Friday, May 23, 2025
  • Home
  • ರಾಜ್ಯ
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಷ್ಟ್ರೀಯ ಸುದ್ದಿ
Power Samachara
  • Home
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಜ್ಯ
  • ರಾಷ್ಟ್ರೀಯ ಸುದ್ದಿ
  • Login
No Result
View All Result
Power Samachara
Home ಪ್ರಮುಖ ಸುದ್ದಿ

ಹೆಣ ಬೀಳಿಸಿದ್ದು ಹಣಕ್ಕಾಗಿಯೋ, ಹೆಣ್ಣಿಗಾಗಿಯೋ..!? ಒಂದೇ ತಟ್ಟೆಲಿ ಅನ್ನ ತಿಂದು ಮುಹೂರ್ತ ಇಟ್ಟ ಗೆಳೆಯರು..!

Power Samachara News by Power Samachara News
April 21, 2025
in ಪ್ರಮುಖ ಸುದ್ದಿ, Home, ದಾವಣಗೆರೆ
0
ಹೆಣ ಬೀಳಿಸಿದ್ದು ಹಣಕ್ಕಾಗಿಯೋ, ಹೆಣ್ಣಿಗಾಗಿಯೋ..!?  ಒಂದೇ ತಟ್ಟೆಲಿ ಅನ್ನ ತಿಂದು ಮುಹೂರ್ತ ಇಟ್ಟ ಗೆಳೆಯರು..!
0
SHARES
0
VIEWS
Share on WhatsappShare on FacebookShare on Twitter

POWER SAMACHARA | KANNADA NEWS | BREKING NEWS| 19-04-2025

ದಾವಣಗೆರೆ: ಸ್ನೇಹ ಅಂತಾ ಒಳಗೊಳಗೆ ಸ್ಕೆಚ್ಚು ಹಾಕ್ತಾರೋ, ಒಂದೇ ತಟ್ಟೆಯಲ್ಲಿ ಅನ್ನ ತಿಂದು ಮುಹೂರ್ತ ಇಡ್ತಾರೋ ಅನ್ನೋ ಜೋಗಿ ಸಿನಿಮಾದ ಹಾಡು ಕೇಳಿದ್ದೇವೆ, ಇಲ್ಲಿ ಥೇಟ್ ಇದೇ ರೀತಿ ಜೀವದ ಗೆಳೆಯರ ನಡುವೆ ಗಲಾಟೆ ನಡೆದ್ಬಿಟ್ಟಿದೆ, ಆ ಗಲಾಟೆ ಕೊಲೆ ಮಾಡುವ ಹಂತದವರಿಗೂ ತಲುಪಿ ಬಿಟ್ಟಿದ್ದು, ಕೊಲೆ ಯಾಕಾಯ್ತು ಅನ್ನೋದೆ ದೊಡ್ಡ ಚರ್ಚೆಯಾಗಿ ಉಳಿದ್ಬಿಟ್ಟಿದೆ.. ಈ ಕುರಿತ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ..

Related posts

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

May 14, 2025
ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

May 1, 2025

ಹೌದು.. ಅವರೆಲ್ಲ ಒಂದೇ ಏರಿಯಾದ ಯುವಕರು, ಚಿಕ್ಕ ವಯಸ್ಸಿನಿಂದ ಒಟ್ಟಿಗೆ ಆಟವಾಡುತ್ತಾ ಬೆಳೆದವರು, ಒಂದೇ ತಟ್ಟೆಯಲ್ಲಿ ಅನ್ನ ತಿಂದವರು, ಆದರೆ ಒಂದೇ ತಟ್ಟೆಯಲ್ಲಿ ಅನ್ನ ತಿಂದು ಗೆಳೆಯನಿಗೆ ಮುಹೂರ್ತ ಇಟ್ಟು ಗೆಳೆತನದ ಬಗ್ಗೆಯೇ ಅನುಮಾನ ಹುಟ್ಟುವಂತೆ ಮಾಡ್ಬಿಟ್ಟಿದ್ದಾರೆ. ಸ್ನೇಹಿತರನನ್ನು ನಂಬಿ ಹೋಗಿ ಪ್ರಾಣ ತೆತ್ತಿದ್ದಾನೆ, ಈ ಘಟನೆ ನಡೆದಿದ್ದು, ಚಿತ್ರದುರ್ಗದಲ್ಲಿ..

