Wednesday, June 18, 2025
  • Home
  • ರಾಜ್ಯ
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಷ್ಟ್ರೀಯ ಸುದ್ದಿ
Power Samachara
  • Home
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಜ್ಯ
  • ರಾಷ್ಟ್ರೀಯ ಸುದ್ದಿ
  • Login
No Result
View All Result
Power Samachara
Home ಪ್ರಮುಖ ಸುದ್ದಿ

ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದರು, ಬಂದ್ ಆಯ್ತು ಭದ್ರಾ ಡ್ಯಾಂ ಬಲದಂಡೆ ನೀರು; ಒಣಗುತ್ತಿದೆ ಭತ್ತದ ಪೈರು.. ದಾವಣಗೆರೆಯಲ್ಲಿ ಎರಡು ಕಡೆ ಹೆದ್ದಾರಿ ತಡೆದು ರಾಜ್ಯ ಸರ್ಕಾರದ ವಿರುದ್ದ ರೈತರ ಆಕ್ರೋಶ..

Power Samachara News by Power Samachara News
September 21, 2023
in ಪ್ರಮುಖ ಸುದ್ದಿ, Home, ದಾವಣಗೆರೆ
0
ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದರು, ಬಂದ್ ಆಯ್ತು ಭದ್ರಾ ಡ್ಯಾಂ ಬಲದಂಡೆ ನೀರು; ಒಣಗುತ್ತಿದೆ ಭತ್ತದ ಪೈರು..  ದಾವಣಗೆರೆಯಲ್ಲಿ ಎರಡು ಕಡೆ ಹೆದ್ದಾರಿ ತಡೆದು ರಾಜ್ಯ ಸರ್ಕಾರದ ವಿರುದ್ದ ರೈತರ ಆಕ್ರೋಶ..
0
SHARES
0
VIEWS
Share on WhatsappShare on FacebookShare on Twitter

POWER SAMACHARA | KANNADA NEWS | BREKING NEWS| 21-09-2023..

ದಾವಣಗೆರೆ: ರಾಜ್ಯದಲ್ಲಿ ಸರ್ಕಾರ ರೈತರ ವಿಚಾರದಲ್ಲಿ ಏಕೋ ನಿರ್ಲಕ್ಷ್ಯ ಧೋರಣೆ ತಾಳುತ್ತಾ ಇದೆ, ಒಂದು ಕಡೆ ತಮಿಳು ನಾಡಿಗೆ ನೀರು ಬಿಟ್ಟು ಛೀಮಾರಿ ಹಾಕಿಸಿಕೊಂಡ ಸರ್ಕಾರ, ಇನ್ನೊಂದೆಡೆ ರೈತರಿಗೆ ನೀರು ಕೊಡುತ್ತೇವೆ ಎಂದು ಹೇಳಿ ಉಲ್ಟಾ ಹೊಡೆದಿದೆ. ಡ್ಯಾಂನಿಂದ ನೀರು ಬಂದಿದ್ದ ಖುಷಿಗೆ ರೈತರೆಲ್ಲ ಭತ್ತ ನಾಟಿ ಮಾಡಿದ್ರು, ಆದ್ರೀಗ ನೀರು ಬಂದ್ ಮಾಡಿ ರೈತರ ಬೆನ್ನೂ ಮೂಳೆ ಮುರಿದಿದೆ..

Related posts

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

May 14, 2025
ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

May 1, 2025

ಸರ್ಕಾರದ ಎಡವಟ್ಟು ಆದೇಶ, ಬೆಳೆ ಒಣಗುವ ಭಯದಲ್ಲಿ ರೈತರು..

