POWER SAMACHARA | KANNADA NEWS | BREKING NEWS| 13-11-2023..
ದಾವಣಗೆರೆ: ಹುಲಿ, ಸಿಂಹ, ಚಿರತೆ, ಕರಡಿ, ಆನೆ ದಾಳಿಯಿಂದ ವ್ಯಕ್ತಿಗಳು ಸಾವನ್ನಪ್ಪಿರೋದು ಕೇಳಿದ್ದೇವೆ, ಆದರೆ ಕೋತಿ ದಾಳಿಯಿಂದ ವ್ಯಕ್ತಿ ಸಾವನ್ನಪ್ಪಿರುವ ಅಪರೂಪದ ಘಟನೆ ಜರುಗಿದೆ, ಕೋತಿಯ ಕೀಟಲೆಗೆ ಇಡೀ ತಾಲ್ಲೂಕೆ ನಲುಗಿ ಹೋಗಿದೆ, ಕೊನೆಗೂ ಆ ಕ್ರೂರಿ ಕೋತಿ ಸಿಕ್ತಾ ಇಲ್ವಾ ಈ ಸ್ಟೋರಿ ನೋಡಿ.. ನಿಮಗೆ ಗೊತ್ತಾಗುತ್ತೆ..
ಹೌದು.. ನಿಜ ಹುಲಿ, ಸಿಂಹ, ಚಿರತೆ, ಕರಡಿ, ಆನೆ ದಾಳಿಯಿಂದ ವ್ಯಕ್ತಿಗಳು ಸಾವನ್ನಪ್ಪಿರೋದು ಕೇಳಿದ್ದೇವೆ, ಆದರೆ ಕೋತಿ ದಾಳಿಯಿಂದ ವ್ಯಕ್ತಿ ಸಾವನ್ನಪ್ಪಿರುವ ಅಪರೂಪದ ಘಟನೆ ಜರುಗಿದ್ದು, ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ, ಅರಕೆರೆ ಕಾಲೋನಿಯಲ್ಲಿ ಮಂಗನ ಉಪಟಳಕ್ಕೆ ಗ್ರಾಮಸ್ಥರು ತತ್ತರಿಸಿದ್ದಾರೆ. 66 ವರ್ಷದ ಗುತ್ಯಪ್ಪ ಬಿನ್ ರಂಗಪ್ಪ ಎಂಬುವರ ಮೇಲೆ ಮಂಗವೊಂದು ದಾಳಿ ಮಾಡಿ ಅವರ ಸಾವಿಗೆ ಕಾರಣವಾಗಿದೆ. ಮಧ್ಯರಾತ್ರಿ ಬಹಿರ್ದೆಸೆಗೆ ಹೋದಾಗ ಗುತ್ಯಪ್ಪನ ಮೇಲೆ ಅಟ್ಯಾಕ್ ಮಾಡಿದ ಮಂಗ
ಕೈ ರಟ್ಟೆ ಭಾಗದಲ್ಲಿ ಕಚ್ಚಿಗಾಯಗೊಳಿಸಿದೆ. ಇದರಿಂದ
ತೀವ್ರ ರಕ್ತಸ್ರಾವ ಆಗಿ ಹೊನ್ನಾಳಿ ತಾಲ್ಲೂಕ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ ಚಿಕತ್ಸೆ ಫಲಕಾರಿಯಾಗದೇ ಗುತ್ಯಪ್ಪ ಸಾವನ್ನಪ್ಪಿದ್ದಾರೆ. ಅಂದೇ ರಾತ್ರಿ ಪ್ರಭಾಕರ್ ಎಂಬುವರ ಮೇಲು ಸಹ ಕೋತಿ ದಾಳಿ ಮಾಡಿದೆ.
ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೋತಿ ಕಚ್ಚಿ ಸಾವನ್ನಪ್ಪಿದ ಪ್ರಕರಣ ದಾಖಲಾಗಿದೆ. ಹೊನ್ನಾಳಿ ವಲಯ ಅರಣ್ಯಾಧಿಕಾರಿಗಳು ಸ್ಥಳ ಮಹಜರ್ ನಡೆಸಿ ಕೋತಿ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದ್ದರು, ಮಂಗನ ದಾಳಿಯಿಂದ ಭಯಭೀತಗೊಂಡ ಗ್ರಾಮಸ್ಥರು ಕೋತಿ ಸೆರೆ ಹಿಡಿಯುವಂತೆ ಆಗ್ರಹಿಸಿದ್ದರು. ಮಂಗನ ಸೆರೆ ಹಿಡಿಯಲು ಬೋನು ಬಲೆ ಹಿಡಿದ ಕೂತ ಅರಣ್ಯ ಇಲಾಖೆ ಅಧಿಕಾರಿಗಳು ಸತತ ಎರಡು ದಿನಗಳ ಕಾರ್ಯಾಚರಣೆ ನಂತರ ಬೇವಿನ ಮರೆ ಏರಿ ಕುಳಿತ ಕಿಲ್ಲರ್ ಕೋತಿ ಸೆರೆಯಾಗಿದೆ, ಆದ್ರೆ ಮಂಗನ ದಾಳಿಗೆ ಪಿಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ಬಲಿಯಾಗಿದ್ದು ಸೂಕ್ತ ಪರಿಹಾರ ಕೊಡುವಂತೆ ಆಗ್ರಹಿಸಿದ್ದಾರೆ.ಅರಕೆರೆ ಕಾಲೋನಿ ಅರಣ್ಯಕ್ಕೆ ಹೊಂದಿಕೊಂಡಿದ್ದು ಎರಡು ಚಿರತೆ ಗಳು ಗ್ರಾಮಕ್ಕೆ ನುಗ್ಗುತ್ತಿವೆ. ಕರಡಿಗಳ ಹಾವಳಿ ವಿಪರೀತವಾಗಿದೆ. ಅರಣ್ಯ ಇಲಾಖೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಒಟ್ಟಾರೆ ಅರಣ್ಯ ಇಲಾಖೆಯಿಂದ ಮೃತ ಕುಟುಂಬಕ್ಕೆ 15 ಲಕ್ಷ ಕೊಡುವುದಾಗಿ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಗಾಯಗೊಂಡಿರುವ ಕುಟುಂಬಕ್ಕು ಚಿಕಿತ್ಸಾ ವೆಚ್ಚ ಭರಿಸುವುದಾಗಿ ಇಲಾಖೆ ತಿಳಿಸಿದೆ. ಬೇಸಿಗೆ ದಿನಗಳು ಸಮೀಪಿಸುತ್ತಿದ್ದು ಅರಕೆರೆ ಕಾಲೋನಿಯಲ್ಲಿ ಕಾಡುಪ್ರಾಣಿಗಳ ಹಾವಳಿ ತಪ್ಪಿಸಲು ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ.