POWER SAMACHARA | KANNADA NEWS | BREKING NEWS| 11-10-2023..
ದಾವಣಗೆರೆ: ಹಿಂದೂ ಮಹಾಗಣಪತಿ ಶೋಭಾಯಾತ್ರೆ ಸಿದ್ದತೆ ವೇಳೆ ಅವಘಡ ನಡೆದಿದೆ, ದಾವಣಗೆರೆ ಪಿಬಿ ರಸ್ತೆಯಲ್ಲಿ ಕೇಸರಿ ಧ್ವಜ ಕಟ್ಟುವಾಗ ಯುವಕನ ತಲೆ ಮೇಲೆ ಕ್ರೇನ್ ಹರಿದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ..
ತಲೆ ಮೇಲೆ ಕ್ರೇನ್ ಹತ್ತಿದ ಪರಿಣಾಮ ಸ್ಥಳದಲ್ಲೇ ಬಸವರಾಜಪೇಟೆಯ ಪೃಥ್ವಿರಾಜ್ (26) ಎಂಬಾತ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ, ಇದೇ 14ರಂದು ಶೋಭಾಯಾತ್ರೆ ಹಿನ್ನಲೆ ದಾವಣಗೆರೆ ನಗರದ ಪಿಬಿ ರಸ್ತೆಯ ರೇಣುಕಾಮಂದಿರದ ಬಳಿ ಪೃಥ್ವಿರಾಜ್ ಸೇರಿದಂತೆ ಹಲವರು ಕೇಸರಿ ಧ್ವಜಗಳನ್ನು ಕಟ್ಟುತ್ತಿದ್ದರು, ಈ ವೇಳೆ ಕ್ರೇನ್ ಹಿಂಬದಿಯಲ್ಲಿ ಪೃಥ್ವಿರಾಜ್ ನಿಂತಿದ್ದು, ಚಾಲಕ ಗಮನಿಸದೇ ಕ್ರೇನ್ ಹಿಂಬದಿಗೆ ಚಲಾಯಿಸಿದ್ದಾನೆ ಎನ್ನಲಾಗಿದ್ದು, ತಲೆ ಮೇಲೆ ಕ್ರೇನ್ ಹರಿದಿದೆ ಎಂದು ತಿಳಿದು ಬಂದಿದೆ, ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ, ಇನ್ನೂ ಜಿಲ್ಲಾಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದ್ದು, ಜಿಲ್ಲಾಸ್ಪತ್ರೆಯ ಮುಂಭಾಗ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ, ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ..
ನಾಳೆ ಬೈಕ್ ರ್ಯಾಲಿ ರದ್ದು..
ಇನ್ನೂ ಶೋಭಾಯಾತ್ರೆ ಹಿನ್ನಲೆ ನಾಳೆ ಗುರುವಾರ ಬೆಳಿಗ್ಗೆ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು, ಯುವಕ ಸಾವನ್ನಪ್ಪಿದ ಹಿನ್ನಲೆ ಬೈಕ್ ರ್ಯಾಲಿ ರದ್ದುಪಡಿಸಲಾಗಿದೆ ಎಂದು ಹಿಂದು ಮಹಾ ಗಣಪತಿ ಸಮಿತಿ ಅಧ್ಯಕ್ಷ ಜೊಳ್ಳಿ ಗುರು ಮಾಹಿತಿ ನೀಡಿದ್ದಾರೆ..