಲೆ ಅಂಜನೇಯ, ಬಸವೇಶ್ವರ ದೇವಸ್ಥಾನ ನಿರ್ಮಾಣವಾಗಿದೆ, 13ರಿಂದ ನಿತ್ಯ ವಿವಿಧ ಹೋಮ, ವಿಶೇಷ ಪೂಜೆಗಳು ಜರುಗಲಿದೆ, 16ರಂದು ವಿಗ್ರಹ ಮೆರವಣಿಗೆ, ಫೆಬ್ರುವರಿ 17ರಂದು ಬೆಳಿಗ್ಗೆ 11ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಸಾನಿಧ್ಯವನ್ನು ಸಿರಿಗೆರೆಯ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ಕಾಗಿನೆಲೆ ಮಹಾಸಂಸ್ಥಾನ ಶ್ರೀ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀಗಳು, ಹೊಸದುರ್ಗದ ಶ್ರೀ ಕನಕ ಗುರುಪೀಠ ಶಾಖಾ ಮಠದ ಈಶ್ವರಾನಂದಪುರಿ, ದಾವಣಗೆರೆಯ ಶ್ರೀಮುರುಘಾ ರಾಜೇಂದ್ರ ಮಠದ ಬಸವಪ್ರಭು ಶ್ರೀಗಳು, ಹದಡಿಯ ಚಂದ್ರಗಿರಿ ಮಠದ ಪರಮಹಂಸ ಶ್ರೀ ಮುರಳೀಧರ ಶ್ರೀಗಳು, ಹರಿಹರದ ವೀರಶೈವ ಲಿಂಗಾಯಿತ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳು, ರಾಜನಹಳ್ಳಿಯ ವಾಲ್ಮೀಕಿ ಗುರುಪೀಠ, ಮಹಾಸಂಸ್ಥಾನದ ಪ್ರಸನ್ನಾನಂದಪುರಿ ಶ್ರೀಗಳು, ಶ್ರೀ ಕ್ಷೇತ್ರ ಅವರಗೊಳ್ಳದ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಶ್ರೀಗಳು, ಚಿತ್ರದುರ್ಗದ ಮಾದರ ಚನ್ನಯ್ಯ ಗುರುಪೀಠದ ಮಾದರ ಚನ್ನಯ್ಯ ಶ್ರೀಗಳು, ಚಿತ್ರದುರ್ಗದ ಮಾಚಿದೇವ ಮಹಾಸಂಸ್ಥಾನ ಮಠದ ಬಸವ ಮಾಚಿದೇವ ಶ್ರೀಗಳು, ಹೊಸದುರ್ಗದ ಭಗೀರಥ ಪೀಠದ ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನದ ಪುರುಷೋತ್ತಮಾನಂದಪುರಿ ಶ್ರೀಗಳು, ಚಿತ್ರದುರ್ಗದ ಛಲವಾದಿ ಗುರುಪೀಠದ ಬಸವ ನಾಗಿದೇವ ಶ್ರೀಗಳು, ಹಳೇಕುಂದುವಾಡದ ಕರಿಬಸವೇಶ್ವರ ದೇವಸ್ಥಾನ ಧರ್ಮಧಿಕಾರಿ ರಾಜಣ್ಣ ವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಎಸ್.ಎಸ್.ಮಲ್ಲಿಕಾರ್ಜುನ್, ಮಾಜಿ ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಸೇರಿದಂತೆ ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳು, ಮುಖಂಡರು, ದಾನಿಗಳು, ಅಧಿಕಾರಿಗಳು, ಗ್ರಾಮಸ್ಥರು ಸೇರಿದಂತೆ ಅಪಾರ ಭಕ್ತ ಗಣ ಆಗಮಿಸಲಿದೆ..