ಘಟನೆ ಆಗಿದ್ದು ಚಿತ್ರದುರ್ಗದಲ್ಲೇ ಆದ್ರೂ ಇವರೆಲ್ಲ ದಾವಣಗೆರೆ ನಗರದ ಕೆಬಿ ಬಡಾವಣೆಯ ನಿವಾಸಿಗಳು.., ಸ್ನೇಹಿತನಿಗೆ ಮಹೋರ್ತ ಫಿಕ್ಸ್ ಮಾಡಿದ್ದು ಇವರೇ, ಸ್ನೇಹಿತರನ್ನು ಅತಿಯಾಗಿ ನಂಬಬಾರದು ಎಂದು ಕಿವಿಮಾತು ಹೇಳಿದ್ರು ಕೂಡ ಸ್ನೇಹದ‌‌ ಮೇಲಿರುವ ನಂಬಿಕೆಯಿಂದ ಗೆಳೆಯರ ಮಾತು ಕೇಳಿ ಅವರು ಎಷ್ಟೇ ಹೊತ್ತಿಗೆ ಕರೆದರೂ ಅಲ್ಲಿರುತ್ತೇವೆ. ಯಾಕಂದ್ರೆ ಸ್ನೇಹಿತನ ಮೇಲೆ ಇರುವ ನಂಬಿಕೆ ಅಂತಹುದು, ಆದರೆ ಅದೆ ನಂಬಿಕೆಯನ್ನೇ ದುರುಪಯೋಗ ಪಡೆಸಿಕೊಂಡು ರಾಜಾಹುಲಿ ಸಿನಿಮಾ ಸ್ಟೈಲ್ ನಲ್ಲೇ ಸ್ನೇಹಿತನನ್ನು ‌ನಂಬಿಸಿ ದೂರದೂರಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಿ ಬಾರದೂರಿಗೆ ಕಳುಹಿಸಿಬಿಟ್ಟಿದ್ದಾರೆ..

ಯೆಸ್ ಹೀಗೆ ರಕ್ತದ ಮಡುವಿನಲ್ಲಿ‌ ಹೆಣವಾಗಿ‌ರುವ ಈ ಯುವಕನ ಹೆಸರು ಮಣಿ(30). ದಾವಣಗೆರೆ ನಗರದ ಕೆಬಿ ಬಡಾವಣೆಯಲ್ಲಿ ಸಣ್ಣದೊಂದು ಹೋಟೆಲ್‌ ಇಟ್ಟುಕೊಂಡಿದ್ದ, ಕೆಬಿ ಬಡಾವಣೆಯ ಅಭಿ ಹಾಗೂ ಅಣ್ಣಪ್ಪ‌ ಎಂಬ ಯುವಕರ ನಡುವೆ ಮೊದಲಿನಿಂದಲೂ ಅಗಾಧವಾದ ಸ್ನೇಹ ಇತ್ತು, ಇವರು ಎಲ್ಲೇ ಹೋದ್ರು ಜೊತೆಗೆ ಹೋಗ್ತಾ ಇದ್ರು ಬರ್ತಾ ಇದ್ರು. ಅಷ್ಟರಮಟ್ಟಿಗೆ ಇವರ ಸ್ನೇಹ ಬೆಳೆದಿತ್ತು, ಹೀಗಾಗಿ ಅಣ್ಣಪ್ಪನಿಗೆ ಮಣಿಕಂಠ ಫೈನಾನ್ಸ್ ಕೊಡಿಸಿದ್ದ ಆದರೆ ಈ ಸಾಲವನ್ನ ಕಟ್ಟಿರಲಿಲ್ಲ, ಜೊತೆಗೆ ಕೆಬಿ ಬಡಾವಣೆ ತೊರೆದಿದ್ದ, ಹೀಗಾಗಿ ಈ ಸಾಲ ಮಣಿಕಂಠನ ಮೇಲೆ ಬಿದ್ದಿತ್ತು, ಹಂತ ಹಂತವಾಗಿ ಮಣಿಕಂಠನೇ ಈ ಸಾಲ ತೀರಿಸಿದ್ದ, 15ದಿನದ ಹಿಂದೆ ಅಣ್ಣಪ್ಪ ಕೆಬಿ ಬಡಾವಣೆಗೆ ಬಂದಿದ್ದ, ಸಾಲ ತೆಗೆದುಕೊಂಡಿ ಹೋಗಿ ಕಟ್ಟದೇ ಊರು ಬಿಟ್ಟು ಹೋಗಿದ್ದೀಯಾ ಎಂದು ಮಣಿಕಂಠ ರೇಗಿದ್ದ, ಹೀಗಾಗಿ ಆಗಾಗ ಸಣ್ಣ ಪುಟ್ಟ ಕಿರಿಕ್ ನಡೀತಾ ಇತ್ತಂತೆ, ಇದರ ಜೊತೆಗೆ ಈ ಅಣ್ಣಪ್ಪ, ಒಂದಿನಾ ಮಣಿಕಂಠ‌ನ ಬೈಕನ್ನು ತೆಗೆದು ಕೊಂಡು ಬೇರೆಡೆ ಹೋಗಿದ್ದ ಆಗ ಮದ್ಯಪಾನ ಮಾಡಿ ಬೈಕ್ ಚಾಲನೆ ಮಾಡಿ ಬಂದಿದ್ದ, ಹೀಗಾಗಿ ಮಣಿಕಂಠನ ಮೇಲೆ ಕೇಸ್ ಆಗಿತ್ತು, ಇದ್ರಿಂದ ಇಬ್ಬರ ನಡುವೆ ಜಗಳಗಳು ನಡೀತಾಲೇ ಇದ್ದವು, ಈ ಜಗಳಗಳು ಸ್ನೇಹಿತರ ನಡುವೆ ದೊಡ್ಡ ಮಟ್ಟದ ಕಂದಕ ನಿರ್ಮಾಣ ಆಗುತ್ತಾ ಸಾಗಿದ್ದವು..

ಶುಕ್ರವಾರ ಸಂಜೆ ತ್ಯಾವಣಿ ಬಳಿ ದೇವರ ಊಟ ಇದೆ ಎಂದು ಅಭಿ ಆಟೋದಲ್ಲಿ ಮೂವರು ತೆರಳಿದ್ದಾರೆ ಎನ್ನಲಾಗಿದೆ, ರಾತ್ರಿ 10ಗಂಟೆ ವೇಳೆ ತನ್ನ ಪತ್ನಿ ಲತಾಳೊಂದಿಗೆ ಮೊಬೈಲ್ ನಲ್ಲಿ ಮಣಿಕಂಠ ಮಾತನಾಡಿದ್ದಾನೆ ಎನ್ನಲಾಗಿದೆ. ಅದಾಗಲೇ ಪಕ್ಕದಲ್ಲಿ ಅಭಿ, ಅಣ್ಣಪ್ಪನ ಗಲಾಟೆ ಶುರುವಾಗಿತ್ತಂತೆ, ಆಗ ಅಭಿಷೇಕನ ಧ್ವನಿಯು ಮಣಿಕಂಠನ ಪತ್ನಿ ಲತಾಗೆ ಕೇಳಿಸಿತ್ತಂತೆ, ಇವರ ಗಲಾಟೆ ಮಾಮೂಲಿ ಎಂದು ಪತ್ನಿ ಭಾವಿಸಿದ್ದರಂತೆ, ರಾತ್ರಿ ಅಲ್ಲಿ ಏನಾಯ್ತು ಗೊತ್ತಿಲ್ಲ ಬೆಳಕಾಗುವ ಅಷ್ಟರಲ್ಲಿ ಮಣಿಕಂಠ ಹೆಣವಾಗಿ ಬಿದ್ದಿದ್ದ.

ಸಾಸಲು ಪೆಟ್ರೋಲ್ ಬಂಕ್ ಬಳಿ ಕುಡಿದ ಮತ್ತಿನಲ್ಲಿ ಬಡಿದಾಡಿ ಕೊಂಡಿರುವ ಗೆಳೆಯರು, ಮಣಿಕಂಠನ
ತಲೆ‌ ಮತ್ತು ಮುಖಕ್ಕೆ ಪಾರ್ಕಿಂಗ್ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ, ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಎಂಟು ವರ್ಷದ ಹಿಂದೇ ಮಣಿಕಂಠ, ಕೆಬಿ ಬಡಾವಣೆಯ ಲತಾ ಎಂಬುವವರೊಂದಿಗೆ ಪ್ರೀತಿಸಿ ಮದುವೆಯಾಗಿದ್ದ, ಒಂದುವರೆ ವರ್ಷದ ಹಸುಗೂಸು ಹಾಗು ಐದು ವರ್ಷದ‌ ಮಗಳು ಅನಾಥರಾಗಿದ್ದಾರೆ..

ಈ‌ ಕೃತ್ಯವೆಸಗಿದ ಆರೋಪಿಗಳು ಉಂಡ ಮನೆಗೆ ದ್ರೋಹ‌ ಬಗೆದಿದ್ದಾರೆ. ಸ್ನೇಹಿತರು ಚೆನ್ನಾಗಿರಲಿ ಅಂತ‌ ಸಹಾಯ ಮಾಡಿದ‌ ಗಂಡನನ್ನೇ ಕೊಲೆ ಮಾಡಿದ್ದಾರೆ ಎಂದು ಪತ್ನಿ ಲತಾ ಆರೋಪಿಸಿದ್ದು, ಕೂಡಲೇ ಕೊಲೆ ಆರೋಪಿಗಳನ್ನ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಈ ಸಂಬಂಧ‌ ಚಿಕ್ಕಜಾಜೂರು ಪೊಲೀಸ್ ಠಾಣೆ ಪೊಲೀಸರು‌ ದೂರು ದಾಖಲಿಸಿಕೊಂಡಿದ್ದು ಅಭಿ, ಅಣ್ಣಪ್ಪನ್ನ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ..

ಒಟ್ಟಾರೆ ಮಣಿಕಂಠನ ಕೊಲೆ ಕೇಸಲ್ಲಿ‌ ಸ್ನೇಹಿತರ‌ ಕೈವಾಡವಿರುವ ಶಂಕೆ ಬಲವಾಗಿದ್ದು, ಹಣಕ್ಕಾಗಿ ನಡೀತಾ ಅಥವಾ ಈ ಕೊಲೆ ಮತ್ತೇನಾದರು ಬಲವಾದ ಕಾರಣವಿದಿಯೋ, ಬೇರೆ ಯಾವುದೋ ಹೆಣ್ಣಿನ ಸಂಬಂಧಕ್ಕಾಗಿ ಈ ಗಲಾಟೆ ನಡೀತಾ ಅನ್ನೋದು‌ ಮಾತ್ರ ನಿಗೂಢವಾಗಿದ್ದು, ಪೊಲೀಸರ ತನಿಖೆ ಬಳಿಕ ಸತ್ಯಾಸತ್ಯತೆ ತಿಳಿದು ಬರಬೇಕಾಗಿದೆ..

Tags: abhiannappachitradurgaDavanageremnikantamurderಅಣ್ಣಪ್ಪಅಭಿಕೊಲೆಚಿತ್ರದುರ್ಗದಾವಣಗೆರೆಮಣಿಕಂಠ

Related Posts

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!
Home

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

by Power Samachara News
May 14, 2025
0

POWER SAMACHARA | KANNADA NEWS | BREKING NEWS| 14-05-2025.. ದಾವಣಗೆರೆ: ಇತ್ತೀಚೆಗೆ ಬಂದಿದ್ದ ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಇಲ್ಲೊಬ್ಬ ಬ್ಯಾಂಕ್ ಸಿಬ್ಬಂದಿ...

Read more
ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

May 1, 2025
ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

April 30, 2025
ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

April 29, 2025
ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ

ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ

April 25, 2025
ಮೊಬೈಲ್ ಬಿಟ್ಟೆ, ಕಷ್ಟ ಮೆಟ್ಟಿ ನಿಂತೆ, ಯಶಸ್ಸಿನ ಮೆಟ್ಟಿಲು ಹತ್ತೆಬಿಟ್ಟೆ..!  ಕುರಿ ಮಂದೆಯಲ್ಲಿ ಸಾಧನೆಯ ಶಿಖರ ಏರಿದ ‘ಬೀರದೇವ’

ಮೊಬೈಲ್ ಬಿಟ್ಟೆ, ಕಷ್ಟ ಮೆಟ್ಟಿ ನಿಂತೆ, ಯಶಸ್ಸಿನ ಮೆಟ್ಟಿಲು ಹತ್ತೆಬಿಟ್ಟೆ..! ಕುರಿ ಮಂದೆಯಲ್ಲಿ ಸಾಧನೆಯ ಶಿಖರ ಏರಿದ ‘ಬೀರದೇವ’

April 25, 2025
ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!
Home

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

by Power Samachara News
May 14, 2025
0

POWER SAMACHARA | KANNADA NEWS | BREKING NEWS| 14-05-2025.. ದಾವಣಗೆರೆ: ಇತ್ತೀಚೆಗೆ ಬಂದಿದ್ದ ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಇಲ್ಲೊಬ್ಬ ಬ್ಯಾಂಕ್ ಸಿಬ್ಬಂದಿ...

Read more
ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

May 1, 2025
ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

April 30, 2025
ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

April 29, 2025
ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ

ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ

April 25, 2025
  • Home
  • ರಾಜ್ಯ
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಷ್ಟ್ರೀಯ ಸುದ್ದಿ

© 2023 Power Samachara -Design by Newbie Techy.

No Result
View All Result
  • Power Samachara

© 2023 Power Samachara -Design by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In