ಹೌದು.. ಭದ್ರಾ ಜಲಾಶಯ ದಾವಣಗೆರೆ ಜಿಲ್ಲೆಯ ಅನ್ನದ ಬಟ್ಟಲು ಅಂತಲೇ ಹೆಸರು, ಡ್ಯಾಂ ನಂಬಿ, ಲಕ್ಷಾಂತರ ರೈತರು ಬದುಕುತ್ತಿದ್ದಾರೆ, ಈ ಹಿನ್ನಲೆ ಆಗಸ್ಟ್ 10 ರಿಂದ ನಿರಂತರ ನೂರು ದಿನ ಬಲದಂಡೆ ನಾಲೆಗೆ ನೀರು ಬಿಡುವುದಾಗಿ ಕಾಡಾ ಸಮಿತಿ ಹಾಗೂ ರಾಜ್ಯ ಸರ್ಕಾರ ಆದೇಶ ಮಾಡಿತ್ತು, ಡ್ಯಾಂ ಪೂರ್ತಿ ಭರ್ತಿ ಆಗದ ಹಿನ್ನಲೆ ಬೇಸಿಗೆ ಬೆಳೆಗೆ ನೀರು ಸಿಗೋದಿಲ್ಲ, ಈ ಭಾರೀಯಾದರು ಭತ್ತ ಬೆಳೆಯೋಣ ಎಂದು ರೈತರು ನಾಟಿ ಮಾಡಿದ್ದರು, ಭತ್ತ ನಾಟಿ ಮಾಡಿ ಈಗಾಗಲೇ ತಿಂಗಳುಗಳೇ ಕಳೆದಿವೆ, ಆದರೆ ಈಗ ರೈತರಿಗೆ ಜಲಸಂಪನ್ಮೂಲ ಇಲಾಖೆ ಶಾಕ್ ನೀಡಿದೆ, ನೂರು ದಿನ ನಿರಂತರ ಅಂತಾ ಆದೇಶ ಮಾಡಿ ಈಗ ಎರಡು ಹಂತಗಳಲ್ಲಿ ನೀರು ನಿಲ್ಲಿಸುವುದಾಗಿ ಆದೇಶ ಮಾಡಿ ರೈತರಿಗೆ ಸಂಕಷ್ಟ ತಂದೊಡ್ಡಿದೆ, ಡ್ಯಾಂನಲ್ಲಿ 160 ಅಡಿ ಇದ್ದರು ಸಹ ಕಾಡಾ ಸಮಿತಿ ರೈತರನ್ನು ಕಾಡುತ್ತಿದೆ, ಈಗಾಗಲೇ ಒಂದುವರೆ ತಿಂಗಳು ನೀರು ಹರಿಸಲಾಗಿದೆ, ಇನ್ನೆರಡು ತಿಂಗಳಿ ಹರಿದರೆ ಬೆಳೆ ಕೈಗೆ ಸಿಗುತ್ತದೆ ಅಂತಾ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ, ಈ ಹಿನ್ನಲೆ ರೊಈ ಹಿನ್ನಲೆ ದಾವಣಗೆರೆ ನಗರದ ಹಳೇ ಕುಂದುವಾಡ ಬಳಿ ರಾಷ್ಟ್ರೀಯ ಹೆದ್ದಾರಿ 48ನ್ನೂ ತಡೆದು ಆಕ್ರೋಶ ವ್ಯಕ್ತಪಡಿಸಿದ್ರು, ಬಳಿಕ ಮತ್ತೆ ರೊಚ್ಚಿಗೆ ಎದ್ದ ರೈತರು, ಬಾಡಾ ಕ್ರಾಸ್ ಬಳಿ ಆಗಮಿಸಿ ಸಂಪೂರ್ಣವಾಗಿ ಹೆದ್ದಾರಿ ತಡೆದರು, ಎರಡು ಕಡೇ ಬಂದ್ ಮಾಡಿದ್ದರಿಂದ ನ್ಯಾಷನಲ್ ಹೈವೆ ಟ್ರಾಫಿಕ್ ಸಮಸ್ಯೆ ಎದುರಿಸಬೇಕಾಯಿತು, ರೈತ ಮುಖಂಡರಾದ ಬಿಎಂ ಸತೀಶ್, ಬೆಳವನೂರು ನಾಗೇಶ್ವರ್ ರಾವ್, ಕುಂದುವಾಡ ಹೆಚ್ ಜಿ ಗಣೇಶಪ್ಪ, ಕುಂದುವಾಡ ಹೆಚ್ ಎನ್ ಗುರುನಾಥ್, ಹನುಮಂತಪ್ಪ, ಶಾಮನೂರು ಲಿಂಗರಾಜ್ ನೇತೃತ್ವದಲ್ಲಿ ಹೋರಾಟಕ್ಕೆ ಕರೆ ನೀಡಲಾಗಿತ್ತು..

ಎರಡು ಸರಿ ನೀರು ಬಂದ್..!

