POWER SAMACHARA | KANNADA NEWS | BREKING NEWS| 12-11-2023..
ದಾವಣಗೆರೆ : ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಆಯ್ಕೆ ಬಳಿಕ ಬಿಜೆಪಿಯಲ್ಲಿ ಕರೆಂಟ್ ಪಾಸ್ ಆಗಿದೆ, ಹೊಸ ಹುಮ್ಮಸ್ಸು, ಸಂಚಲನ ಮೂಡಿದೆ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ..
ದಾವಣಗೆರೆ ಸಮೀಪದ ಶಿರಮಗೊಂಡನಹಳ್ಳಿಯಲ್ಲಿ ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಅವರನ್ನ ಭೇಟಿ ಮಾಡಿದ ಎಂಪಿ ರೇಣುಕಾಚಾರ್ಯ, ಕೆಲವೊತ್ತು ರಹಸ್ಯ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, 2016ರಲ್ಲಿ ಯುಗಾದಿಗೆ ರಾಜ್ಯಾಧ್ಯಕ್ಷರಾಗಿ ಬಿಎಸ್ ವೈಗೆ ಬಂಪರ್ ಕೊಡುಗೆ ಸಿಕ್ಕಿತ್ತು, ಈಗ ದೀಪಾವಳಿಗೆ ಬಿವೈ ವಿಜಯೇಂದ್ರಗೆ ಬಂಪರ್ ಸಿಕ್ಕಿದೆ, ವಿಜಯೇಂದ್ರ ಸಂಘಟನಾ ಚತುರ, ಎಲ್ಲರು ವಿಜಯೇಂದ್ರ ಒಳ್ಳೆಯ ಆಯ್ಕೆಯಾಗಿದೆ ಎಂದಿದ್ದಾರೆ, ಚಿಕ್ಕ ವಯಸ್ಸಿನಲ್ಲಿ ಮಹತ್ತರ ಜವಾಬ್ದಾರಿ ಸಿಕ್ಕಿದೆ ಎಂದರು..
ಹಿರಿಯ ಅಸಮಾಧಾನ ವಿಚಾರವಾಗಿ ಮಾತನಾಡಿ, ಪಕ್ಷದಲ್ಲಿ ಸಣ್ಣಪುಟ್ಟ ವ್ಯತ್ಯಾಸ ಇರುತ್ತದೆ, ಎಲ್ಲವು ಸರಿಯಾಗಲಿದೆ, ನಾನು ಕೂಡ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೆ, ಆದರೆ ಸಿಕ್ಕಿಲ್ಲ, ಆಗಂತ ನಾನು ಬೇಜಾರು ಆಗಿಲ್ಲ, ಅಧಿಕಾರ ಮುಖ್ಯವಲ್ಲ, ಅಧಿಕಾರ ನೀರಿನ ಮೇಲೆ ಗುಳ್ಳೆ ತರ, ವಿಜಯೇಂದ್ರ ಜೊತೆ ರಾಜ್ಯ ಪ್ರವಾಸ ಮಾಡುತ್ತೇನೆ, ನಿದ್ದೆ ಮಾಡದಂತೆ 28ಕ್ಷೇತ್ರದಲ್ಲಿ ಓಡಾಡಿ ಕೆಲಸ ಮಾಡುತ್ತೇವೆ, ಒಟ್ಟಾಗಿ ಒಂದಾಗಿ ಬಿಜೆಪಿ ಗೆಲ್ಲಿಸುವ ಪ್ರಯತ್ನ ಮಾಡುತ್ತೇವೆ ಎಂದರು..
ಕುಟುಂಬ ರಾಜಕಾರಣ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರ ಮಾತನಾಡಿ, ಪ್ರಿಯಾಂಕ್ ಖರ್ಗೆಗೆ ಮಾತನಾಡುವ ನೈತಿಕತೆ ಇಲ್ಲ, ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತಿದೆ ನೆಹರೂವಿನಿಂದ ಹಿಡಿದು ವಾದ್ರಾ ತನಕ ಕುಟುಂಬ ರಾಜಕಾರಣವೇ ತುಂಬಿದೆ, ನಿಮಗೆ ಖರ್ಗೆ ಮಗ ಅಂತಾ ಸಚಿವ ಸ್ಥಾನ ನೀಡಿದ್ದಾರೆ, ಗುಂಡುರಾವ್ ಮಗ ಅಂತಾ ದಿನೇಶ್ ಗುಂಡೂರಾವ್ ಗೆ ಸಚಿವ ಸ್ಥಾನ ನೀಡಿದ್ದಾರೆ ಎಂದೂ ದೂರಿದರು..
ನಾನು ದಾವಣಗೆರೆ ಎಂಪಿ ಟಿಕೆಟ್ ಪ್ರಬಲ ಆಕಾಂಕ್ಷಿ..
ನಾನು ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ, ಸಂಸದ ಜಿಎಂ ಸಿದ್ದೇಶ್ವರ್ ಅವರಿಗೆ ಟಿಕೆಟ್ ಸಿಕ್ಕರೆ ಕಾದು ನೋಡುವೆ, ಕೂಸು ಹುಟ್ಟುವ ಮುನ್ನ ಕುಲಾವಿ ಹೊಲೆಸಲ್ಲ, ಮುಂದೇ ಏನಾಗುತ್ತೊ ಕಾದು ನೋಡೋಣ ಎಂದು ರೇಣುಕಾಚಾರ್ಯ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ..