POWER SAMACHARA | KANNADA NEWS | BREKING NEWS| 15-11-2023..
ದಾವಣಗೆರೆ: ಫೋಕ್ಸೊ ಪ್ರಕರಣದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರು ನಾಳೆ ಬಿಡುಗಡೆಯಾಗುತ್ತಿರುವ ಹಿನ್ನಲೆ ದಾವಣಗೆರೆಯಲ್ಲಿ ಮುರುಘಾ ಮಠದ ಭಕ್ತರು ಸಂಭ್ರಮಾಚರಣೆ ನಡೆಸಿದ್ದಾರೆ, ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ ಬಾಡದ ಆನಂದರಾಜ್ ಅವರ ನೇತೃತ್ವದಲ್ಲಿ ಅಭಿಮಾನಿಗಳು, ಬಸವಣ್ಣನವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಪಟ್ಟಿದ್ದು, ದಾವಣಗೆರೆಗೆ ಮುರುಘಾ ಶರಣರನ್ನ ಬರ ಮಾಡಿಕೊಳ್ಳಲು ಭಕ್ತರು ಸಿದ್ದತೆ ನಡೆಸಿದ್ದಾರೆ..
ಈ ವೇಳೆ ಮಾತನಾಡಿದ ಶೋಷಿತ ವರ್ಗಗಳ ಅಧ್ಯಕ್ಷ ಬಾಡದ ಆನಂದರಾಜ್, ಶೋಷಿತರ ಗಟ್ಟಿ ಧ್ವನಿಯಾಗಿದ್ದ ಮುರುಘಾ ಶ್ರೀಗಳನ್ನ ಷ್ಯಡ್ಯಂತ್ರದಿಂದ ಜೈಲಿಗೆ ಕಳುಹಿಸಲಾಗಿತ್ತು, ಆದರೆ ನಾಳೆ ಬಿಡುಗಡೆಯಾಗುತ್ತಿರುವುದು ಎಲ್ಲರಿಗೂ ಸಂತೋಷ ತಂದಿದೆ, ಶ್ರೀಗಳು ಪಲಾಯನ ವಾದ ಮಾಡದೇ ಕಾನೂನಿಗೆ ಗೌರವ ಕೊಟ್ಟಿದ್ದಾರೆ, ನಾಳೆ ಬಿಡುಗಡೆಯಾಗುತ್ತಾರೆ ಎಂಬ ಮಾಹಿತಿ ಬಂದಿದೆ, ಹೀಗಾಗಿ ಸಿಹಿ ಹಂಚಿ ಸಂಭ್ರಮಪಟ್ಟಿದ್ದೇವೆ, ಚಿತ್ರದುರ್ಗದಲ್ಲಿ ವಾಸ್ತವ್ಯ ಮಾಡುವಂತಿಲ್ಲ ಎಂದು ಕೋರ್ಟ್ ಹೇಳಿದೆ, ಹೀಗಾಗಿ ಶ್ರೀಗಳು ದಾವಣಗೆರೆಯಲ್ಲಿ ವಾಸ್ತವ್ಯ ಮಾಡಲು ನಾವು ಸಿದ್ದತೆ ಮಾಡುತ್ತೇವೆ. ಸ್ವಾಮೀಜಿಯವರು ನಿರ್ದೋಷಿಯಾಗಿ ಹೊರ ಬರುತ್ತಾರೆ ಎಂಬ ಗಟ್ಟಿ ನಂಬಿಕೆ ಇದೆ, ಮುರುಘಾ ಶ್ರೀಗಳು ಸಾಮಾಜಿಕ ಕಾರ್ಯಗಳು ಶ್ಲಾಘನೀಯ, ಶ್ರೀಗಳು ಹೊರಬಂದ ಬಳಿಕ ಸಾಮಾಜಿಕ ಕೆಲಸಗಳನ್ನ ಮುಂದುವರೆಸಲಿ ಎಂದು ತಿಳಿಸಿದ್ದಾರೆ..