ಮೊದಲು ಆಗಸ್ಟ್ 10ರಿಂದ ನಿರಂತರ ನೂರು ದಿನ ಹರಿಸಲು ಆದೇಶ ಮಾಡಿದ್ದ ಭದ್ರಾ ಯೋಜನಾ ಸಲಹ ಸಮಿತಿ, ಡ್ಯಾಂ ಪೂರ್ಣ ಭತ್ತಿ ಆಗಿಲ್ಲ, ಮುಂದೇ ತೋಟಗಾರಿಕೆ ಬೆಳೆಗಳಿಗೆ ತೊಂದರೆ ಆಗಬಹುದು ಎಂದು ಈಗ ಎರಡನೇ ಆದೇಶ ಮಾಡಿದೆ, ಈಗಾಗಲೇ ಎರಡು ದಿನದ ಹಿಂದೇ ನೀರು ನಿಲ್ಲಿಸಲಾಗಿದೆ, ಹಾಗೂ ಅಕ್ಟೋಬರ್ 16ರಿಂದ ಹತ್ತು ದಿನ ನೀರು ನಿಲ್ಲಿಸಲು ಆದೇಶ ಮಾಡಿದೆ, ಬಲದಂಡೆ ಹಾಗೂ ಎಡದಂತೆ ಎರಡೂ ಕಡೇಗಳಲ್ಲೂ ಆನ್ ಅಂಡ್ ಆಫ್ ಮಾದರಿಯಲ್ಲಿ ನೀರು ನಿಲ್ಲಿಸಲು ಆದೇಶ ಮಾಡಿದೆ, ನಿರಂತರ ನೀರು ಹರಿದರೆ ಗದ್ದೆಗಳಿಗೆ ನೀರು ಸಿಗೋದು ಕಷ್ಟ, ಆನ್ ಅಂಡ್ ಆಫ್ ಮಾಡಿದರೆ ನಾಲೆಗಳಿಗೆ ನೀರು ಬರುವುದೇ ಡೌಟು, ಇದರಿಂದ ಎಲ್ಲಾ ಬೆಳೆಗಳು ಒಣಗಿ ಹೋಗುವುದು ನಿಶ್ಚಿತ, ಮೊದಲೇ ನೀರು ಬಿಡುವುದಿಲ್ಲ ಎಂದು ತಿಳಿಸಿದ್ದರೆ ನಾವು ಭತ್ತ ನಾಟಿಯೇ ಮಾಡುತ್ತಿರಲಿಲ್ಲ, ಈಗ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈಗ ನೀರು ಕೊಡೋದಿಲ್ಲ ಎಂದರೆ ಸಾಲ ಮೈ ಮೇಲೆ ಹೊತ್ತುಕೊಳ್ಳಬೇಕಾಗುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು..

ಸಚಿವರ ಮಾತಿಗೆ ಕಿಮ್ಮತ್ತಿಲ್ಲ..!

ಇತ್ತೀಚೆಗಷ್ಟೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಜೊತೆ ಮಾತನಾಡಿದ್ದೇನೆ ಯಾವುದೇ ಕಾರಣಕ್ಕೂ ನೀರು ಬಂದ್ ಆಗುವುದಿಲ್ಲ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿಕೆ ನೀಡಿದ್ದರು, ಬೆಂಗಳೂರಿನಲ್ಲಿ ಡಿಸಿಎಂ, ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರನ್ನೂ ಸಹ ಭೇಟಿ ಮಾಡಿ ಬಂದಿದ್ದಾರೆ, ಆದರೂ ಸಹ ನೀರು ಬಂದ್ ಆಗಿದೆ, ಇದರಿಂದ ಗೊತ್ತಾಗುತ್ತದೆ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಮಾತನ್ನೂ ಯಾರು ಕೇಳುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು..

ಡಿಸಿ ಎಂವಿ ವೆಂಕಟೇಶ್ ದೌಡು..!

ಬಾಡಾ ಕ್ರಾಸ್ ಬಳಿ ಹೆದ್ದಾರಿ ತಡೆದಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಯಿತು, ಹೀಗಾಗಿ ಪ್ರತಿಭಟನಾ ಸ್ಥಳಕ್ಕೆ ಬಂದ ಡಿಸಿ ಎಂವಿ ವೆಂಕಟೇಶ್, ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಹಾಗೂ ರೈತರೊಂದಿಗೆ ಸಭೆ ನಡೆಸಿ ಸರ್ಕಾರಕ್ಕೆ ವರದಿ ಕಳುಹಿಸಲಾಗುವುದು ಎಂದು ಭರವಸೆ ನೀಡಿದ ನಂತರ ಹೆದ್ದಾರಿ ಬಂದ್ ಹಿಂಪಡೆಯಲಾಯಿತು, 24 ಗಂಟೆಗಳ ಒಳಗಾಗಿ ನೀರು ಬಿಡಬೇಕು ಇಲ್ಲದಿದ್ದರೆ ದಾವಣಗೆರೆ ಬಂದ್ ಮಾಡಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದರು..

ಒಟ್ಟಾರೆ ರಾಜ್ಯ ಸರ್ಕಾರ ಹಾಗೂ ನೀರಾವರಿ ಸಮಿತಿ ರೈತರ ಬದುಕಲ್ಲಿ ಆಟವಾಡುತ್ತಿದೆ, ಮೊದಲು ನೀರು ಬಿಡುವುದಾಗಿ ಹೇಳಿ ಈಗ ಬಂದ್ ಮಾಡಲು ನಿರ್ಧಾರ ಮಾಡಿ ರೈತರಿಗೆ ಸಂಕಷ್ಟ ತಂದೊಡ್ಡಿದೆ. ಇನ್ನಾದರು ಜಲಸಂಪನ್ಮೂಲ ಇಲಾಖೆ ಎಚ್ಚೆತ್ತು ನೀರು ಹರಿಸಿ ರೈತರ ಬೆಳೆ ಉಳಿಸಬೇಕಿದೆ..

Tags: bada crossDavanageredyamformerkunduvadapaddys.s malllikarjunthungabhadraಎಸ್ ಎಸ್ ಮಲ್ಲಿಕಾರ್ಜುನ್ಕುಂದುವಾಡಡ್ಯಾಂತುಂಗಾಭದ್ರದಾವಣಗೆರೆಬಾಡ ಕ್ರಾಸ್ಭತ್ತರೈತ

Related Posts

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!
Home

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

by Power Samachara News
May 14, 2025
0

POWER SAMACHARA | KANNADA NEWS | BREKING NEWS| 14-05-2025.. ದಾವಣಗೆರೆ: ಇತ್ತೀಚೆಗೆ ಬಂದಿದ್ದ ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಇಲ್ಲೊಬ್ಬ ಬ್ಯಾಂಕ್ ಸಿಬ್ಬಂದಿ...

Read more
ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

May 1, 2025
ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

April 30, 2025
ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

April 29, 2025
ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ

ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ

April 25, 2025
ಮೊಬೈಲ್ ಬಿಟ್ಟೆ, ಕಷ್ಟ ಮೆಟ್ಟಿ ನಿಂತೆ, ಯಶಸ್ಸಿನ ಮೆಟ್ಟಿಲು ಹತ್ತೆಬಿಟ್ಟೆ..!  ಕುರಿ ಮಂದೆಯಲ್ಲಿ ಸಾಧನೆಯ ಶಿಖರ ಏರಿದ ‘ಬೀರದೇವ’

ಮೊಬೈಲ್ ಬಿಟ್ಟೆ, ಕಷ್ಟ ಮೆಟ್ಟಿ ನಿಂತೆ, ಯಶಸ್ಸಿನ ಮೆಟ್ಟಿಲು ಹತ್ತೆಬಿಟ್ಟೆ..! ಕುರಿ ಮಂದೆಯಲ್ಲಿ ಸಾಧನೆಯ ಶಿಖರ ಏರಿದ ‘ಬೀರದೇವ’

April 25, 2025
ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!
Home

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

by Power Samachara News
May 14, 2025
0

POWER SAMACHARA | KANNADA NEWS | BREKING NEWS| 14-05-2025.. ದಾವಣಗೆರೆ: ಇತ್ತೀಚೆಗೆ ಬಂದಿದ್ದ ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಇಲ್ಲೊಬ್ಬ ಬ್ಯಾಂಕ್ ಸಿಬ್ಬಂದಿ...

Read more
ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

May 1, 2025
ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

April 30, 2025
ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

April 29, 2025
ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ

ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ

April 25, 2025
  • Home
  • ರಾಜ್ಯ
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಷ್ಟ್ರೀಯ ಸುದ್ದಿ

© 2023 Power Samachara -Design by Newbie Techy.

No Result
View All Result
  • Power Samachara

© 2023 Power Samachara -Design by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In